ಬೆಂಗಳೂರು;- ರಾಜಧಾನಿ ಬೆಂಗಳೂರಿನ ಮಳೆಗೆ ಸಿಲಿಕಾನ್ ಸಿಟಿ ಜನ ನಲುಗಿ ಹೋಗಿದ್ದಾರೆ. ಬೆಂಗಳೂರಿನ ಮಳೆಯಲ್ಲಿ ಕ್ಯಾಬ್ ಚಾಲಕರು ಜೀವ ಉಳಿಸಿಕೊಂಡಿದ್ದಾರೆ.
ಒಂದಡೆ ಉಕ್ಕಿ ಹರಿಯುತ್ತಿರೋ ರಾಜಕಾಲುವೆ..! ಮತ್ತೊಂದಡೆ ಎದೆಮಟ್ಟಕ್ಕೆ ರಸ್ತೆಯಲ್ಲಿ ನೀರು.. ಕಾರುಗಳು ಸಂಪೂರ್ಣ ಜಲಾವೃತ..! ಎದೆಮಟ್ಟಕ್ಕೆ ನಿಂತ ನೀರು..!
ಹೀಗಾಗಿ ಮೂರು ತಾಸು ನೀರಲ್ಲೇ ನಿಂತು ಕ್ಯಾಬ್ ಚಾಲಕರು ಜೀವ ಉಳಿಸಿಕೊಂಡಿದ್ದಾರೆ. ನೀರಿನಲ್ಲಿ ನಿಂತಿದ್ದ ಕ್ಯಾಬ್ ಚಾಲಕರನ್ನ ಅಗ್ನಿಶಾಮಕದಳ ಸಿಬ್ಬಂದಿಗಳು ರಕ್ಷಿಸಿದ್ದಾರೆ.
ಟ್ರ್ಯಾಕ್ಟರ್ ಮೂಲಕ ಸುರಕ್ಷಿತ ಪ್ರದೇಶಕ್ಕೆ ಅಗ್ನಿಶಾಮಕದಳ ಸಿಬ್ಬಂದಿಗಳು ಕರೆ ತಂದಿದ್ದಾರೆ. ಬೆಳ್ಳಂದೂರಿನ ಕರಿಯಮ್ಮನ ಅಗ್ರಹಾರದ ರಸ್ತೆಯಲ್ಲಿ ಘಟನೆ ಜರುಗಿದೆ. ಸ್ಥಳದಲ್ಲಿ ಅಗ್ನಿಶಾಮಕದಳ ಸಿಬ್ಬಂಧಿಗಳು ಹಾಗೂ ಮಾರತಹಳ್ಳಿ ಪೊಲೀಸರಿಂದ ಕಾರ್ಯಾಚರಣೆ ನಡೆಸಿದ್ದು, ಮುಖ್ಯರಸ್ತೆಗೆ ಬ್ಯಾರಿಕೇಡ್ ಅಳವಡಿಸಿ ರಸ್ತೆ ಅಗ್ನಿಶಾಮಕದಳ ಸಿಬ್ಬಂದಿ ಹಾಗೂ ಪೊಲೀಸರು ಬಂದ್ ಮಾಡಿದ್ದಾರೆ.
The post ಎದೆಮಟ್ಟಕ್ಕೆ ರಸ್ತೆಯಲ್ಲಿ ನೀರು.. ಕಾರುಗಳು ಸಂಪೂರ್ಣ ಜಲಾವೃತ – ಜೀವ ಉಳಿಸಿಕೊಂಡ ಕ್ಯಾಬ್ ಚಾಲಕರು appeared first on Ain Live News.