Home Uncategorized ಎಸಿಬಿ ದಾಳಿಗೊಳಗಾಗಿದ್ದ ಮುಖ್ಯ ಇಂಜಿನಿಯರ್ ಗೆ ಹೊಸ ಹುದ್ದೆ: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕಿಡಿ

ಎಸಿಬಿ ದಾಳಿಗೊಳಗಾಗಿದ್ದ ಮುಖ್ಯ ಇಂಜಿನಿಯರ್ ಗೆ ಹೊಸ ಹುದ್ದೆ: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕಿಡಿ

20
0

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ತಿಂಗಳು ಕಳೆಯುವುದರಲ್ಲಿ ‘ಕಾಸಿಗಾಗಿ ಫೋಸ್ಟಿಂಗ್’ ಆರೋಪ ಹೆಚ್ಚಾಗಿ ಕೇಳಿಬರುತ್ತಿದೆ. ಮುಖ್ಯಮಂತ್ರಿ ಕಚೇರಿಯಲ್ಲಿಯೇ ಇದು ನಡೆಯುತ್ತಿದ್ದು, ಆಯಾಕಟ್ಟಿನ ಹುದ್ದೆಗಳಿಗೆ ತಮ್ಮವರನ್ನು ನಿಯೋಜಿಸಲಾಗುತ್ತಿದೆ ಎಂದು ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಆರೋಪ ಮಾಡುತ್ತಿವೆ. ಬೆಂಗಳೂರು: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ತಿಂಗಳು ಕಳೆಯುವುದರಲ್ಲಿ ‘ಕಾಸಿಗಾಗಿ ಫೋಸ್ಟಿಂಗ್’ ಆರೋಪ ಹೆಚ್ಚಾಗಿ ಕೇಳಿಬರುತ್ತಿದೆ. ಮುಖ್ಯಮಂತ್ರಿ ಕಚೇರಿಯಲ್ಲಿಯೇ ಇದು ನಡೆಯುತ್ತಿದ್ದು, ಆಯಾಕಟ್ಟಿನ ಹುದ್ದೆಗಳಿಗೆ ತಮ್ಮವರನ್ನು ನಿಯೋಜಿಸಲಾಗುತ್ತಿದೆ ಎಂದು ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಆರೋಪ ಮಾಡುತ್ತಿವೆ.

ಈ ಮಧ್ಯೆ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ್ದಾರೆ ಎಂಬ ಆರೋಪದ ಮೇರೆಗೆ ಭ್ರಷ್ಟಾಚಾರ ನಿಗ್ರಹ ದಳದ ದಾಳಿಗೆ ಒಳಗಾಗಿದ್ದ ಬಿಬಿಎಂಪಿಯ ಮುಖ್ಯ ಇಂಜಿನಿಯರ್ ಬಿಎಸ್ ಪ್ರಹ್ಲಾದ್ ಅವರನ್ನು ಸಿಎಂ ಸೂಚನೆ ಮೇರೆಗೆ ನಗರಾಭಿವೃದ್ಧಿ ಇಲಾಖೆಯ ಬೃಹತ್ ನೀರುಗಾಲುವೆ ಶಾಖೆಯ ಮುಖ್ಯ ಅಭಿಯಂತರ ಹುದ್ದೆಗೆ ನಿಯೋಜಿಸಿ ಆದೇಶ ಹೊರಡಿಸಲಾಗಿದೆ.

ಇದನ್ನೂ ಓದಿ: ವರ್ಗಾವಣೆ ದಂಧೆಯ ಕೊಚ್ಚೆಯಲ್ಲಿ ಎಗ್ಗಿಲ್ಲದೆ ಉರುಳಾಡುತ್ತಿದೆ ಸರ್ಕಾರ; 4 ಶಿಫಾರಸುಗಳ ಹಿಂದಿರುವ ಆ ʼಅತೀಂದ್ರʼ ಶಕ್ತಿ ಯಾವುದು?

ಈ ಕುರಿತ ‘ದಿ ಪೈಲ್ಸ್ ‘ವರದಿಯನ್ನು ಬಿಜೆಪಿ ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದೆ. ತಾವು ವಿರೋಧ ಪಕ್ಷದಲ್ಲಿದ್ದಾಗ ಒಂದಷ್ಟು ಅಧಿಕಾರಿಗಳನ್ನು ಗುರುತಿಸಿ, ಅವರನ್ನು ಕಡು ಭ್ರಷ್ಟರು ಎಂದು ಲೇಬಲ್ ಮಾಡುವುದು, ತಾವು ಅಧಿಕಾರಕ್ಕೆ ಬಂದ ನಂತರ ಅದೇ ಅಧಿಕಾರಿಗಳಿಗೆ ಸಾಚಾತನದ ಸರ್ಟಿಫಿಕೇಟ್ ನೀಡಿ ಆಯಕಟ್ಟಿನ ಜಾಗಗಳಿಗೆ ಫೋಸ್ಟಿಂಗ್ ಮಾಡಲು ಟಿಪ್ಪಲು ಹೊರಡಿಸುವುದು, ಇದಕ್ಕೆ ಅಲ್ಲವೇ ಜನ ನಿಮ್ಮ ಸರ್ಕಾರವನ್ನು ಎಟಿಎಂ ಸರ್ಕಾರ ಎಂದು ಕರೆಯುತ್ತಿರುವುದು ಎಂದು ಟೀಕಾ ಪ್ರಹಾರ ನಡೆಸಿದೆ.

ತಾವು ವಿರೋಧ ಪಕ್ಷದಲ್ಲಿದ್ದಾಗ ಒಂದಷ್ಟು ಅಧಿಕಾರಿಗಳನ್ನು ಗುರುತಿಸಿ, ಅವರನ್ನು ಕಡು ಭ್ರಷ್ಟರು ಎಂದು ಲೇಬಲ್ ಮಾಡುವುದು.

ತಾವು ಅಧಿಕಾರಕ್ಕೆ ಬಂದ ನಂತರ, ಅದೇ ಅಧಿಕಾರಿಗಳಿಗೆ ಸಾಚಾತನದ ಸರ್ಟಿಫಿಕೇಟ್ ನೀಡಿ, ಆಯಕಟ್ಟಿನ ಜಾಗಗಳಿಗೆ ಪೋಸ್ಟಿಂಗ್ ಮಾಡಲು, ಟಿಪ್ಪಣಿ ಹೊರಡಿಸುವುದು.

ಇದಕ್ಕೆ ಅಲ್ಲವೇ ಜನ ನಿಮ್ಮ ಸರ್ಕಾರವನ್ನು #ATMSarkara ಎಂದು… https://t.co/tYWk622TF3
— BJP Karnataka (@BJP4Karnataka) June 29, 2023

LEAVE A REPLY

Please enter your comment!
Please enter your name here