ಮಂಗಳೂರು : ಮುಸ್ಲಿಂ ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಕಲ್ಕಡ್ಕ ಪ್ರಭಾಕರ ಭಟ್ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಕಸ್ಬಾ ಬೆಂಗರೆಯ ಅಲ್-ಫಲಾಹ್ ಸ್ವಸಹಾಯ ಸಂಘವು ಆಗ್ರಹಿಸಿದೆ.
ಗುರುವಾರ ಸಂಘದ ನಿಯೋಗವೊಂದು ಪಣಂಬೂರು ಠಾಣೆಗೆ ತೆರಳಿ ಈ ಬಗ್ಗೆ ಮನವಿ ಅರ್ಪಿಸಿದೆ. ನಿಯೋಗದಲ್ಲಿ ಸ್ವಸಹಾಯ ಸಂಘದ ಅಧ್ಯಕ್ಷೆ ರುಬಿನಾ ನಝಿರ್ ಬೆಂಗ್ರೆ, ಸೈನಾಝ್, ಮುಸ್ಕಾನ್, ಫಮಿಝಾ, ಬಿಫಾತಿಮಾ, ಹಫ್ಸಾ, ಆಯಿಶಾ, ಅಬಿದಾ, ನಬಿಸಾ. ರುಕಿಯಾ ಉಪಸ್ಥಿತರಿದ್ದರು.