ಉಳ್ಳಾಲ: ಜಮಾಅತೆ ಇಸ್ಲಾಮಿ ಹಿಂದ್ ಉಳ್ಳಾಲ ಸಮಾಜ ಸೇವಾ ವಿಭಾಗದಿಂದ ಚೆಂಬುಗುಡ್ಡೆ ಪರಿಸರದ ಅಂಬೇಡ್ಕರ್ ನಗರದಲ್ಲಿ ಲೀಲಾವತಿ ಕುಟುಂಬಕ್ಕೆ ಮನೆಯನ್ನು ನಿರ್ಮಿಸಿ ಹಸ್ತಾಂತರಿಸಲಾಯಿತು. ತೊಕ್ಕೊಟ್ಟು ಮಸ್ಜಿದುಲ್ ಹುದಾದ ಅಧ್ಯಕ್ಷ ಯು.ಎಂ. ಹಸನಬ್ಬ ಮನೆಯ ಕೀಲಿ ಕೈಯನ್ನ ಲೀಲಾವತಿ ಅವರಿಗೆ ನೀಡಿದರು.
ಜಮಾಅತೆ ಇಸ್ಲಾಮಿ ಹಿಂದ್ ಉಳ್ಳಾಲ ಶಾಖೆಯ ಅಧ್ಯಕ್ಷ ಅಬ್ದುಲ್ ಕರೀಂ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಸಂದರ್ಭ ಪಿಲಾರ್ ಮದನಿ ಜುಮಾ ಮಸೀದಿಯ ಅಧ್ಯಕ್ಷ ಮುಹಮ್ಮದ್ ಅಸ್ಲಂ, ಸಮಾಜ ಸೇವಾ ವಿಭಾಗದ ಇಸ್ಹಾಕ್ ಕಲ್ಲಾಪು, ಝಾಕಿರ್ ಇಖ್ಲಾಸ್, ಶಂಸುದ್ದೀನ್ ಬಿ.ಕೆ.,ಎ.ಎಚ್. ಮಹ್ಮೂದ್, ಅಬ್ದುರ್ರಹೀಂ, ಸಿದ್ದೀಕ್ ಜಕ್ರಿಬೆಟ್ಟು, ಶಂಸೀರ್ ಹಾಗೂ ಲೋಹಿ ಅಸೈಗೋಳಿ ಉಪಸ್ಥಿತರಿದ್ದರು. ನಿಝಾಮುದ್ದೀನ್ ಕಾರ್ಯಕ್ರಮ ನಿರೂಪಿಸಿದರು.