ಉಪ್ಪಿನಂಗಡಿ: ದಾರುನ್ನೂರ್ ಎಜುಕೇಶನ್ ಸೆಂಟರ್ ಕಾಶಿಪಟ್ಣ ಸಂಸ್ಥೆಯ ಉಪ್ಪಿನಂಗಡಿ ವಲಯ ಸಮಿತಿಯ ಮಹಾಸಭೆ ಮಾಲಿಕ್ ದಿನಾರ್ ಜುಮಾ ಮಸೀದಿಯ ಅಧ್ಯಕ್ಷರಾದ ಎಚ್ ಯೂಸುಫ್ ಹಾಜಿಯವರ ಅಧ್ಯಕ್ಷತೆಯಲ್ಲಿ ಮಾಲಿಕ್ ದಿನಾರ್ ಕೇಂದ್ರ ಮಸೀದಿ ಉಪ್ಪಿನಂಗಡಿಯಲ್ಲಿ ಜರುಗಿತು.
ದಾರುನ್ನೂರ್ ಸಂಸ್ಥೆಯ ಸದ್ರ್ ಮುದರಿಸ್ ಹುಸೈನ್ ರಹ್ಮಾನಿ ಉದ್ಘಾಟಿಸಿ, ಸಮನ್ವಯ ಶಿಕ್ಷಣ ಸಂಸ್ಥೆಯ ಅನಿವಾರ್ಯತೆಯ ಬಗ್ಗೆ ಮಾತನಾಡಿದರು.
ದಾರುನ್ನೂರ್ ಕೇಂದ್ರ ಸಮಿತಿಯ ಕೋಶಾಧಿಕಾರಿ ಉಸ್ಮಾನ್ ಹಾಜಿ ಏರ್ ಇಂಡಿಯಾ ಸಂಸ್ಥೆಯ ಬಗ್ಗೆ ಮಾಹಿತಿ ಹಂಚಿಕೊಂಡರು. ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷರಾದ ಶಾಹುಲ್ ಹಮೀದ್ ಕೆ ಕೆ ಪ್ರಾಸ್ತಾವಿಕ ಭಾಷಣ ಮಾಡಿದರು.
ಸಭೆಯಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹಾಜಿ ಅಬ್ದುಸ್ಸಮದ್, ದಶಮಾನೋತ್ಸವ ಸ್ವಾಗತ ಸಮಿತಿಯ ಪ್ರಧಾನ ಸಂಚಾಲಕರಾದ ಮಹಮ್ಮದ್ ಬಪ್ಪಳಿಗೆ, ಸದಸ್ಯರಾದ ಎಫ್ ಅಬ್ದುಲ್ ಜಲೀಲ್, ಫಕೀರಬ್ಬ ಮಾಸ್ಟರ್ ಫ್ಲವರ್, ಹಸೈನಾರ್ ಹಾಜಿ ಬಂಡಾಡಿ, ಅಬ್ದುಲ್ ರಹ್ಮಾನ್ ಹಾಜಿ ಕೊಳ್ಳೆಜಾಲು, ವ್ಯವಸ್ಥಾಪಕರಾದ ಅಬ್ದುಲ್ ಹಕೀಮ್, ಉಪಪ್ರಾಂಶುಪಾಲರಾದ ಮುಈನ್ ಹುದವಿ, ಶಂಸುದ್ದೀನ್ ಹುದವಿ ಶಿಹಾಬ್, ಇಸ್ಮಾಯಿಲ್ ಸೂಪರ್, ರೈನಾ ಅಬ್ದುಲ್ ರಹಿಮಾನ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಅಬ್ದುಲ್ ರಹ್ಮಾನ್ ಯುನಿಕ್ ಸ್ವಾಗತಿಸಿ, ಇಬ್ರಾಹಿಂ ಅಗ್ನಾಡಿ ವಂದಿಸಿದರು.
ನೂತನ ವಲಯ ಸಮಿತಿ ರಚನೆ
ಗೌರವಾಧ್ಯಕ್ಷರು: ಎಚ್ ಯೂಸುಫ್ ಹಾಜಿ, ಅಧ್ಯಕ್ಷರು: ಸಿದ್ದೀಖ್ ಹಾಜಿ ಮೇದರಬೆಟ್ಟು, ಉಪಾಧ್ಯಕ್ಷರು: ಸಿಟಿ ಅಶ್ರಫ್ ಹಾಜಿ, ಮುಸ್ತಫಾ ಡಬಲ್ ಫೋರ್, ಪ್ರಧಾನ ಕಾರ್ಯದರ್ಶಿ: ಇಬ್ರಾಹಿಂ ಅಗ್ನಾಡಿ, ಜೊತೆ ಕಾರ್ಯದರ್ಶಿ: ಕರಾವಳಿ ಹಮೀದ್, ಯೂಸುಫ್ ಹಾಜಿ ಪೆದಮಲೆ, ಸಂಘಟನಾ ಕಾರ್ಯದರ್ಶಿ: ಯುನಿಕ್ ಅಬ್ದುಲ್ ರಹ್ಮಾನ್, ಇಸ್ಮಾಯಿಲ್ ತಂಙಳ್, ಕೋಶಾಧಿಕಾರಿ: ರಫೀಕ್ ಕೊಡಿಪ್ಪಾಡಿ, ಸದಸ್ಯರುಗಳು: ಅಬ್ದುಲ್ ರಹ್ಮಾನ್ ಹಾಜಿ ಕೊಳ್ಳೆಜಾಲು, ಮೂಸಾ ಅಗ್ನಾಡಿ, ಇಬ್ರಾಹಿಂ ಪೆದಮಲೆ, ಮಹಮೂದ್ ಅಗ್ನಾಡಿ, ಶುಕೂರ್ ಹಾಜಿ ಮೈನಾ, ಮುಈನ್ ನಟ್ಟಿಬೈಲು, ಉಮ್ಮರ್, ಬಿಟಿ ಹಮೀದ್ ಮುರ, ಹುಸೈನ್ ಆತೂರು, ಕಾಸಿಂ ಪಿಲಿಗೂಡು, ಇಸ್ಮಾಯಿಲ್ ಬಂಡಾಡಿ ಇವರನ್ನು ಆಯ್ಕೆ ಮಾಡಲಾಯಿತು.
ದಾರುನ್ನೂರ್ ದಶಮಾನೋತ್ಸವ ಪ್ರಚಾರ ಸಮಿತಿ ಅಧ್ಯಕ್ಷರು: ಹಮೀದ್ ಕರಾವಳಿ, ಉಪಾಧ್ಯಕ್ಷರು: ಮಹಮೂದ್ ಅಗ್ನಾಡಿ, ಮುಹಮ್ಮದ್ ಕೂಟೇಲು, ಪ್ರಧಾನ ಕಾರ್ಯದರ್ಶಿ: ಯುನಿಕ್ ಅಬ್ದುಲ್ ರಹ್ಮಾನ್, ಸಂಘಟನಾ ಕಾರ್ಯದರ್ಶಿ: ಯೂಸುಫ್ ಹಾಜಿ ಪೆದಮಲೆ, ಕೋಶಾಧಿಕಾರಿ: ಅಶ್ರಫ್ ಹಾಜಿ