Home Uncategorized ಅಗ್ನಿವೀರ್‌ಗೆ ಆಯ್ಕೆಯಾದ ಯುವಕನಿಗೆ ಗ್ರಾಮಸ್ಥರಿಂದ ಗೌರವ

ಅಗ್ನಿವೀರ್‌ಗೆ ಆಯ್ಕೆಯಾದ ಯುವಕನಿಗೆ ಗ್ರಾಮಸ್ಥರಿಂದ ಗೌರವ

18
0

ಧಾರವಾಡ: ದೇಶದ ಪ್ರತಿಯೊಬ್ಬ ಯುವಕರು ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸಬೇಕು ಎಂಬ ಆಸೆ ಇದೇ ಇರುತ್ತದೆ. ಅದರಲ್ಲಿ ಕೆಲವರಿಗೆ ಅವಕಾಶ ಸಿಗುತ್ತದೆ, ಇನ್ನೂ ಕೆಲವರಿಗೆ ಕಾರಣಾಂತರಗಳಿಂದ ಅವಕಾಶ ಸಿಗುವುದಿಲ್ಲ. ಆದರೆ ಇಲ್ಲೊಬ್ಬ ಯುವಕ ಅಗ್ನಿವೀರ ಯೋಜನೆಯಲ್ಲಿ ಭಾರತೀಯ ಸೈನ್ಯಕ್ಲೆ ಆಯ್ಕೆಯಾಗಿದ್ದು, ಗ್ರಾಮಸ್ಥರಲ್ಲಿ ಹಬ್ಬದ ವಾತಾವಾರಣ ನಿರ್ಮಾಣ ಮಾಡಿದೆ.

ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕಿನ ಮೊರಬ ಗ್ರಾಮದ ಕುಮಾರ ಸಿದ್ದಾರೂಢ ನಿಂಗಪ್ಪ ಗುಜ್ಜನ್ನವರ ಯುವಕನೇ ಅಗ್ನವೀರ ಯೋಜನೆಯಡಿ ಭಾರತೀಯ ಸೇನೆಗೆ ಆಯ್ಕೆಯಾಗಿದ್ದು, ಗ್ರಾಮದಲ್ಲಿ ಈ ಆಯ್ಕೆ ಹಬ್ಬದ ವಾತಾವರಣ ನಿರ್ಮಾಣ ಮಾಡಿದೆ.‌

ಅ.25ರಂದು ಸೇನೆಗೆ ಸೇರ್ಪಡೆಯಾಗಲು ಧಾರವಾಡ ಜಿಲ್ಲೆಯಿಂದ ಸಿದ್ದಾರೂಢ ನಿಂಗಪ್ಪ ಗುಜ್ಜನ್ನವರ ತೆರಳುತ್ತಿದ್ದಾನೆ. ಈ ಹಿನ್ನೆಲೆಯಲ್ಲಿ ಗ್ರಾಮದ ಹಿರಿಯರಾದ ಶಿವಪ್ಪ ಆಯಟಿಯವರು ಮನೆಗೆ ಕರೆಯಿಸಿಕೊಂಡು ಸನ್ಮಾನಿಸಿ ಹಿತ ವಚನಗಳನ್ನು ಹೇಳಿ ಗೌರವಿಸಿದರು. ಜೊತೆಗೆ ಯುವಕನ ಕುಟುಂಬಸ್ಥರು ಸೇರಿದಂತೆ ಸ್ನೇಹಿತರು ಕೂಡಾ ಯುವಕನಿಗೆ ಗೌರವಿಸಿ ಸನ್ಮಾನಿಸಿ ಧೈರ್ಯ ಮಾತುಗಳನ್ನು ಹೇಳಿ ಬುಧವಾರ ಬೀಳ್ಕೊಟ್ಟರು. ನಮ್ಮ ಕಡೆಯಿಂದಲೂ ಯುವಕನಿಗೆ ಆಲ್ದ ಬೇಸ್ಟ್……

The post ಅಗ್ನಿವೀರ್‌ಗೆ ಆಯ್ಕೆಯಾದ ಯುವಕನಿಗೆ ಗ್ರಾಮಸ್ಥರಿಂದ ಗೌರವ appeared first on Ain Live News.

LEAVE A REPLY

Please enter your comment!
Please enter your name here