Home Uncategorized ಅತ್ತಿಬೆಲೆ ಪಟಾಕಿ ದುರಂತ ಕೇಸ್: ಲೈಸೆನ್ಸ್ʼ ಗಾಗಿ ಸರ್ಕಾರಿ ಅಧಿಕಾರಿಗಳು ಶಾಮೀಲು

ಅತ್ತಿಬೆಲೆ ಪಟಾಕಿ ದುರಂತ ಕೇಸ್: ಲೈಸೆನ್ಸ್ʼ ಗಾಗಿ ಸರ್ಕಾರಿ ಅಧಿಕಾರಿಗಳು ಶಾಮೀಲು

43
0

ಬೆಂಗಳೂರು ಗ್ರಾಮಾಂತರ: ಅತ್ತಿಬೆಲೆ ಪಟಾಕಿ ದುರಂತದಲ್ಲಿ ಸಾಕಷ್ಟು ಲೋಪದೋಷಗಳು ಕಂಡುಬಂದಿದೆ. ಅಲ್ಲದೆ ಪರವಾನಿಗೆ ಪಡೆಯಲು ಸರ್ಕಾರಿ ಅಧಿಕಾರಿಗಳೇ ಶಾಮಿಲು ಆಗಿದ್ದರೆ ಅಂತ ಆರೋಪ ಕೇಳಿ ಬಂದಿದೆ !? ಅಧಿಕಾರಿಗಳನ್ನು ರಕ್ಷಣೆ ಮಾಡಲು ನಡೆದಿದೆ ಹುನ್ನಾರ.!? ಅದರ ನಡುವೆಯೂ ಲಂಚದ ಆಸೆಗೆ ನಿಯಮಗಳನ್ನ ಗಾಳಿಗೆ ತೂರಿ ಎನ್‌ಓಸಿ ಕೊಟ್ಟರಾ!? ಇಂದು ಕೂಡ ಸಿಐಡಿ ಪ್ರಾಥಮಿಕ ವರದಿಯಲ್ಲಿ ಏನೆಲ್ಲಾ ಪರಿಶೀಲನೆ ಮಾಡಲಾಯಿತು ಯಾರು ಬಂದಿದ್ದರು! ಇಲಾಖೆ ಅಧಿಕಾರಿಗಳಿಗೆ ತಲೆದಂಡಾಗುತ್ತಾ ಘಟನಾ ಸ್ಥಳದಲ್ಲಿ ಇವತ್ತಲ್ಲ ಏನೆಲ್ಲ ಬೆಳವಣಿಗೆ ನಡೀತು ಅನ್ನೋದ್ರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

Brand Bengaluru: ‘ಬ್ರ್ಯಾಂಡ್ ಬೆಂಗಳೂರು ಸಮ್ಮೇಳನ’ ನಾಗರಿಕರ ಧ್ವನಿಯೇ ಸರ್ಕಾರದ ಧ್ವನಿ: ಡಿ.ಕೆ.ಶಿವಕುಮಾರ್

ಹೌದು ಅತ್ತಿಬೆಲೆ ಪಟಾಕಿ ದುರಂತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಅತ್ತಿಬೆಲೆ ಪೊಲೀಸರಿಂದ ಅಧಿಕೃತವಾಗಿ ಸಿಐಡಿ ಎಸ್ ಪಿ ವೆಂಕಟೇಶ್ ಅವರಿಗೆ ತನಿಖೆ ಜವಾಬ್ದಾರಿಯನ್ನು ವಹಿಸಲಾಯಿತು ಅದರ ಮುಂದುವರಿದ ಭಾಗವಾಗಿ ಸಿಐಡಿಐಜಿಪಿ ಧುಕರ್ ಪವರ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದಾರೆ ಅಲ್ಲದೆ ಸಂಪೂರ್ಣ‌ಮಾಹಿತಿ ಕಲೆ ಹಾಕಿದ್ದಾರೆ ಮೇಲ್ನೋಟಕ್ಕೆ ಮತ್ತು ಪ್ರಾಥಮಿಕ ವರದಿಯಲ್ಲಿ ಲೈಸೆನ್ಸ್ ಗಾಗಿ ಮತ್ತು ಪರವಾನಿಗೆ ಕೊಟ್ಟಿರುವ ಬಗ್ಗೆ ಪೊಲೀಸ್ ತನಿಕೆಯಲ್ಲಿ ಬೆಳಕಿಗೆ ಬಂದಿದೆ ಅಲ್ಲದೆ ಒಂದೇ ಅಂಗಡಿಗೆ ಎರಡು ಪರವಾನಿಗೆ ಕೊಟ್ಟಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.. ಇನ್ನು ಈ ದುರಂತ ನಡೆದ ಬಳಿಕ ಅಕ್ರಮವಾಗಿ ಪಡೆದುಕೊಂಡಿದ್ದ ಲೈಸೆನ್ಸ್ ಹಳೆ ಡೇಟಿಗೆ ಅಂಗಡಿ ಮಾಲೀಕರು ಪರವಾನಿಗೆ ಪಡೆದುಕೊಂಡಿರುವ ಬಗ್ಗೆ ಆರೋಪ ಸಹ ಕೇಳಿ ಬರುತ್ತಿದೆ.. ಈ ಬಗ್ಗೆ ಕೂಡ ಸಿಐಡಿ ಅಧಿಕಾರಿಗಳು ಇಂಚಿಂಚು ಮಾಹಿತಿ ಕಲೆಯಾಗುತ್ತಿದ್ದಾರೆ. ಇನ್ನು ಪಟಾಕಿ ಅಂಗಡಿಯನ್ನ ಇಡಲು 25 ಮಾನದಂಡಗಳನ್ನು ಪಾಲನೆ ಮಾಡಬೇಕಾಗಿತ್ತು ಆದರೆ ಇದ್ಯಾವುದು ನಿಯಮಗಳನ್ನ ಪಾಲನೆ ಮಾಡಿಲ್ಲ ಇದರಲ್ಲಿ ಕಂದಾಯ ಇಲಾಖೆ ಪರಿಸರ ಮಾಲಿನ್ಯ ಬೆಸ್ಕಾಂ ಪುರಸಭೆ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಸಿಐಡಿ ಅಧಿಕಾರಿಗಳ ತನಿಕೆಯಿಂದಾಗಿ ತಲೆ ತಂಡಾಗುತ್ತ ಅನ್ನೋದನ್ನ ತನಿಖೆಯಲ್ಲಿ ಗೊತ್ತಾಗಬೇಕಿದೆ

ವಾಯ್ಸ್: ಇನ್ನು ಜಿಲ್ಲಾಡಳಿತ ಆದೇಶದ ಮೇರೆಗೆ ಪುರಸಭೆ ಮುಖ್ಯ ಅಧಿಕಾರಿ ಹೊಸ ನೀತಿ ಆದೇಶ ನೀಡಿದ ಹಿನ್ನೆಲೆಯಲ್ಲಿ
ಪಟಾಕಿ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲ ನಡೆಸಿದರು ಹಸಿರು ಪಟಾಕಿ ಹೊರತುಪಡಿಸಿ ಬೇರೆ ಪಟಾಕಿಗಳಿದ್ದರೆ ಸಿಜ್ ಮಾಡುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ . ಅಲ್ಲದೆ ಅತ್ತಿಬೆಲೆ ಪಟಾಕಿ ಅಂಗಡಿಗಳು ಏಳು ಕಾಯಂ ಅಂಗಡಿಗಳಿದ್ದು ಯಾವುದೇ ಹೊಸ ಪಟಾಕಿ ಅಂಗಡಿಗಳಿಗೆ ಲೈಸೆನ್ಸ್ ಕೊಡುತ್ತಿಲ್ಲ .ಇನ್ನೂ ಪಟಾಕಿ ಅಂಗಡಿಗಳಲ್ಲಿ ಸಿಲಿಂಡರ್ ಲೈಟ್ ಲ್ಯಾಂಪ್ ಇರುವುದರ ಬಗ್ಗೆ ಪರಿಶೀಲನೆಯಲ್ಲಿ ಬೆಳಕಿಗೆ ಬಂದಿದೆ.

ಒಟ್ನಲ್ಲಿ ಅತ್ತಿಬೆಲೆ ಪಟಾಕಿ ದುರಂತ ಪ್ರಕರಣದಲ್ಲಿ ಸಿಐಡಿ ಅಧಿಕಾರಿ ಹೃತ್ವಿಕ್ ಶಂಕರ್ ಅವರು ಸಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸುತ್ತಿದ್ದಾರೆ. ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದು ಮಾಹಿತಿ ಕಲೆ ಹಾಕುತ್ತಿದ್ದು ತನಿಖೆಯ ನಂತರ ಸತ್ಯ ಸತ್ಯತೆ ತಿಳಿದು ಬರಲಿದೆ

The post ಅತ್ತಿಬೆಲೆ ಪಟಾಕಿ ದುರಂತ ಕೇಸ್: ಲೈಸೆನ್ಸ್ʼ ಗಾಗಿ ಸರ್ಕಾರಿ ಅಧಿಕಾರಿಗಳು ಶಾಮೀಲು appeared first on Ain Live News.

LEAVE A REPLY

Please enter your comment!
Please enter your name here