ಬೆಂಗಳೂರು;- ಇಂಡಿಯಾ’ ಬದಲು ‘ಭಾರತ್’; ಎನ್ಸಿಇಆರ್ಟಿ ಪ್ರಸ್ತಾವಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಖಂಡಿಸಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಶಾಲಾ ಪಠ್ಯಪುಸ್ತಕಗಳಲ್ಲಿ ‘ಇಂಡಿಯಾ’ ಬದಲು ‘ಭಾರತ್’ ಎಂದು ಬದಲಿಸುವ ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ ಅಂಡ್ ಟ್ರೈನಿಂಗ್ ಪ್ರಸ್ತಾವವನ್ನು DCM ಖಂಡಿಸಿದ್ದಾರೆ.
ಕರ್ನಾಟಕ ‘ಇಂಡಿಯಾ’ ಎಂಬ ಪದವನ್ನೇ ಮುಂದುವರಿಸುತ್ತದೆ ಎಂದಿದ್ದಾರಲ್ಲದೆ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಅಡ್ಮಿನಿಸ್ಟ್ರೇಟಿವ್ ಸರ್ವೀಸ್, ಇಂಡಿಯನ್ ಫಾರಿನ್ ಸರ್ವೀಸ್ ಎಂದು ಏಕೆ ಹೇಳುತ್ತಿದ್ದೇವೆ?
ಎಂದು ಪ್ರಶ್ನಿಸಿದ್ದಾರೆ.
ಎನ್ಡಿಎ ಸರ್ಕಾರ ಎನ್ಸಿಇಆರ್ಟಿ ಮೇಲೆ ಒತ್ತಡ ಹೇರಿ ಈ ಪ್ರಸ್ತಾವ ಅಂಗೀಕರಿಸುವಂತೆ ಮಾಡಿದೆ. ಎನ್ಸಿಇಆರ್ಟಿ ತೆಗೆದುಕೊಂಡಿರುವ ನಿಲುವು ಸಂಪೂರ್ಣ ತಪ್ಪು. ಎನ್ಡಿಎ ಸರ್ಕಾರ ಭಾರತದ ಇತಿಹಾಸವನ್ನು ಬದಲಾಯಿಸಲು ಸಾಧ್ಯವೇ ಇಲ್ಲ. ಇಂಡಿಯಾ ಪದವನ್ನು ಭಾರತ್ ಎಂದು ಬದಲಿಸುವ ನಿಲವು ಜನವಿರೋಧಿ ಎಂದು ಕೇಂದ್ರ ಸರ್ಕಾರಕ್ಕೆ ತಿರುಗೇಟು ನೀಡಿದ್ದಾರೆ.
The post ಎನ್ಡಿಎ ಸರ್ಕಾರ ಭಾರತದ ಇತಿಹಾಸ ಬದಲಾಯಿಸಲು ಸಾಧ್ಯವೇ ಇಲ್ಲ – DCM ಡಿಕೆಶಿ appeared first on Ain Live News.