Home ಕರ್ನಾಟಕ ಎ.3ರಂದು ಮಂಡ್ಯದಲ್ಲಿ ಸಭೆ ಮಾಡಿ, ಅಲ್ಲೇ ತನ್ನ ನಿರ್ಧಾರ ಪ್ರಕಟಿಸುತ್ತೇನೆ : ಸಂಸದೆ ಸುಮಲತಾ

ಎ.3ರಂದು ಮಂಡ್ಯದಲ್ಲಿ ಸಭೆ ಮಾಡಿ, ಅಲ್ಲೇ ತನ್ನ ನಿರ್ಧಾರ ಪ್ರಕಟಿಸುತ್ತೇನೆ : ಸಂಸದೆ ಸುಮಲತಾ

29
0

ಬೆಂಗಳೂರು : ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್​ ಕೈತಪ್ಪಿದ ಹಿನ್ನಲೆಯಲ್ಲಿ ಇಂದು ಬೆಂಬಲಿಗರ ಸಭೆ ಕರೆದಿದ್ದ ಸಂಸದೆ ಸುಮಲತಾ ತಮ್ಮ ಮುಂದಿನ ನಿರ್ಧಾರವನ್ನು ಎಪ್ರಿಲ್​ 3ರಂದು  ಮಂಡ್ಯದಲ್ಲಿಯೇ ಸಭೆ ಮಾಡಿ ತಿಳಿಸುತ್ತೇನೆ ಎಂದು ಹೇಳಿದರು.

ಇಂದು ಬೆಂಬಲಿಗರ ಸಭೆಯಲ್ಲಿ  ಮಾತನಾಡಿದ ಅವರು, “ನಿಮ್ಮನ್ನ ವಿಶ್ವಾಸಕ್ಕೆ ತೆಗೆದುಕೊಳ್ಳದೇ ಯಾವ ನಿರ್ಧಾರ ಕೈಗೊ‍‍ಳ್ಳುವದಿಲ್ಲ. ನನ್ನ ರಾಜಕೀಯ ಏನೇ ಇದ್ದರೂ ಅದು ಮಂಡ್ಯದಲ್ಲಿಯೇ, ನಿಮ್ಮನ್ನು ನೋಯಿಸುವ ನಿರ್ಧಾರ ನಾನು ಮಾಡಲ್ಲ. ಮಂಡ್ಯದ ಜನರ ಮುಂದೆಯೇ ನನ್ನ ಅಂತಿಮ ನಿರ್ಧಾರ ತಿಳಿಸುತ್ತೇನೆ”  ಎಂದು  ಭಾವುಕರಾಗಿ ನುಡಿದರು.

ʼಅಂಬರೀಶ್ ಜೊತೆಗಿದ್ದ ಎಲ್ಲರೂ ಈಗಲೂ ನಮ್ಮ ಜೊತೆಗಿದ್ದಾರೆ. ನಮ್ಮ ಜತೆ ಯಾವುದೇ ದೊಡ್ಡ ನಾಯಕರಿಲ್ಲ, ಎಲ್ಲ ನೀವೇ ನನಗೆ. ನಾನು ಎಂದಿಗೂ ಸ್ವಾರ್ಥ ರಾಜಕಾರಣ ಮಾಡಿಲ್ಲ. ಏನೇ ಆದರೂ ನಾನು ಮಂಡ್ಯ ಬಿಟ್ಟು ಕೊಡುವುದಿಲ್ಲ. ಮಂಡ್ಯ ಅಂದರೆ ಅದು ನನಗೆ ಅಭಿಮಾನ. ನನಗೆ ಕೊಟ್ಟಿರೆ ಮಂಡ್ಯ ಕ್ಷೇತ್ರವನ್ನೇ ಕೊಡಿ ಎಂದು ಹೇಳಿದ್ದೇನೆʼ ಎಂದರು.

LEAVE A REPLY

Please enter your comment!
Please enter your name here