ಧಾರವಾಡ: ಇಸ್ರೇಲ್ ಹಾಗೂ ಫ್ಯಾಲೆಸ್ತೇನ್ ಹಮಾಸ್ ಉಗ್ರರ ನಡುವೆ ಯುದ್ಧ ನಡೆಯುತ್ತಿದ್ದು, ಇಸ್ರೇಲ್ ದೇಶದಲ್ಲಿ ಧಾರವಾಡದ ಸಹಾಯಕ ಪ್ರಾಧ್ಯಾಪಕರೊಬ್ಬರು ಸಿಲುಕಿಕೊಂಡಿದ್ದಾರೆ. ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಸುಮೇಶ್ ಎನ್ನುವವರು ಇಸ್ರೇಲ್ ದೇಶದ ಜೇರುಸೇಲಂ ನಗರದ ಹೆಬ್ರು ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿದ್ದ ಹವಾಮಾನ ಶಾಸ್ತ್ರ
ಕುರಿತ ತರಬೇತಿಗೆ ತೆರಳಿದ್ದರು. ಆಗಸ್ಟ್ 7 ರಿಂದ ತರಬೇತಿ ಸಹ ಆರಂಭಗೊಂಡಿತ್ತು. ಈ ತರಬೇತಿ ಅಕ್ಟೋಬರ್ 22ರ ವರೆಗೆ ನಡೆಯಬೇಕಿತ್ತು. ಆದರೆ, ಅಲ್ಲಿ ಯುದ್ಧ ಆರಂಭವಾಗಿದ್ದರಿಂದ ತರಬೇತಿ ರದ್ದುಗೊಳಿಸಲಾಗಿದೆ. ಇದರಿಂದ ಧಾರವಾಡದ ಸಹಾಯಕ ಪ್ರಾಧ್ಯಾಪಕ ಸುಮೇಶ್ ಅವರು ಜೇರುಸೇಲಂನ ಲಾಡ್ಜ್ ಒಂದರಲ್ಲಿ ಉಳಿದುಕೊಂಡಿದ್ದಾರೆ.
Home remedies: ಚಳಿಗಾಲದಲ್ಲಿ ಕಿವಿ ನೋವು ನಿವಾರಿಸಲು ಇಲ್ಲಿದೆ ಮನೆಮದ್ದು!
ಸದ್ಯ ಸುಮೇಶ್ ಅವರು ಸುರಕ್ಷಿತವಾಗಿದ್ದು, ಒಂದು ವಾರಕ್ಕೆ ಆಗುವಷ್ಟು ಆಹಾರವನ್ನು ಸಂಗ್ರಹಿಸಿ ಇಟ್ಟುಕೊಂಡಿದ್ದಾರೆ. ಸುಮೇಶ್ ಅವರೊಂದಿಗೆ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಪಿ.ಎಲ್.ಪಾಟೀಲ ಅವರು ನಿರಂತರ ಸಂಪರ್ಕದಲ್ಲಿದ್ದಾರೆ.
The post ಇಸ್ರೇಲ್-ಹಮಾಸ್ ಯುದ್ಧ: ಇಸ್ರೇಲ್’ನಲ್ಲಿ ಸಿಲುಕಿರುವ ಧಾರವಾಡದ ಪ್ರಾಧ್ಯಾಪಕ appeared first on Ain Live News.