ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರವಿಂದ್ ಬೆಲ್ಲದ್ ಭಾನುವಾರ ತಮ್ಮ ನಿವಾಸದಲ್ಲಿ ಸಮ್ಗರ್ (ಚಮ್ಮಾರ) ಸಮುದಾಯದ ನಿಯೋಗವು ಉಡುಗೊರೆಯಾಗಿ ನೀಡಿದ ಪಾದರಕ್ಷೆಯನ್ನು ತಮ್ಮ ತಲೆಯ ಮೇಲೆ ಇರಿಸಿಕೊಂಡಿದ್ದು ಎಲ್ಲರ ಹುಬ್ಬೇರುವಂತೆ ಮಾಡಿದೆ. ಧಾರವಾಡ: ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರವಿಂದ್ ಬೆಲ್ಲದ್ ಭಾನುವಾರ ತಮ್ಮ ನಿವಾಸದಲ್ಲಿ ಸಮ್ಗರ್ (ಚಮ್ಮಾರ) ಸಮುದಾಯದ ನಿಯೋಗವು ಉಡುಗೊರೆಯಾಗಿ ನೀಡಿದ ಪಾದರಕ್ಷೆಯನ್ನು ತಮ್ಮ ತಲೆಯ ಮೇಲೆ ಇರಿಸಿಕೊಂಡಿದ್ದು ಎಲ್ಲರ ಹುಬ್ಬೇರುವಂತೆ ಮಾಡಿದೆ.
ಬೆಲ್ಲದ್ ಅವರ ಈ ಕೆಲಸಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ವಲಯಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಅವರನ್ನು ಹೊಗಳಿದರೆ ಇನ್ನು ಕೆಲವರು ಇದೊಂದು ರಾಜಕೀಯ ಗಿಮಿಕ್ ಎಂದಿದ್ದಾರೆ.
ಉಡುಗೊರೆಯನ್ನು ಗೌರವಿಸಬೇಕು ಆದರೆ ಅದನ್ನು ಮುಚ್ಚಿದ ಬಾಗಿಲುಗಳಲ್ಲಿ ಮಾಡಬಹುದಿತ್ತು. ಅವರು ಮತದಾರರನ್ನು ಆಕರ್ಷಿಸಲು ಮಾಡಿರುವ ಗಿಮಿಕ್ ಆಗಿದೆ ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವಷ್ಟು ಜನಮನ್ನಣೆ ಹೊಂದಿರುವುದರಿಂದ ಪ್ರಚಾರಕ್ಕಾಗಿ ಇಂತಹ ಕೆಲಸಗಳನ್ನು ಮಾಡುವ ಅಗತ್ಯವಿಲ್ಲ ಎಂದು ಬೆಲ್ಲದ್ ಅನುಯಾಯಿಗಳು ತಮ್ಮ ನಾಯಕನನ್ನು ಸಮರ್ಥಿಸಿಕೊಂಡಿದ್ದಾರೆ.
ಇದನ್ನೂ ಓದಿ: ರಾಮನಗರದಿಂದ ನಾಲ್ವರು ಸಿಎಂ ಆಗಿದ್ದಾರೆ, ನನಗೂ ಅವಕಾಶ ಕೊಡಿ: ಡಿಕೆ.ಶಿವಕುಮಾರ್
ನಾನು ರಾಜಕೀಯವಾಗಿ, ಆರ್ಥಿಕವಾಗಿ, ಕೌಶಲ್ಯ ಅಭಿವೃದ್ಧಿ ಕೋರ್ಸ್ಗಳು ಮತ್ತು ಅವರಿಗಾಗಿ ಆಡಿಟೋರಿಯಂಗಳನ್ನು ನಿರ್ಮಿಸುವುದು ಸೇರಿದಂತೆ ಅನೇಕ ರೀತಿಯಲ್ಲಿ ಸಮುದಾಯಕ್ಕೆ ಸಹಾಯ ಮಾಡಿದ್ದೇನೆ. ಇದರಿಂದಾಗಿ ನಾನು ಮಾಡಿದ ಎಲ್ಲಾ ಕೆಲಸಕ್ಕೂ ಧನ್ಯವಾದ ಹೇಳಿದರು. ಅವರಿಂದ ಉಡುಗೊರೆಯನ್ನು ಸ್ವೀಕರಿಸುವುದರಿಂದ ಅವರ ಭಾವನಾತ್ಮಕ ಮನಸ್ಸುಗಳಿಗೆ ಸಂತೋಷವಾಗಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಅರವಿಂದ್ ಬೆಲ್ಲದ್ ತಿಳಿಸಿದ್ದಾರೆ.
ಮತದಾರರನ್ನು ಸೆಳೆಯಲು ನನಗೆ ಯಾವುದೇ ಸ್ಟಂಟ್ಗಳ ಅಗತ್ಯವಿಲ್ಲ. ಮತದಾರರು ಬುದ್ಧಿವಂತರು ಮತ್ತು ನೈಜ ಮತ್ತು ನಕಲಿ ಭಾವನೆಗಳ ನಡುವೆ ವ್ಯತ್ಯಾಸವನ್ನು ಪತ್ತೆ ಮಾಡುತ್ತಾರೆ. ಉಡುಗೊರೆ ನನಗೆ ಆಶ್ಚರ್ಯ ತಂದಿತು ಮತ್ತು ಅದನ್ನು ನನಗೆ ಕೊಟ್ಟಾಗ ನಾನು ಮೂಕ ವಿಸ್ಮಿತನಾದೆ ಎಂದು ಅವರು ಹೇಳಿದರು.
ಇದನ್ನೂ ಓದಿ: ರಾಮನಗರದಿಂದ ನಾಲ್ವರು ಸಿಎಂ ಆಗಿದ್ದಾರೆ, ನನಗೂ ಅವಕಾಶ ಕೊಡಿ: ಡಿಕೆ.ಶಿವಕುಮಾರ್
ಸಮ್ಗಾರ ಸಮಾಜದ ಮುಖಂಡರು ಮಾತನಾಡಿ, ಶಾಸಕರು ಸಾಕಷ್ಟು ಕೆಲಸ ಮಾಡಿದ್ದು, ಅವರಿಗೆ ಕೃತಜ್ಞತೆ ಸಲ್ಲಿಸುವುದು ನಮ್ಮ ಕರ್ತವ್ಯ ಎಂದರು. “ನಾವು ತಲೆಮಾರುಗಳಿಂದ ಚರ್ಮದ ಉತ್ಪನ್ನಗಳನ್ನು ತಯಾರಿಸುತ್ತಿರುವ ಕಾರಣ ನಾವು ಅವರಿಗೆ ಪಾದರಕ್ಷೆಗಳನ್ನು ಉಡುಗೊರೆಯಾಗಿ ನೀಡಲು ನಿರ್ಧರಿಸಿದ್ದೇವೆ. ಅವರ ಹಾವಭಾವದಿಂದ ನಾವು ವಿನಮ್ರರಾಗಿದ್ದೇವೆ” ಎಂದು ಅವರಲ್ಲಿ ಒಬ್ಬರು ಹೇಳಿದರು.