ಮಂಗಳೂರು: ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ಘಟಕ ಉಳ್ಳಾಲ ಇದರ ವತಿಯಿಂದ ಅಭಯ ಸದನದಲ್ಲಿ ಮಹಿಳೆ ಯರಿಗಾಗಿ ತರಬೇತಿ ಶಿಬಿರವು ಇತ್ತೀಚೆಗೆ ನಡೆಯಿತು. ವಿವಿಧ ವಿಷಯಗಳಲ್ಲಿ ಕುರ್ಆನ್ ಪ್ರವಚನವನ್ನು ನಡೆಸಲಾಯಿತು.
ಅದಲ್ಲದೆ ದಾಂಪತ್ಯ ಸಮಸ್ಯೆಗಳು ಮತ್ತು ಪರಿಹಾರಗಳು, ಇಚಿಛ್ಟಿ ಚ್ಛಛಿ ್ಛಞಜ್ಝಿ, ಖಿನ್ನತೆಯ ಕಾರಣಗಳು ಮತ್ತು ಪರಿಹಾರಗಳು, ಫೆಲೆಸ್ತೀನ್ನ ವಾಸ್ತವಿಕತೆ, ಪ್ರವಾದಿ (ಸ)ರ ಚಿಕಿತ್ಸಾ ಪದ್ಧತಿ, ಸತ್ಯದ ಹಾದಿಯಲ್ಲಿ ಇತ್ಯಾದಿ ವಿಷಯಗಳಲ್ಲಿ ಭಾಷಣಗಳನ್ನು ಆಯೋಜಿಸಲಾಗಿತ್ತು. ಶಮೀರಾ ಮುಝಮ್ಮಿಲ್, ರುಕ್ಸಾನ ಉಮರ್, ಝರೀನಾ, ಶಹನಾಝ್ ಎಂ., ಕನೀಝ್ ಫಾತಿಮಾ, ಮುಮ್ತಾಝ್ ವಾಮಂಜೂರು, ಮರ್ಯಮ್ ಶಹೀರಾ, ಮರ್ಯಮ್ ಜಮೀಲಾ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.
ಈ ಸಂದರ್ಭ ಶಿಬಿರಾರ್ಥಿಗಳಿಗೆ ಕ್ವಿಝ್ ಸ್ಪರ್ಧೆಯನ್ನು ನಡೆಸಿ ಬಹುಮಾನಗಳನ್ನು ವಿತರಿಸಲಾಯಿತು. ಉಳ್ಳಾಲ ಘಟಕದ ಸಂಚಾಲಕಿ ಝೀನತ್ ಹಸನ್ ದಿಕ್ಸೂಚಿ ಭಾಷಣಗೈದರು. ಜಿಲ್ಲಾ ಸಂಚಾಲಕಿ ಸಾಜಿದ ಮೂಮಿನ್ ಸಮಾರೋಪ ಭಾಷಣಗೈದರು. ಮಹಿಳಾ ವಿಭಾಗದ ಕಾರ್ಯದರ್ಶಿ ಸಾಜಿದ ಮುಬೀನ್ ವಂದಿಸಿದರು.
ಶಿಬಿರದ ಕೊನೆಯ ದಿನ ಸೋಮೇಶ್ವರದ ಪಶ್ಚಿಮ್ ರಿಹಬಿಲಿಟೇಷನ್ ಸೆಂಟರಿಗೆ ಭೇಟಿ ನೀಡಿ ಶಿಬಿರಾರ್ಥಿಗಳಿಗೆ ಊಟ ಮತ್ತು ಹಣ್ಣು ಹಂಪಲುಗಳನ್ನು ಹಂಚಿದರು. ಸೆಂಟರ್ನ ಸ್ಥಾಪಕಾಧ್ಯಕ್ಷ ರೋಹಿತ್, ಜಮಾತೆ ಇಸ್ಲಾಮೀ ಹಿಂದ್ ಉಳ್ಳಾಲ ಘಟಕದ ಉಪಾಧ್ಯಕ್ಷ ಇಲ್ಯಾಸ್ ಇಸ್ಮಾಯಿಲ್ ಉಪಸ್ಥಿತರಿದ್ದರು.