ಬೆಳಗಾವಿ;– ಬೆಂಗಳೂರು, ಹಿಂಡಲಗಾ ಜೈಲು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಗುರುತು ಪತ್ತೆಯಾಗಿದೆ.
ಕಿರಣ ಮೋಷಿ ಗುರುತಿಸಲಾದ ಆರೋಪಿ. ಸದ್ಯ ಈತ ಬೆಂಗಳೂರಿನಲ್ಲಿದ್ದು, ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಓಡಾಡುತ್ತಿದ್ದಾನೆ. ಬಂಧನಕ್ಕೆ ತಂಡ ರಚಿಸಲಾಗಿದ್ದು, ಬೆಂಗಳೂರಿಗೆ ತೆರಳಿದೆ ಎಂದು ನಗರ ಪೊಲೀಸ್ ಆಯುಕ್ತ ಎಸ್.ಎನ್. ಸಿದ್ರಾಮಪ್ಪ ಹೇಳಿದ್ದಾರೆ.
ಆರೋಪಿಯು ತನ್ನ ಪತ್ನಿ ಹೆಸರಿನಲ್ಲಿರುವ ಸೀಮ್ ಬಳಸಿ ಕರೆ ಮಾಡಿದ್ದಾನೆ. ಮೂರು ಬೇರೆಬೇರೆ ಮೊಬೈಲ್ ಸಂಖ್ಯೆಗಳಿಂದ ಕರೆ ಬಂದಿದ್ದು, ಮೂರನ್ನೂ ಜಾಲಾಡಲಾಗಿದೆ. ಒಂದು ಸಂಖ್ಯೆ ಆತನ ಪತ್ನಿ ಹೆಸರಿನಲ್ಲಿರುವುದು ಗೊತ್ತಾಗಿದೆ. ಆರೋಪಿಯ ಜಾಡು ಹಿಡಿಯಲಾಗಿದ್ದು, ಶೀಘ್ರ ಬಂಧಿಸಲಾಗುವುದು’ ಎಂದು ಸಿದ್ರಾಮಪ್ಪ ತಿಳಿಸಿದರು.
The post ಕಾರಾಗೃಹಗಳಿಗೆ ಬಾಂಬ್ ಸ್ಪೋಟಿಸುವುದಾಗಿ ಬೆದರಿಕೆ ಕೇಸ್ – ಆರೋಪಿ ಗುರುತು ಪತ್ತೆ appeared first on Ain Live News.