ಗದಗ: ಮೈಸೂರು ರಾಜ್ಯಕ್ಕೆ ಕರ್ನಾಟಕ ನಾಮಕರಣ ಸುವರ್ಣ ಮಹೋತ್ಸವ ಹಿನ್ನೆಲೆ ಕರ್ನಾಟಕ ಸಂಭ್ರಮ-50 ಕಾರ್ಯಕ್ರಮಕ್ಕೆ ಅಧ್ಧೂರಿ ಸಿಧ್ಧತೆ ಮಾಡಿಕೊಳ್ಳಲಾಗಿದೆ. ಗದಗ ನಗರದಾದ್ಯಂತ ಭರದಿಂದ ತಯಾರಿ ಕಾರ್ಯ, ಎಲ್ಲೆಲ್ಲೂ ಕನ್ನಡದ ಕಂಪು, ರಸ್ತೆಯ ಪಕ್ಕ ಕನ್ನಡ ಬಾವುಟ, ಬಣ್ಣಬಣ್ಣದ ವಿದ್ಯುತ್ ದಿಪಾಲಂಕಾರದಿಂದ ಕಂಗೊಳಿಸ್ತಿರೋ ಗದಗ ನಗರದ ಮಹಾತ್ಮಾ ಗಾಂಧಿ ವೃತ್ತ, ಭೂಮರಡ್ಡಿ ವೃತ್ತ, ಸೇರಿದಂತೆ ಫೀಲ್ಡ್ ಮಾರ್ಶಲ್ ಕೆ ಎಮ್ ಕಾರ್ಯಪ್ಪ ವೃತ್ತ, ಮುಳಗುಂದ ನಾಕಾ ಸೇರಿದಂತೆ ವಿವಿಧ ವೃತ್ತಗಳು ವಿದ್ಯುತ್ ದಿಪಾಲಂಕಾರದಿಂದ ಕಂಗೊಳಿಸುತ್ತಿದೆ.
ನವೆಂಬರ್ 1, 2 ಮತ್ತು 3 ರಂದು ಜರುಗಲಿರೋ ಕಾರ್ಯಕ್ರಮವಾಗಿದ್ದು, ನ. 3 ರಂದು ನಾಡದೇವತೆ ತಾಯಿ ಭುವನೇಶ್ವರಿಗೆ ಪುಷ್ಪಾರ್ಚನೆ ಮೂಲಕ ಕರ್ನಾಟಕ ಸಂಭ್ರಮ-50 ರ ಮೆರವಣಿಗೆ ನಡೆಯಲಿದೆ. ಗದಗ ನಗರದ ದಿ. ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಕಾರ್ಯಕ್ರಮಕ್ಕೆಸಿಎಂ ಸಿಧ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ಆಗಮಿಸಲಿದ್ದಾರೆ. ವಿ. ಪ. ಸಭಾಪತಿ ಬಸವರಾಜ ಹೊರಟ್ಟಿ, ವಿಧಾನ ಸಭೆ ಅಧ್ಯಕ್ಷ ಯು ಟಿ ಖಾದರ, ಸಚಿವ ಶಿವರಾಜ ತಂಗಡಗಿ, ಎಚ್ ಕೆ ಪಾಟೀಲ್ ಅಧ್ಯಕ್ಷತೆಯಲ್ಲಿ ಜರುಗೋ ಕಾರ್ಯಕ್ರಮವಾಗಿದ್ದು, 3 ದಿನಗಳ ಕಾಲ ವಿವಿಧ ಕಾರ್ಯಕ್ರಮಗಳ ಆಯೋಜನೆ ಮಾಡಲಾಗಿದೆ.
The post ಕರ್ನಾಟಕ ಸಂಭ್ರಮ-50 ಕಾರ್ಯಕ್ರಮಕ್ಕೆ ಅದ್ಧೂರಿ ಸಿದ್ಧತೆ: ಎಲ್ಲೆಲ್ಲೂ ಕನ್ನಡದ ಕಂಪು appeared first on Ain Live News.