Home Uncategorized ಕಾಲಮಿತಿಯಲ್ಲಿ 'ಗ್ಯಾರಂಟಿಗಳ' ಅನುಷ್ಠಾನ- ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ 

ಕಾಲಮಿತಿಯಲ್ಲಿ 'ಗ್ಯಾರಂಟಿಗಳ' ಅನುಷ್ಠಾನ- ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ 

19
0

ಉಳಿದ ನಾಲ್ಕು ಭರವಸೆಗಳನ್ನು ಕಾಲಮಿತಿಯಲ್ಲಿ ಜಾರಿಗೊಳಿಸಲಾಗುವುದು ಎಂದು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್‌ಎಸ್‌ ಮಲ್ಲಿಕಾರ್ಜುನ್‌ ಹೇಳಿದ್ದಾರೆ.  ದಾವಣಗೆರೆ: ಕಾಂಗ್ರೆಸ್ ಸರ್ಕಾರ ಮೊದಲ ಗ್ಯಾರಂಟಿ ಶಕ್ತಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಗೊಳಿಸುವುದರೊಂದಿಗೆ ಅದು ಘೋಷಿಸಿದ ಇತರ ನಾಲ್ಕರ ಅನುಷ್ಠಾನದ ಮೇಲೆ ಎಲ್ಲರ ಕಣ್ಣುಗಳು ನಿಂತಿವೆ. ಉಳಿದ ನಾಲ್ಕು ಭರವಸೆಗಳನ್ನು ಕಾಲಮಿತಿಯಲ್ಲಿ ಜಾರಿಗೊಳಿಸಲಾಗುವುದು ಎಂದು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್‌ಎಸ್‌ ಮಲ್ಲಿಕಾರ್ಜುನ್‌ ಹೇಳಿದ್ದಾರೆ. 

ಭಾನುವಾರ ‘ಶಕ್ತಿ ಯೋಜನೆ’ಗೆ ಚಾಲನೆ ನೀಡಿದ ಬಳಿಕ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಮಲ್ಲಿಕಾರ್ಜುನ್, ರಾಜ್ಯದಲ್ಲಿ ಆಗಸ್ಟ್ 15ರೊಳಗೆ ಉಳಿದೆಲ್ಲ ಯೋಜನೆಗಳು ಜಾರಿಯಾಗಲಿವೆ. ಅನ್ನಭಾಗ್ಯ ಯೋಜನೆ, ಗೃಹಲಕ್ಷ್ಮಿ ಯೋಜನೆ, ನಿರುದ್ಯೋಗಿ ಯುವಕರಿಗೆ `3,000, ಡಿಪ್ಲೊಮಾ ಪಡೆದವರಿಗೆ 1,500 ಮತ್ತು ಮುಂದಿನ ತಿಂಗಳುಗಳಲ್ಲಿ 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ಅನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುವುದು ಎಂದರು. 

ಶಕ್ತಿ ಯೋಜನೆ ಉದ್ಘಾಟನೆ ನಂತರ, ಮಲ್ಲಿಕಾರ್ಜುನ್ ಹರಿಹರದವರೆಗೂ ಕೆಎಸ್ ಆರ್ ಟಿಸಿ ಬಸ್ ಚಾಲನೆ ಮಾಡಿ ಸಾರ್ವಜನಿಕರ ಮನ ಗೆದ್ದರು. ದಾವಣಗೆರೆಯಿಂದ ಚಿತ್ರದುರ್ಗಕ್ಕೆ ಮೊದಲ ಟಿಕೆಟ್ ಪಡೆದ ಶಾಂತಮ್ಮ, “ನನ್ನ ಪತಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಬೆಳಿಗ್ಗೆ ಪ್ರಯಾಣಕ್ಕಾಗಿ `85 ಪಾವತಿಸಿದ್ದೆ. ಆದರೆ, ಸಂಜೆ ನಾನು ಉಚಿತವಾಗಿ ಪ್ರಯಾಣಿಸಲು ನನಗೆ ಸಂತೋಷವಾಗಿದೆ” ಎಂದು ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2013ರಲ್ಲಿ ಮಾಡಿದಂತೆ ಐದೂ ಖಾತ್ರಿ ಯೋಜನೆ ಜಾರಿಗೆ ತರುವುದು ಖಚಿತ ಎಂದು ಹೇಳಿದರು.

LEAVE A REPLY

Please enter your comment!
Please enter your name here