Home Uncategorized ಓಲಾ- ಉಬರ್ ರೂಲ್ಸ್ ಸಡಿಲಕ್ಕೆ ಸಂಸದರ ಬಿಗಿ ಪಟ್ಟು: ಪೂಲಿಂಗ್ ಪರ ನಿಂತಿದಕ್ಕೆ ಕಚೇರಿಗೆ ಮುತ್ತಿಗೆ...

ಓಲಾ- ಉಬರ್ ರೂಲ್ಸ್ ಸಡಿಲಕ್ಕೆ ಸಂಸದರ ಬಿಗಿ ಪಟ್ಟು: ಪೂಲಿಂಗ್ ಪರ ನಿಂತಿದಕ್ಕೆ ಕಚೇರಿಗೆ ಮುತ್ತಿಗೆ ಸಾಧ್ಯತೆ!

41
0

ಬೆಂಗಳೂರಿನಲ್ಲಿ ಓಲಾ- ಉಬರ್ ಶೇರಿಂಗ್ ಪೂಲಿಂಗ್ ಅಕ್ರಮ ಅಂತ ಸರ್ಕಾರ ನಿರ್ಧಾರ ಮಾಡಿದೆ. ಹೀಗಾಗಿ ಶೇರಿಂಗ್ ಪೂಲಿಂಗ್ ನಿಷೇಧಿಸಿ ಸಾರಿಗೆ ಇಲಾಖೆ ಆದೇಶಿಸಿದೆ. ಆದ್ರೆ ಇದೀಗ ಸಂಚಾರ ದಟ್ಟನೆಗೆ ಪರಿಹಾರ ವಾಗಿದ್ದ ಪೂಲಿಂಗ್ ಅನ್ನ ಅಕ್ರಮ ಎಂದು ಪರಿಗಣಿಸಿದ್ದು ಏಕೆ ಎಂಬ ಪ್ರಶ್ನೆಯೂ ಎದ್ದಿದೆ. ನಗರದಲ್ಲಿ ಕಾರ್ ಪೂಲಿಂಗ್ ಅವಕಾಶ ನೀಡಿ ಅಂತ ಸಂಸದರೊಬ್ಬರು ಪತ್ರ ಬರೆದಿರೋದು ಖಾಸಗಿ ಸಾರಿಗೆ ಮಾಲೀಕರು ಹಾಗೂ ಚಾಲಕರನ್ನ ಕೆರಳಿಸಿದೆ. ಸಂಸದರ ನಡೆ ಖಂಡಿಸಿ ಖಾಸಗಿ ಸಾರಿಗೆ ಮಾಲೀಕರು ಹೋರಾಟಕ್ಕೆ ದುಮ್ಮಕ್ಕಿದ್ದಾರೆ.

Namma Metro: ಟ್ರಾಫಿಕ್ ಜಾಮ್ʼನಿಂದ ಕಂಗೆಟ್ಟಿರುವ ಬೆಂಗಳೂರಿಗರಿಗೆ ಬಿಗ್‌ ರಿಲೀಫ್:‌ ನೇರಳೆ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭ

ಬೆಂಗಳೂರಿನ ರೋಡ್‌ಗಳಲ್ಲಿ ದಿನೇ ದಿನೇ ವಾಹನಗಳ ಸಂಖ್ಯೆ ಹೆಚ್ಚಾಗ್ತಿದೆ. ಇದರಿಂದ ನಗರದಲ್ಲಿ ಟ್ರಾಫಿಕ್ ವಿಪರೀತ ಇದೆ. ಸಾಲುಸಾಲು ರಜೆ ಬಂದ್ರೆ ನಗರದ ರೋಡ್‌ಗಳಲ್ಲಿ ಓಡಾಡೋದೇ ಕಷ್ಟ. ಕಿಲೋ ಮೀಟರ್ ಉದ್ದಕ್ಕೆ ವಾಹನಗಳು ನಿಂತು ಬಿಡುತ್ವೆ.. ಈ ಸಮಸ್ಯೆಗೆ ಒಂದು ಪರಿಹಾರ ಕಂಡು ಕೊಂಡಿದ್ರು. ನಾಲ್ಕು ಜನ ನಾಲ್ಕು ಕಾರುಗಳನ್ನ ರೋಡಿಗೆ ಇಳಿಸೋ ಬದಲು ಒಂದೇ ಕಾರ್‌ನಲ್ಲಿ ನಾಲ್ಕು ಜನರು ಪ್ರಯಾಣ ಮಾಡಬಹುದಲ್ಲವೇ ಅನ್ನೋದು ಜನರ ಪ್ಲಾನ್ ಆಗಿತ್ತು.. ಇದರಿಂದ ಹಣ ಉಳಿಯುತ್ತೆ, ಪೆಟ್ರೋಲ್ ಉಳಿಯುತ್ತೆ, ಟ್ರಾಫಿಕ್ ಕಡಿಮೆ ಆಗುತ್ತೆ.. ಈ ಪರಿಕಲ್ಪನೆಗೆ ಕಾರ್ ಪೂಲಿಂಗ್ ಅಂತಾ ಹೆಸರನ್ನೂ ಇಡಲಾಗಿತ್ತು. ಈ ಐಡಿಯಾ ಬೆಂಗಳೂರಿನಲ್ಲಿ ವರ್ಕೌಟ್ ಸಹ ಆಗಿತ್ತು.ಆದ್ರೆ ಓಲಾ ಉಬರ್ ಕಂಪನಿಗಳು ನಾನಾ ರೂಲ್ಸ್ ವೈಲೇಟ್ ಮಾಡಿದ ಬಳಿಕ ಪೂಲಿಂಗ್ ಶೇರಿಂಗ್ ನ್ನ ಸಾರಿಗೆ ಇಲಾಖೆ ರದ್ದುಗೊಳಿಸಿತ್ತು. ಆದ್ರೆ ಇದೀಗ ಮತ್ತೆ ಪೂಲಿಂಗ್ ಬೇಕು ಬೇಡಗಳ ಬಗ್ಗೆ ಚರ್ಚೆ ಶುರುವಾಗಿದೆ.
.
ಹೌದು ಒಬ್ಬ ವ್ಯಕ್ತಿ ಮಾತ್ರ ಒಂದು ಕಾರಿನಲ್ಲಿ ಹೋಗುವ ಬದಲು ಅದೇ ಮಾರ್ಗದಲ್ಲಿ ಹೋಗುವ ಇತರರನ್ನ ಕೂರಿಸಿಕೊಂಡು ನಿರ್ದಿಷ್ಟ ಮೊತ್ತ ಶೇರ್ ಮಾಡಿಕೊಂಡು ಹೋಗುವುದು ಪೂಲಿಂಗ್ ವೈಶಿಷ್ಟ . ಆದ್ರೆ ಮೋಟರ್ ವಾಹನ ಕಾಯ್ದೆ ಪ್ರಕಾರ ವೈಟ್ ಬೋರ್ಡ್ ವಾಹನಗಳನ್ನ ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡುವಂತಿಲ್ಲ .ವಾಣಿಜ್ಯ ಬಳಕೆಗೆ ಆಟೋ ಅಥವಾ ಕ್ಯಾಬ
ಬ್ ಗಳನ್ನ ಬಳಕೆ ಮಾಡಬೇಕು. . ಆದ್ರೆ ಇತ್ತೀಚಿಗೆ ವೈಟ್ ಬೋರ್ಡ್ ಕಾರುಗಳಲ್ಲಿ ನಾಲ್ಕೈದು ಜನ ಅಪರಿಚಿತರು ಒಟ್ಟಿಗೇ ಪ್ರಯಾಣ ಮಾಡ್ತಿದ್ದಾರೆ. ಪರಸ್ಪರ ಪರಿಚಿತರಲ್ಲದೆ ಜನರು ಆಪ್ ಮೂಲಕ ಸಂರ್ಪಕ್ಕೆ ಬರುತ್ತಾರೆ. ಕಾರ್ ಪೂಲಿಂಗ್ ಹತ್ತಾರು ಆ್ಯಪ್ ಗಳು ಇದ್ದು, ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿದ್ದು, ಖಾಸಗಿ ವಾಹನ ವಾಣಿಜ್ಯ ಉದ್ದೇಶಕ್ಕೆ ಬಳಕೆ ಆಗಿಬಿಡುತ್ತಿದೆ. ಇದರ ನೇರ ಪರಿಣಾಮ ಆಟೋ ಟ್ಯಾಕ್ಸಿ ಚಾಲಕರಿಗೆ ತಟ್ಟುತ್ತಿದೆ. ಆದ್ರೂ ಸಂಸ ತೇಜಸ್ವಿ ಸೂರ್ಯ ಕಾರ್ ಪೂಲಿಂಗ್ ಅವಕಾಶ ನೀಡಿ ಅಂತ ಸಿಎಂ ಸಿದ್ದರಾಮಯ್ಯ ಅವರಿಗೆ ಸುದೀರ್ಘ ಪತ್ರ ಬರೆದಿದ್ದಾರೆ. ಇದರಿಂದ ಕೆರಳಿಸಿರೋ ಖಾಸಗಿ ಸಾರಿಗೆ ಮಾಲೀಕರ ಸಂಘ ಹೋರಾಟಕ್ಕೆ ಇಳಿದಿದೆ. ನಾಲ್ಕು ದಿನದೊಳಗೆ ತಮ್ಮ ನಿರ್ಧಾರ ವಾಪಸ್ಸ್ ತೆಗೆದುಕೊಳ್ಳದಿದ್ರೆ ಬೆಂಗಳೂರಿನ ತೇಜಸ್ವಿ ಸೂರ್ಯ ಕಚೇರಿಗೆ ಮುತ್ತಿಗೆ ಹಾಕುವ ನಿರ್ಧಾರ ಮಾಡಿದ್ದಾರೆ.ಇದಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಗುರುತಿಸಿಕೊಂಡ್ರೆ ಕಪ್ಪ ಬಟ್ಟೆ ಧರಿಸಿ ಸಂಸದರ ವಿರುದ್ದ ದಿಕ್ಕಾರ ಹಾಕಲು ಮುಂದಾಗಿದ್ದಾರೆ.

ಕಾರ್ ಪೂಲಿಂಗ್ ಗೆ ಅವಕಾಶ ನೀಡಿದ್ರೆ ಟ್ಯಾಕ್ಸಿ ಹಾಗೂ ಆಟೋ ಗಳಿಗೆ ಪ್ರಯಾಣಿಕರು ಸಂಖ್ಯೆ ಕಡಿಮೆ ಆಗಲಿದೆ. ಇತ್ತೀಚಿಗೆ ಬೆಂಗಳೂರು ಬಂದ್ ಮಾಡಿದ್ದ ಖಾಸಗಿ ಸಾರಿಗೆ ಮಾಲೀಕರು ಕಾರ್ ಪೂಲಿಂಗ್ ಕಂಪ್ಲೀಟ್ ಬ್ಯಾನ್ ಗೆ ಮಾಡುವಂತೆ ಆಗ್ರಹಿಸಿದರು.ವಾಣಿಜ್ಯ ಉದ್ದೇಶಕ್ಕೆ ವೈಟ್ ಬೋರ್ಡ್ ವಾಹನ ಬಳಿಸಿದ್ರೆ 5 ಸಾವಿರದಿಂದ 10 ಸಾವಿರವರಿಗೂ ದಂಡ ವಿಧಿಸುತ್ತೇವೆ ಅಂತ ಸಾರಿಗೆ ಇಲಾಖೆ ತಿಳಿಸಿತ್ತು. ಆದ್ರೆ ಕಳೆದ ಕೆಲ ದಿನಗಳ ಹಿಂದೆ ಸಂಸದ ತೇಜಸ್ವಿ ಸೂರ್ಯ ಸಿಎಂ ಗೆ ಪತ್ರ ಬರೆದು ಕಾರ್ ಪೂಲಿಂಗ್ ನಿಷೇಧದಿಂದ ನಗರದಲ್ಲಿ ವಾಹನ ದಟ್ಟನೆ ಹೆಚ್ಚಾಗ್ತಿದೆ.ಕರ್ನಾಟಕ ಮೋಟರ್ ವಾಹನ ಕಾಯ್ದೆ 1989 ರಲ್ಲಿ ರೂಪಿಸಲಾಗಿದೆ. ಈ ಕಾಯ್ದೆ ಇದೀಗ ಅಪ್ರಸುತ್ತ . ನಗರದಲ್ಲಿ ಐಟಿ ಕಾರಿಡಾರ್ ಉದ್ಯೋಗಿಗಳಿಗೆ ಕಾರ್ ಪೂಲಿಂಗ್ ಅತ್ಯಗತ್ಯ ಬಗ್ಗೆ ಸಿಎಂ ಬರೆದ ಪತ್ರದಲ್ಲಿ ಉಲ್ಲೇಖ ಮಾಡಿದ್ರು ಆದ್ರೆ ಇದೀಗ ಸಂಸದರು ನಿರ್ಧಾರ ವಾಪಸ್ಸ ಪಡೆಯಬೇಕು. ಅಗ್ರಿಗೇಟರ್ ಕಂಪನಿಗಳ ಏಜೆಂಟ್ ರೀತಿ ಪತ್ರ ಬರೆದಿದ್ದಾರೆ.ಸರ್ಕಾರ ಯಾವದೇ ಕಾರಣಕ್ಕೂ ಕಾರ್ ಪೂಲಿಂಗ್ ಅವಕಾಶ ನೀಡಬಾರದೆಂದು ಖಾಸಗಿ ಸಾರಿಗೆ ಒಕ್ಕೂಟ ಅಗ್ರಹಿಸಿದೆ.

ಒಟ್ಟಿನಲ್ಲಿ ಕೊಂಚ ಹಣ ಉಳಿಸೋಕೆ ಪೂಲಿಂಗ್ ನಲ್ಲಿ ಗಂಟೆಗಟ್ಟಲೆ ಸಿಟಿ ರೌಂಡ್ಸ್ ಹಾಕಬೇಕಿತ್ತು. ಇನ್ನೂ ಪೂಲಿಂಗ್ ಶೇರಿಂಗ್ ಹೆಸರಿನಲ್ಲಿ ಹೆಣ್ಮಕ್ಳು ಮೋಸ ಹೋಗ್ತಿದ್ರು. ಇದಕ್ಕೆಲ್ಲಾ ಇದೀಗ ಸಾರಿಗೆ ಇಲಾಖೆ ಪೂಲಿಂಗ್ ಗೆ ಬ್ರೇಕ್ ಹಾಕಿದೆ. ಆದ್ರೆ ಸಂಸದರು ಆಟೋ ಟ್ಯಾಕ್ಸಿ ಚಾಲಕರನ್ನ ಎದುರು ಹಾಕಿಕೊಂಡು ಪೂಲಿಂಗ್ ಪರ ಬ್ಯಾಟ್ ಬಿಸುತ್ತಿರೋದು ಆಕ್ರೋಶಕ್ಕೆ ಕಾರಣವಾಗಿದೆ. ಆದ್ರೆ ಸರ್ಕಾರ ಮತ್ತೆ ಪೂಲಿಂಗ್ಗೆ ಅವಕಾಶ ನೀಡುತ್ತೋ ಇಲ್ವೋ ಅನ್ನೋದನ್ನ ಕಾದುನೋಡಬೇಕಿದೆ.

The post ಓಲಾ- ಉಬರ್ ರೂಲ್ಸ್ ಸಡಿಲಕ್ಕೆ ಸಂಸದರ ಬಿಗಿ ಪಟ್ಟು: ಪೂಲಿಂಗ್ ಪರ ನಿಂತಿದಕ್ಕೆ ಕಚೇರಿಗೆ ಮುತ್ತಿಗೆ ಸಾಧ್ಯತೆ! appeared first on Ain Live News.

LEAVE A REPLY

Please enter your comment!
Please enter your name here