Home Uncategorized ಅಣ್ಣ- ತಂಗಿ ಅನುಮಾನಾಸ್ಪದ ಸಾವು..! ಅನೈತಿಕ ಸಂಬಂಧಕ್ಕೆ ಆಯ್ತಾ ಡಬಲ್ ಮರ್ಡರ್..!?

ಅಣ್ಣ- ತಂಗಿ ಅನುಮಾನಾಸ್ಪದ ಸಾವು..! ಅನೈತಿಕ ಸಂಬಂಧಕ್ಕೆ ಆಯ್ತಾ ಡಬಲ್ ಮರ್ಡರ್..!?

60
0

ವಿಜಯನಗರ: ನಮ್ಮ ಸಂಸ್ಕೃತಿಯಲ್ಲಿ ಅಣ್ಣ- ತಂಗಿಗೆ ಒಂದು ಪವಿತ್ರ ಸ್ಥಾನವಿದೆ. ಗೌರವವೂ ಹೆಚ್ಚಿದೆ. ಜಗತ್ತಿನಲ್ಲಿ ತಾಯಿ ಪ್ರೀತಿಯ ಬಳಿಕ ಅಣ್ಣ ತಂಗಿ ಸಂಬಂಧವೇ ಹೆಚ್ಚು ಅನ್ನೋದು ಲೋಕಾರೂಢಿ.. ಆದ್ರೆ ಇಲ್ಲಿ ಆ ಅಣ್ಣ ತಂಗಿ ಸಂಬಂಧವೇ ಅನೈತಿಕ ಮಾಡಿಕೊಂಡಿರೋ ಆ ಇಬ್ಬರು ಹೆಣವಾಗಿದ್ದಾರೆ. ಅದು ಎಲ್ಲಿ ಅಂತೀರಾ ಈ ಸ್ಟೋರಿ ನೋಡಿ.

ಗ್ರಾಮದಲ್ಲಿ ಬೆಳಿಗ್ಗೆ ಎದ್ದು ಬಹುತೇಕರು ನೀರು ತುಂಬುವುದು. ಜಾನುವಾರುಗಳಿಗೆ  ಮೇವು  ಹಾಕುತ್ತಿದ್ದರು.  ಅಲ್ಲೊಂದಿಬ್ಬರು ಸಾವನ್ನಪ್ಪಿದ್ದ ಸುದ್ದಿ ಹಬ್ಬಿತ್ತು. ಇದೊಂದು ರೀತಿಯಲ್ಲಿ  ಅನುಮಾನಾಸ್ಪದ ಸಾವು ಎಂದು ಪರಿಗಣಿಸಲಾಗಿತ್ತು. ಆದ್ರೆ ಮೇಲ್ನೋಟಕ್ಕೆ ಇದೊಂದು ಕೊಲೆ ಎಂಬುದನ್ನ ಸಣ್ಣ  ಮಕ್ಕಳು ಹೇಳ ಬಹುದಾಗಿತ್ತು.ಇಲ್ಲಿ  ಸಾವನ್ನಪ್ಪಿದವರು 35 ವರ್ಷದ ಕೊಟ್ರೇಶ್   ಹಾಗೂ  30  ವರ್ಷದ ಕಾವ್ಯಾ ಎಂಬ ಅಣ್ಣ ತಂಗಿಯರು. ಇದು ನಡೆದಿದ್ದು ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಚಿಗಟೇರಿ ಗ್ರಾಮದಲ್ಲಿ.

ಸಾವನ್ನಪ್ಪಿದ್ದ ಕಾವ್ಯಾಳ ಪತಿ ನಂದೀಶ್ ಹಾಗೂ  ಮಾವ ಜಾತಪ್ಪ ಅವರು ಪೊಲೀಸ್ ಠಾಣೆಗೆ ತೆರಳಿ  ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಇಬ್ಬರು ಎಂದು ಹೇಳಿ ದೂರು ನೀಡಲು ಹೋಗಿದ್ದರು. ಆದ್ರೆ  ಶವವನ್ನ ನೋಡಿದ  ಚಿಗಟೇರಿ ಪೊಲೀಸರಿಗೆ ಸಂಶಯ ಬಂದು  ಪಕ್ಕದ ಕೊಟ್ಟೂರಿನಿಂದ  ಕಾವ್ಯಾಳ ತಾಯಿ  ಜಿ. ಬಸಮ್ಮ ಅವರಿಂದ ದೂರು  ಸ್ವೀಕರಿಸಿ ತನಿಖೆ ಮಾಡಿದಾಗ ಸತ್ಯ ಬೆಳಕಿಗೆ  ಬಂದಿದೆ.  ಕಾವ್ಯಾಳ ಪತಿ ನಂದೀಶ್ ಹಾಗೂ ಮಾವ ಜಾತಪ್ಪ ಸೇರಿ ಇಬ್ಬರ ಕುತ್ತಿಗೆ  ಒತ್ತಿ  ಉಸಿರು ಗಟ್ಟಿಸಿ ಕೊಲೆ ಮಾಡಿದ್ದಾರೆ. ಕಾರಣ ಕಾವ್ಯಾಳ ಶೀಲದ ಮೇಲೆ ಶಂಕೆ.  ವಿಚಿತ್ರ ನೋಡಿ ಕೊಲೆಗಡುಕರು ಸ್ವತ: ಅಣ್ಣನ ಜೊತೆ  ತಂಗಿ ಅನೈತಿಕ ಸಂಬಂಧ ಇಟ್ಟಿಕೊಂಡಿದ್ದಾಳೆ ಎಂದು  ಶಂಕೆ ವ್ಯಕ್ತ ಪಡಿಸಿ ಕೊಲೆ ಮಾಡಿದ್ದಾರೆ.

ಅಣ್ಣ ತಂಗಿ ಸಾವಿನ ಪ್ರಕರಣಕ್ಕೆ  ಹೊಸ ತಿರುವು ಸಿಕ್ಕಿದೆ.  ಕೊಲೆ ಪ್ರಕರಣವನ್ನ 12 ಗಂಟೆಯೊಳಗೆ  ಪ್ರಕರಣ ಪತ್ತೆ ಹಚ್ಚಿದ್ದಾರೆ ಹರಪನಹಳ್ಳಿ‌  ತಾಲೂಕಿನ ಚಿಗಟೇರಿ ಪೊಲೀಸರು. ಕೊಲೆಯಾದ ಮಹಿಳೆ ಕಾವ್ಯಾ ತನ್ನ ತವರಿನಲ್ಲಿ ಇನ್ನೊಬ್ಬರ ಜೊತೆ  ಅನೈತಿಕ ಸಂಬಂಧ ಹಾಗೂ ಸ್ವತ: ಅಣ್ಣನ ಜೊತೆ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಶಂಕೆ  ಕೂಡಾ ವ್ಯಕ್ತಿಸಿದ್ದಾರೆ. ಕಳೆದ  ಒಂಭತ್ತು ವರ್ಷದ ಹಿಂದೆ ಕೊಟ್ಟೂರಿನ ಕಾವ್ಯಾಳನ್ನ ಚಿಗಟೇರಿಯ  ನಂದೀಶ್ ಗೆ ಕೊಟ್ಟು ಮದ್ವೆ ಮಾಡಲಾಗಿತ್ತು. ತಂಗಿಯ ಮೇಲೆ ಅಣ್ಣ ನಂದೀಶ್ ಬಂದಿದ್ದ.  ಇರುವುದು ಒಂದೇ ಹಾಲು  ಅದರಲ್ಲಿ ಅಣ್ಣ ತಂಗಿ ಮಲಗಿದ್ದರು. ಸ್ವತ:  ಅಣ್ಣನ ಜೊತೆ   ಅನೈತಿಕ ಸಂಬಂಧ ಇಟ್ಟಿಕೊಂಡಿದ್ದಾಳೆ ಎಂಬುದು ಕೊಲೆ ಮಾಡಿದ ದುಷ್ಟರ ಆರೋಪ.  ಇದನ್ನ ಕೇಳಿದ ಕಾವ್ಯಾಳ  ತಾಯಿಗೆ ಆಕಾಶವೇ ಕಳಚಿ ಮೇಲೆ ಬಿದ್ದಂತಾಗಿತ್ತು.

ಮನೆಯಲ್ಲಿ ಮಲಗಿದ್ದರು ಅಣ್ಣ ಕೊಟ್ರೇಶ್ – ತಂಗಿ ಕಾವ್ಯಾಳ ಕುತ್ತಿಗೆ ಒತ್ತಿ ಉಸಿರು ಗಟ್ಟಿಸಿ ಕೊಲೆ ಮಾಡಲಾಗಿದೆ. ಕಾವ್ಯಾಳ ಪತಿ ನಂದೀಶ್ ಹಾಗೂ ಕಾವ್ಯಾಳ ಮಾವ ಜಾತಪ್ಪನಿಂದ ಕೊಲೆ ಮಾಡಿ  ಬೆಳಿಗ್ಗೆ ಪೊಲೀಸ್ ಠಾಣೆಗೆ ಹೋಗಿದ್ದಾರೆ. ಇಬ್ಬರು ಆರೋಪಿಗಳನ್ನ ವಶಕ್ಕೆ ಪಡೆದಿದ್ದಾರೆ ಚಿಗಟೇರಿ ಪೊಲೀಸರು. ವಿಜಯನಗರ ಎಸ್ಪಿ ಹರಿಬಾಬು ಹಾಗೂ ಹರಪನಹಳ್ಳಿ ಡಿವೈಎಸ್ಪಿ  ರಾಜಾ ವೆಂಕಟಪ್ಪ ನಾಯಕ  ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

The post ಅಣ್ಣ- ತಂಗಿ ಅನುಮಾನಾಸ್ಪದ ಸಾವು..! ಅನೈತಿಕ ಸಂಬಂಧಕ್ಕೆ ಆಯ್ತಾ ಡಬಲ್ ಮರ್ಡರ್..!? appeared first on Ain Live News.

LEAVE A REPLY

Please enter your comment!
Please enter your name here