Home Uncategorized ಎಸೆಸ್ಸೆಫ್ ಸುರತ್ಕಲ್ ಡಿವಿಷನ್ ಸಾಹಿತ್ಯೋತ್ಸವ

ಎಸೆಸ್ಸೆಫ್ ಸುರತ್ಕಲ್ ಡಿವಿಷನ್ ಸಾಹಿತ್ಯೋತ್ಸವ

27
0

ಸುರತ್ಕಲ್: ಎಸೆಸ್ಸೆಫ್ ಸುರತ್ಕಲ್ ಡಿವಿಷನ್ ಮಟ್ಟದ ಸಾಹಿತ್ಯೋತ್ಸವವು ಡಿವಿಷನ್ ಅಧ್ಯಕ್ಷ ರವೂಫ್ ಹಿಮಮಿ ಸಖಾಫಿ ಹಳೆಯಂಗಡಿ ಅವರ ಅಧ್ಯಕ್ಷತೆಯಲ್ಲಿ ಮುಕ್ಕ ಅಂಜುಮನ್ ಸ್ಕೂಲ್ ಕ್ಯಾಂಪಸ್‌ನಲ್ಲಿ ಇತ್ತೀಚೆಗೆ ನಡೆಯಿತು.

ಮುಕ್ಕ ಜುಮಾ ಮಸ್ಜಿದ್‌ನ ಅಧ್ಯಕ್ಷ ರಝಾಕ್ ಹಾಜಿ ಧ್ವಜಾರೋಹಣ ನೆರವೇರಿಸಿದರು. ಮುಕ್ಕ ಜುಮಾ ಮಸ್ಜಿದ್ ಖತೀಬ್ ಮನ್ಸೂರ್ ಮದನಿ ದುಆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎಸ್‌ವೈಎಸ್ ಸುರತ್ಕಲ್ ಸರ್ಕಲ್ ಅಧ್ಯಕ್ಷ ಆರೀಫ್ ಝುಹ್ರಿ ಮುಕ್ಕ ಕಾರ್ಯಕ್ರಮ ಉದ್ಘಾಟಿಸಿದರು.

ಸುರತ್ಕಲ್ ಸೆಕ್ಟರ್ ಚಾಂಪಿಯನ್ ಹಾಗೂ ಕಾಟಿಪಳ್ಳ ಸೆಕ್ಟರ್ ದ್ವಿತೀಯ ಸ್ಥಾನ ಪಡೆಯಿತು.

ಮುಖ್ಯ ಅತಿಥಿಯಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಮುಲ್ಕಿ, ಯೂತ್ ಕಾಂಗ್ರೆಸ್ ಉಪಾಧ್ಯಕ್ಷ ಗಿರೀಶ್ ಆಳ್ವ ಭಾಗವಹಿಸಿದರು.

ಅಂಜುಮನ್ ಸಂಸ್ಥೆಯ ಸಂಚಾಲಕ ಇಬ್ರಾಹಿಂ, ಮುಕ್ಕ ಜುಮಾ ಮಸ್ಜಿದ್‌ನ ಕೋಶಾಧಿಕಾರಿ ಎಂ.ಎಂ ಮೊಹಿದ್ದೀನ್, ಜೊತೆ ಕಾರ್ಯದರ್ಶಿ ಎಂ. ಅಕ್ಬರ್ ಅಲಿ, ಸದಸ್ಯ ಕೆ.ಎಸ್. ಉಸ್ಮಾನ್, ಎಸೆಸ್ಸೆಫ್ ಮಾಜಿ ರಾಜ್ಯ ನಾಯಕ ಹೈದರ್ ಅಲಿ 4ನೇ ಬ್ಲಾಕ್, ಎಸೆಸ್ಸೆಫ್ ಸುರತ್ಕಲ್ ಡಿವಿಷನ್ ಮಾಜಿ ಅಧ್ಯಕ್ಷ ಹನೀಫ್ ಅಹ್ಸನಿ ಕಾಮಿಲ್ ಸಖಾಫಿ, ಎಸೆಸ್ಸೆಫ್ ದ.ಕ. ಜಿಲ್ಲಾ ಮಾಜಿ ಕಾರ್ಯದರ್ಶಿ ಫಾರೂಕ್ ಸಖಾಫಿ ಅಲ್ ಹಿಕಮಿ ಅಲ್ ಅರ್ಶದಿ, ಎಸ್‌ವೈಎಸ್ ಸುರತ್ಕಲ್ ರೆನ್ ಅಧ್ಯಕ್ಷ ಹೈದರ್ ಮದನಿ ಸೂರಿಂಜೆ, ಎಸ್‌ವೈಎಸ್ ದ.ಕ ಜಿಲ್ಲಾ ವೆಸ್ಟ್ ಪ್ರಧಾನ ಕಾರ್ಯದರ್ಶಿ ಅಬ್ದುರ‌್ರಹ್ಮಾನ್ ಹಾಜಿ ಪ್ರಿಂಟೆಕ್, ಎಸೆಸ್ಸೆಫ್ ಸುರತ್ಕಲ್ ಡಿವಿಷನ್ ಉಸ್ತುವಾರಿ ಅಝ್ಮಲ್ ಕಾವೂರು, ಎಸೆಸ್ಸೆಫ್ ದ.ಕ. ಜಿಲ್ಲಾ ವೆಸ್ಟ್ ಸಾಹಿತ್ಯೋತ್ಸವ ಕನ್ವೀನರ್ ನೌಸೀಫ್ ಪಂಜಿಮೊಗರು, ಎಸೆಸ್ಸೆಫ್ ದ.ಕ. ಜಿಲ್ಲಾ ವೆಸ್ಟ್ ಸದಸ್ಯ ಖಲೀಲ್ ಅಬ್ಬೆಟ್ಟು, ಬಶೀರ್ ಹಿಮಮಿ, ಹಸನ್ ಝುಹರಿ ಮಂಗಳಪೇಟೆ ಉಪಸ್ಥಿತರಿದ್ದರು.

ಎಸೆಸ್ಸೆಫ್ ಸುರತ್ಕಲ್ ಡಿವಿಷನ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅಫ್ರೀದ್ ಸ್ವಾಗತಿಸಿದರು. ಹಣಕಾಸು ಸೆಕ್ರೆಟರಿ ಮುಹಮ್ಮದ್ ತನ್ಸೀರ್ ಕಾಟಿಪಳ್ಳ ವಂದಿಸಿದರು.

LEAVE A REPLY

Please enter your comment!
Please enter your name here