ಒಂದು ದಶಕದ ಹಿಂದೆ ಬಳ್ಳಾರಿಯಲ್ಲಿ ಕಬ್ಬಿಣ ಮತ್ತು ಉಕ್ಕು ಕೈಗಾರಿಕೆಗಾಗಿ ಉಕ್ಕು ಉತ್ಪಾದಕ ಆರ್ಸೆಲರ್ ಮಿತ್ತಲ್ಗೆ ಕೆಐಎಡಿಬಿಯಿಂದ ಹಂಚಿಕೆ ಮಾಡಿದ್ದ ಸುಮಾರು 5,000 ಎಕರೆ ಭೂಮಿಯನ್ನು ರಾಜ್ಯ ಸರ್ಕಾರ ವಾಪಸ್ ಪಡೆಯಲಿದೆ… ಬೆಳಗಾವಿ: ಒಂದು ದಶಕದ ಹಿಂದೆ ಬಳ್ಳಾರಿಯಲ್ಲಿ ಕಬ್ಬಿಣ ಮತ್ತು ಉಕ್ಕು ಕೈಗಾರಿಕೆಗಾಗಿ ಉಕ್ಕು ಉತ್ಪಾದಕ ಆರ್ಸೆಲರ್ ಮಿತ್ತಲ್ಗೆ ಕೆಐಎಡಿಬಿಯಿಂದ ಹಂಚಿಕೆ ಮಾಡಿದ್ದ ಸುಮಾರು 5,000 ಎಕರೆ ಭೂಮಿಯನ್ನು ರಾಜ್ಯ ಸರ್ಕಾರ ವಾಪಸ್ ಪಡೆಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ ವಿಧಾನಸಭೆಗೆ ತಿಳಿಸಿದ್ದಾರೆ.
ಇಂದು ವಿಧಾನಸಭೆಯಲ್ಲಿ ವಿಶೇಷ ಹೂಡಿಕೆ ಪ್ರದೇಶ ಮಸೂದೆ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತಮಾಡಿದ ಸಿಎಂ, ಆರ್ಸೆಲರ್ ಮಿತ್ತಲ್ ಕಾರ್ಯಕಾರಿ ಅಧ್ಯಕ್ಷ ಲಕ್ಷ್ಮಿ ಮಿತ್ತಲ್ ಅವರನ್ನು ಇತ್ತೀಚೆಗೆ ಭೇಟಿ ಮಾಡಿದ್ದು, ಆ ವೇಳೆ ಭೂಮಿ ವಿಚಾರ ಪ್ರಸ್ತಾಪಿಸಿದೆ ಮತ್ತು ಭೂಮಿ ಸದ್ಬಳಕೆ ಮಾಡಿಕೊಳ್ಳಿ ಇಲ್ಲವೆ ವಾಪಸ್ ನೀಡಿ ಎಂದು ಅವರಿಗೆ ಹೇಳಿದೆ ಎಂದರು.
ಇದನ್ನು ಓದಿ: ನವದೆಹಲಿ: ಸಚಿವ ಸಂಪುಟ ವಿಸ್ತರಣೆ ಸೇರಿ ಹಲವು ವಿಚಾರ ಕುರಿತು ವರಿಷ್ಠರೊಂದಿಗೆ ವಿಸ್ತೃತ ಚರ್ಚೆ- ಸಿಎಂ ಬೊಮ್ಮಾಯಿ
ಆದರೆ ಅವರು ಪರ್ಯಾಯ ಯೋಜನೆ ರೂಪಿಸುವುದಾಗಿ ಹೇಳಿದರು. ಹೀಗಾಗಿ ಅವರಿಗೆ ನೋಟಿಸ್ ನೀಡಿದ್ದೇವೆ. ಮಿತ್ತಲ್ ಗೆ ಹಂಚಿಕೆಯಾದ 5,000 ಎಕರೆ ಭೂಮಿಯನ್ನು ವಾಪಸ್ ಪಡೆಯುತ್ತೇವೆ ಎಂದು ಬೊಮ್ಮಾಯಿ ತಿಳಿಸಿದರು.
2010 ರಲ್ಲಿ, ಬಳ್ಳಾರಿಯ ಕುಡಿತಿನಿ ಮತ್ತು ಹರಗಿನದೋಣಿ ಗ್ರಾಮಗಳಲ್ಲಿ ಸ್ಟೀಲ್ ಪ್ಲಾಂಟ್ಗಾಗಿ ರಾಜ್ಯ ಸರ್ಕಾರ ಸುಮಾರು 5,000 ಎಕರೆ ಭೂಮಿ ಹಂಚಿಕೆ ಮಾಡಿತ್ತು. ಈ ಜಾಗದಲ್ಲಿ ಆರ್ಸೆಲರ್ ಮಿತ್ತಲ್ 30,000 ಕೋಟಿ ರೂಪಾಯಿ ಹೂಡಿಕೆಯೊಂದಿಗೆ ಉಕ್ಕು ಕಾರ್ಖಾನೆ ಸ್ಥಾಪಿಸುವುದಾಗಿ ಹೇಳಿತ್ತು.