ಮಹೇಶ್ ಬಾಬು (Mahesh Babu) ಅವರಿಗೆ 2022 ತುಂಬಾನೇ ಕಹಿಯಾಗಿತ್ತು. ತಮ್ಮ ಕುಟುಂಬದ ಮೂವರನ್ನು ಮಹೇಶ್ ಬಾಬು ಕಳೆದುಕೊಂಡಿದ್ದಾರೆ. ಸೆಪ್ಟೆಂಬರ್ 28ರಂದು ಮಹೇಶ್ ಬಾಬು ತಾಯಿ ಇಂದಿರಾ ದೇವಿ (Indira Devi) ನಿಧನ ಹೊಂದಿದರು. ಆ ಬಳಿಕ ಮಹೇಶ್ ಬಾಬು ತಂದೆ ಕೃಷ್ಣ ಅವರು ಖಿನ್ನತೆಗೆ ಒಳಗಾದರು. ಅವರು ಕೂಡ ಇತ್ತೀಚೆಗೆ ನಿಧನ ಹೊಂದಿದರು. ಈ ವರ್ಷದ ಆರಂಭದಲ್ಲಿ ಕೃಷ್ಣ ಅವರ ಹಿರಿಯ ಪುತ್ರ ರಮೇಶ್ ಬಾಬು ಕೂಡ ಅನಾರೋಗ್ಯದಿಂದ ಇಹಲೋಕ ತ್ಯಜಿಸಿದ್ದರು. ಅವರು ಈ ವರ್ಷ ಒಂದಾದಮೇಲೆ ಒಂದರಂತೆ ನೋವು ಅನುಭವಿಸುತ್ತಲೇ ಬಂದಿದ್ದಾರೆ. ಆದರೆ, ಜೀವನ ಸಾಗಲೇಬೇಕು. ಈ ಕಾರಣಕ್ಕೆ ಮಹೇಶ್ ಬಾಬು ಕೆಲಸಕ್ಕೆ ಮರಳಿದ್ದಾರೆ. ಜಾಹೀರಾತೊಂದರ ಶೂಟಿಂಗ್ನಲ್ಲಿ ಅವರು ಭಾಗಿ ಆಗಿದ್ದಾರೆ.
ಮಹೇಶ್ ಬಾಬು ಅವರ ನಟನೆಯ ‘ಸರ್ಕಾರಿ ವಾರು ಪಾಟ’ ಸಿನಿಮಾ ಈ ವರ್ಷ ತೆರೆಗೆ ಬಂತು. ಈ ಸಿನಿಮಾ ತೆರೆಗೆ ಬಂದ ಬಳಿಕ ತ್ರಿವಿಕ್ರಂ ಶ್ರೀನಿವಾಸ್ ಜತೆ ಅವರು ಸಿನಿಮಾ ಒಪ್ಪಿಕೊಂಡಿದ್ದಾರೆ. ಆದರೆ, ಈ ಚಿತ್ರದ ಕೆಲಸಗಳಿಗೆ ಸಾಕಷ್ಟು ವಿಘ್ನಗಳು ಎದುರಾಗುತ್ತಿವೆ. ಮಹೇಶ್ ಬಾಬು ಕುಟುಂಬಕ್ಕೆ ಒಂದರಮೇಲೆ ಒಂದರಂತೆ ಸಾವಿನ ಸುದ್ದಿಗಳು ಬರುತ್ತಿವೆ. ಮತ್ತೊಂದು ಕಡೆ ಈ ಚಿತ್ರದ ನಾಯಕಿ ಪೂಜಾ ಹೆಗ್ಡೆ ಅವರ ಕಾಲಿಗೆ ಗಾಯ ಆಗಿತ್ತು. ಹೀಗಾಗಿ, ಚಿತ್ರದ ಕೆಲಸಗಳು ವಿಳಂಬ ಆದವು. ಈಗ ಮಹೇಶ್ ಬಾಬು ಮತ್ತೆ ಕೆಲಸಗಳಿಗೆ ಮರಳಿದ್ದಾರೆ.
ಮಹೇಶ್ ಬಾಬು ಮರಳಿ ಕೆಲಸಕ್ಕೆ ಮರಳಿದ್ದೇನೆ ಎನ್ನುವುದನ್ನು ತಿಳಿಸಲು ಹೊಸ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಅವರ ಲುಕ್ ನೋಡಿ ಫ್ಯಾನ್ಸ್ ಖುಷಿಯಾಗಿದ್ದಾರೆ. ಇದು ಜಾಹೀರಾತಿನ ಶೂಟ್ ಆಗಿದ್ದು, ಶೀಘ್ರದಲ್ಲೇ ಅವರು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಲಿದ್ದಾರೆ. 2023ರಲ್ಲಿ ತ್ರಿವಿಕ್ರಂ ಶ್ರೀನಿವಾಸ್ ಜತೆಗಿನ ತೆರೆಗೆ ಬರಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.
ಇದನ್ನೂ ಓದಿ: ತೆಗೆದುಕೊಂಡ ತಪ್ಪು ನಿರ್ಧಾರದಿಂದ ಶ್ರೀಲೀಲಾಗೆ ಹಿನ್ನಡೆ; ಮಹೇಶ್ ಬಾಬು ಸಿನಿಮಾ ಒಪ್ಪಿಕೊಂಡಿದ್ದೇ ತಪ್ಪಾಯ್ತಾ?
ತ್ರಿವಿಕ್ರಂ ಶ್ರೀನಿವಾಸ್ ಜತೆಗಿನ ಸಿನಿಮಾ ಬಳಿಕ ರಾಜಮೌಳಿ ಜತೆ ಮಹೇಶ್ ಬಾಬು ಕೈ ಜೋಡಿಸಲಿದ್ದಾರೆ. ಈ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆ ಇದೆ. ರಾಜಮೌಳಿ ಚಿತ್ರದಲ್ಲಿ ನಟಿಸುವ ನಾಯಕರು ಪಾತ್ರಕ್ಕಾಗಿ ತೂಕ ಹೆಚ್ಚಿಸಿಕೊಳ್ಳುತ್ತಾರೆ. ಇತ್ತೀಚೆಗೆ ಅದು ಕಾಮನ್ ಆಗಿದೆ. ಆದರೆ, ಈ ಚಿತ್ರದಲ್ಲಿ ಆ ರೀತಿ ಇರುವುದಿಲ್ಲ ಎನ್ನಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ