ಆನೇಕಲ್ ;-ಪಟ್ಟಣದಲ್ಲಿ ಮತ್ತೇ ಪುಡಿ ರೌಡಿಗಳು ಅಟ್ಟಹಾಸ ಮೆರೆದಿದ್ದಾರೆ. ರಾಮಚಂದ್ರರಾವ್ ಎಂಬಾತನ ಮೇಲೆ ಅಟ್ಯಾಕ್ ನಡೆದಿದ್ದು, ಬೈಕ್ ನಲ್ಲಿ ಬಂದಿದ್ದ ಮೂವರು ದುಷ್ಕರ್ಮಿಗಳಿಂದ ಕೃತ್ಯ ನಡೆದಿದೆ. ಮಗುವಿನೊಂದಿಗೆ ವಾಕ್ ಮಾಡುತ್ತಿದ್ದ ವೇಳೆ ದುಷ್ಕರ್ಮಿಗಳು ಅಟ್ಯಾಕ್ ಮಾಡಿದ್ದಾರೆ.
ಈ ಮೈ ನಡುಗಿಸುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಈ ದೃಶ್ಯಗಳನ್ನು ಕಂಡು ಪಟ್ಟಣದ ಜನತೆ ಬೆಚ್ಚಿದ್ದಾರೆ. ಆನೇಕಲ್ ಪಟ್ಟಣದ ಮಿರ್ಜಾ ರಸ್ತೆಯ ಭೀಮ್ ರಾವ್ ಲೇವೆಟ್ನನಲ್ಲಿ ನಡೆದ ಘಟನೆ ಜರುಗಿದೆ. ಕೂದಲೇಳೆ ಅಂತರದಲ್ಲಿ ರಾಮಚಂದ್ರ ರಾವ್ ಬಚಾವ್ ಆಗಿದ್ದಾರೆ. ಬೈಕ್ ನಲ್ಲಿ ಬಂದು ದುಶ್ಕರ್ಮಿಗಳು ಏಕಾಏಕಿ ಲಾಂಗ್ ಬೀಸಿದ್ದಾರೆ.
ಲಾಂಗ್ ಬೀಸಿದ ಸಿದ್ದಾರ್ಥ ಮತ್ತು ದರ್ಶನ್ ಆನೇಕಲ್ ಪೊಲೀಸರ ವಶಕ್ಕೆ ಪಡೆಯಲಾಗಿದೆ.
ಮೂವರಲ್ಲಿ ಇನ್ನೊಬ್ಬ ಅನಿಲ್ ಎಂಬುವವನು ಎಸ್ಕೇಪ್ ಆಗಿದ್ದು, ರಾಮಚಂದ್ರ ಮೀಸ್ಸಾಗಿದ್ದಕ್ಕೆ ಅಂಗಡಿಯ ಗಾಜುಗಳನ್ನ ಪುಡಿ ರೌಡಿಗಳು ಪುಡಿ ಮಾಡಿದ್ದಾರೆ. ಹುಡುಗಿಯರನ್ನು ಚುಡಾಯಿಸುತ್ತಿದ್ದಕ್ಕೆ ರಾಮಚಂದ್ರ ಬುದ್ದಿ ಹೇಳಿದ್ದ. ಆನೇಕಲ್ ಪೊಲೀಸರು ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ
The post ಆನೇಕಲ್ ನಲ್ಲಿ ನಿಲ್ಲದ ಪುಂಡರ ಅಟ್ಟಹಾಸ; ವಾಕ್ ಮಾಡ್ತಿದ್ದ ವ್ಯಕ್ತಿ ಮೇಲೆ ಏಕಾಏಕಿ ಅಟ್ಯಾಕ್ appeared first on Ain Live News.