ಮಂಗಳೂರು: ಕರ್ನಾಟಕ-ಕೇರಳ ಗಡಿ ಪ್ರದೇಶದ ಅಡ್ಕಸ್ಥಳದಲ್ಲಿರುವ ಇತಿಹಾಸ ಪ್ರಸಿದ್ಧ ಬಹುಮಾನ್ಯ ಮಶ್ಹೂರ್ ವಲಿಯುಲ್ಲಾಹಿ (ರ.ಅ) ಅವರ ದರ್ಗಾ ಶರೀಫ್ನಲ್ಲಿ ಎರಡು ವರ್ಷಗಳಿಗೊಮ್ಮೆ ನಡೆಸಿಕೊಂಡು ಬರುತ್ತಿರುವ ಉರೂಸ್ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಅಡ್ಕಸ್ಥಳ ಮಶ್ಹೂರ್ ನಗರದಲ್ಲಿ ಬುಧವಾರ ರಾತ್ರಿ ಆರಂಭಗೊಂಡಿತು.
ಉರೂಸ್ ಅಂಗವಾಗಿ ನಡೆಯಲಿರುವ 4 ದಿನಗಳ ಧಾರ್ಮಿಕ ಪ್ರವಚನವನ್ನು ಕುಂಬೋಳ್ನ ಸೆಯ್ಶದ್ ಮುಖ್ತಾರ್ ತಂಳ್ ಉದ್ಘಾಟಿಸಿದರು.
ಅಡ್ಕಸ್ಥಳ ಮುದರ್ರಿಸ್ ಅಬ್ದುಲ್ ನಾಸಿರ್ ಫೈಝಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ವಾಂಸ ಅಬ್ದುಲ್ ಗಫೂರ್ ಮೌಲವಿ ಕಿಚೇರಿ ಮುಖ್ಯ ಪ್ರವಚನ ನೀಡಿದರು. ಸದರ್ ಮುಅಲ್ಲಿಂ ಮುಹಮ್ಮದ್ ಶಮೀರ್ ಸಖಾಫಿ , ಸಾಬಿತ್ ಅಶ್ರಫಿ, ಸಹಾಯಕ ಖತೀಬ್ ಸಿರಾಜುದ್ದೀನ್ ಸಅದಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭ: ಫೆ.10ರಂದು ರಾತ್ರಿ, 7ಕ್ಕೆ ಉರೂಸ್ನ ಸಮಾರೋಪ ಸಮಾರಂಭ ನಡೆಯಲಿದೆ.