ಚರ್ಚಿನ ಪೂಜಾಸ್ಥಳದಲ್ಲಿ ಇಟ್ಟಿದ್ದ ಜೀಸಸ್ ಕ್ರೈಸ್ತ ಮೂರ್ತಿಯನ್ನು ದುಷ್ಕರ್ಮಿಗಳು ಧ್ವಂಸ ಮಾಡಿ ಕಾಣಿಕೆ ಡಬ್ಬಿಯಿಂದ ಹಣ ದೋಚಿರುವ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ನಡೆದಿದೆ. ಮೈಸೂರು: ಚರ್ಚಿನ ಪೂಜಾಸ್ಥಳದಲ್ಲಿ ಇಟ್ಟಿದ್ದ ಜೀಸಸ್ ಕ್ರೈಸ್ತ ಮೂರ್ತಿಯನ್ನು ದುಷ್ಕರ್ಮಿಗಳು ಧ್ವಂಸ ಮಾಡಿ ಕಾಣಿಕೆ ಡಬ್ಬಿಯಿಂದ ಹಣ ದೋಚಿರುವ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ನಡೆದಿದೆ.
ಈ ದುರ್ಘಟನೆ ನಡೆಯುವ ಸಂದರ್ಭದಲ್ಲಿ ಚರ್ಚಿನ ಪಾದ್ರಿ ಹೊರಹೋಗಿದ್ದರು. ಈ ವೇಳೆ ಚರ್ಚ್ ಬಳಿ ಬಂದ ದುಷ್ಕರ್ಮಿಗಳು ಕುಕೃತ್ಯವೆಸಗಿದ್ದಾರೆ. ಜೀಸಸ್ ನ ಮುಖ್ಯ ಮೂರ್ತಿಯನ್ನು ಮುಟ್ಟಿಲ್ಲ. ಘಟನೆ ಬಗ್ಗೆ ಎಲ್ಲಾ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದ್ದು ದುಷ್ಕರ್ಮಿಗಳ ಪತ್ತೆಗೆ ಶೋಧ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಚರ್ಚಿನ ಪೂಜಾಸ್ಥಳದಲ್ಲಿ ಇಟ್ಟಿದ್ದ ಜೀಸಸ್ ಕ್ರೈಸ್ತ ಮೂರ್ತಿಯನ್ನು ದುಷ್ಕರ್ಮಿಗಳು ಧ್ವಂಸ ಮಾಡಿ ಕಾಣಿಕೆ ಡಬ್ಬಿಯಿಂದ ಹಣ ದೋಚಿರುವ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ನಡೆದಿದೆ.@XpressBengaluru @Karthiknayaka @ShivascribeTNIE pic.twitter.com/lpblr86mRl
— kannadaprabha (@KannadaPrabha) December 28, 2022