Home Uncategorized ಕೇಂದ್ರವು ರಾಜ್ಯಗಳ ವಿರುದ್ಧ ಸಮರ ಸಾರುತ್ತಿದೆ: ಅರವಿಂದ ಕೇಜ್ರಿವಾಲ್

ಕೇಂದ್ರವು ರಾಜ್ಯಗಳ ವಿರುದ್ಧ ಸಮರ ಸಾರುತ್ತಿದೆ: ಅರವಿಂದ ಕೇಜ್ರಿವಾಲ್

17
0

ಹೊಸದಿಲ್ಲಿ : ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ಗುರುವಾರ ವಾಗ್ದಾಳಿ ನಡೆಸಿದ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು, ಅದು ಪ್ರತಿಪಕ್ಷಗಳ ನೇತೃತ್ವದ ರಾಜ್ಯ ಸರಕಾರಗಳ ವಿರುದ್ಧ ಸಮರವನ್ನು ಸಾರುತ್ತಿದೆ ಎಂದು ಆರೋಪಿಸಿದರು.

ದಿಲ್ಲಿಯ ಜಂತರ್ ಮಂತರ್ನಲ್ಲಿ ಕೇಂದ್ರದ ವಿರುದ್ಧ ಕೇರಳದ ಎಡರಂಗವು ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಕೇಜ್ರಿವಾಲ್, ‘ಪ್ರತಿಪಕ್ಷಗಳ ನೇತೃತ್ವದ ಸರಕಾರಗಳು ದೇಶದಲ್ಲಿಯ 70 ಕೋ.ಜನರನ್ನು ಪ್ರತಿನಿಧಿಸುತ್ತಿವೆ. ಈ ರಾಜ್ಯಗಳ ವಿರುದ್ಧ ಬಿಜೆಪಿ ಸಮರ ಸಾರಿದೆ. ಅವರು ನಮ್ಮೊಂದಿಗೆ ಭಾರತ-ಪಾಕಿಸ್ತಾನ ಸ್ಥಿತಿಯನ್ನು ಸೃಷ್ಟಿಸಿದ್ದಾರೆ. ಪ್ರತಿಪಕ್ಷ ಸರಕಾರಗಳಿಗೆ ಕಿರುಕುಳಗಳನ್ನು ನೀಡಲು ಎಲ್ಲ ತಂತ್ರಗಳನ್ನೂ ಕೇಂದ್ರವು ಬಳಸುತ್ತಿದೆ ’ಎಂದು ಆರೋಪಿಸಿದರು.

ಕೇಂದ್ರವು ರಾಜ್ಯ ಸರಕಾರಗಳಿಗೆ ಹಣಕಾಸು ಒದಗಿಸುತ್ತಿಲ್ಲ. ರಾಜ್ಯಪಾಲರು ಮತ್ತು ಉಪ ರಾಜ್ಯಪಾಲರು ರಾಜ್ಯ ಸರಕಾರಗಳ ಕಾರ್ಯ ನಿರ್ವಹಣೆಯಲ್ಲಿ ಮೂಗು ತೂರಿಸುವಂತೆ ಮಾಡುತ್ತಿದೆ ಮತ್ತು ಪ್ರತಿಪಕ್ಷ ನಾಯಕರ ವಿರುದ್ಧ ಕೇಂದ್ರೀಯ ಏಜೆನ್ಸಿಗಳನ್ನು ಛೂ ಬಿಡುತ್ತಿದೆ ಎಂದೂ ಕೇಜ್ರಿವಾಲ್ ಆರೋಪಿಸಿದರು.

LEAVE A REPLY

Please enter your comment!
Please enter your name here