ಕಬ್ಬನ್ ಪಾರ್ಕ್ ಒಳಗೆ ಹಲವು ಕಠಿಣ ನಿಯಮಗಳನ್ನು ಸಾರ್ವಜನಿಕರಿಗೆ ತೋಟಗಾರಿಕೆ ಇಲಾಖೆ ತಂದಿದೆ ಎಂಬ ಸುದ್ದಿಯನ್ನು ಇತ್ತೀಚೆಗೆ ಕೇಳಿದ್ದೆವು. ಮಾರ್ಷಲ್ ಗಳು, ಭದ್ರತಾ ಸಿಬ್ಬಂದಿ ಕಬ್ಬನ್ ಪಾರ್ಕ್ ಒಳಗೆ ಕಟ್ಟುನಿಟ್ಟಿನ ಶಿಸ್ತು ನಿಯಮ ತಂದಿದ್ದು ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ. ಬೆಂಗಳೂರು: ಕಬ್ಬನ್ ಪಾರ್ಕ್ ಒಳಗೆ ಹಲವು ಕಠಿಣ ನಿಯಮಗಳನ್ನು ಸಾರ್ವಜನಿಕರಿಗೆ ತೋಟಗಾರಿಕೆ ಇಲಾಖೆ ತಂದಿದೆ ಎಂಬ ಸುದ್ದಿಯನ್ನು ಇತ್ತೀಚೆಗೆ ಕೇಳಿದ್ದೆವು. ಮಾರ್ಷಲ್ ಗಳು, ಭದ್ರತಾ ಸಿಬ್ಬಂದಿ ಕಬ್ಬನ್ ಪಾರ್ಕ್ ಒಳಗೆ ಕಟ್ಟುನಿಟ್ಟಿನ ಶಿಸ್ತು ನಿಯಮ ತಂದಿದ್ದು ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.
ಹುಲ್ಲುಹಾಸು ಹೊದಿಕೆಗಳು ಹಾಳಾಗುವುದರಿಂದ ಆಟವಾಡಬಾರದು. ಪೊದೆಗಳ ಮೂಲೆಯಲ್ಲಿ ಜನರು ಕುಳಿತುಕೊಳ್ಳಬಾರದು, ತಿಂಡಿ ತಿನಿಸುಗಳನ್ನು ಒಳಗೆ ತೆಗೆದುಕೊಂಡು ಹೋಗಬಾರದು ಹಾವುಗಳು ಬರುವ ಅಪಾಯವಿದೆ. ಕಸ ಕಡ್ಡಿಗಳನ್ನು ಎಲ್ಲೆಂದರಲ್ಲಿ ಬಿಸಾಕುವುದರಿಂದ ಇಲಿಗಳು, ಹಾವುಗಳ ಸಂತತಿ ಹೆಚ್ಚಾಗಿ ಹಾವಳಿ ಮಾಡುವ ಸಾಧ್ಯತೆಯಿದೆ, ಇದರಿಂದ ಕಬ್ಬನ್ ಪಾರ್ಕ್ ಗೆ ಬರುವ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ, ಹೀಗಾಗಿ ಈ ನಿಯಮ ತಂದಿದ್ದೇವೆ ಎಂದು ಕಬ್ಬನ್ ಪಾರ್ಕ್ ನ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಬಾಲಕೃಷ್ಣ ಹೆಚ್ ಟಿ ಹೇಳುತ್ತಾರೆ.
ಕಬ್ಬನ್ ಪಾರ್ಕ್ ಸಾಮಾನ್ಯವಾಗಿ ಲವರ್ಸ್ ಗಳ ಹಾಟ್ ಸ್ಪಾಟ್. ಎಲ್ಲೆಂದರಲ್ಲಿ ಜೋಡಿ ಕುಳಿತುಕೊಂಡಿರುವಾಗ ಸಾರ್ವಜನಿಕರು ಕುಟುಂಬಸ್ಥರು, ಮಕ್ಕಳ ಜೊತೆ ಓಡಾಡಲು ಮುಜುಗರವಾಗುತ್ತದೆ. ಇದರಿಂದಾಗಿ ಸಾರ್ವಜನಿಕವಾಗಿ ಗಾಂಭೀರ್ಯದಿಂದ ವರ್ತಿಸುವಂತೆ ಭದ್ರತಾ ಸಿಬ್ಬಂದಿ ಹೇಳುತ್ತಾರೆ. ನೈತಿಕ ಪೊಲೀಸ್ ಗಿರಿ ನಮ್ಮ ಕೆಲಸವಲ್ಲ ಎಂದು ಮತ್ತೊಬ್ಬ ಅಧಿಕಾರಿ ಹೇಳುತ್ತಾರೆ. ಆದರೆ ಯಾವುದೇ ಹೊಸ ನಿರ್ದೇಶನಗಳು ಅಥವಾ ಮಾರ್ಗಸೂಚಿಗಳಿಲ್ಲ ಎಂದು ತೋಟಗಾರಿಕೆ ಇಲಾಖೆ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಹೇಳುತ್ತಾರೆ.
ಛಾಯಾಗ್ರಹಣವನ್ನು ನಿಷೇಧಿಸಿದ್ದಕ್ಕಾಗಿ ಅನೇಕ ನೆಟಿಜನ್ಗಳು ಇಲಾಖೆಯನ್ನು ದೂಷಿಸುತ್ತಾರೆ, ಒಂದು ದಶಕದಿಂದ ವೃತ್ತಿಪರ ಫೋಟೋ ಮತ್ತು ವೀಡಿಯೊ ಶೂಟ್ಗಳನ್ನು ನಿಷೇಧಿಸಲಾಗಿದೆ. ಅನೇಕ ಪಕ್ಷಿವೀಕ್ಷಕರು ಮತ್ತು ಪಕ್ಷಿಶಾಸ್ತ್ರಜ್ಞರು ಫ್ಲ್ಯಾಷ್ ನ್ನು ಬಳಸುವುದರಿಂದ ಪ್ರಾಣಿಗಳ ಮೇಲೆ ಪರಿಣಾಮ ಬೀರುತ್ತಿದೆ.ನಾಗರಿಕರು ಈಗಲೂ ಕ್ಯಾಮೆರಾ ಮತ್ತು ಮೊಬೈಲ್ ಫೋನ್ ಬಳಸುತ್ತಾರೆ, ಅವರಿಗೇನು ಸಮಸ್ಯೆಯಿಲ್ಲವಲ್ಲ ಎಂದು ಬಾಲಕೃಷ್ಣ ಹೇಳುತ್ತಾರೆ.
ಆದರೆ ಪ್ರೇಮಿಗಳು, ಜೋಡಿಗಳು ಸಾರ್ವಜನಿಕರ ಮುಂದೆ ಗಾಂಭೀರ್ಯವಾಗಿ ವರ್ತಿಸಬೇಕು ಎಂಬುದು ಅನೇಕರ ಅಭಿಪ್ರಾಯವಾಗಿದೆ.