ಕೈಕಂಬ: ಇಲ್ಲಿನ ಝಾರ ಕನ್ವೆಂಷನ್ ಸೆಂಟರ್ ನ ಎರಡನೇ ವರ್ಷಾಚರಣೆ ಮತ್ತು ಮಾಸ್ಟರ್ ಶೆಫ್-2023 ವಿಜೇತ ಮುಹಮ್ಮದ್ ಆಶಿಕ್ ಅವರನ್ನು ಸನ್ಮಾನಿಸುವ ಕಾರ್ಯಕ್ರಮ ಮಂಗಳವಾರ ಝಾರ ಕನ್ವೆಂಷನ್ ಸೆಂಟರ್ ನಲ್ಲಿ ನಡೆಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಮಾಸ್ಟರ್ ಶೆಫ್ ವಿಜೇತ ಮುಹಮ್ಮದ್ ಆಶಿಕ್ ಅವರು, ನನಗೆ ಸಣ್ಣ ವಯಸ್ಸಿನಲ್ಲೇ ಅಡುಗೆಯ ಪ್ಯಾಶನ್ ಇತ್ತು. ಕಳೆದ ಬಾರಿ ಮಾಸ್ಟರ್ ಶೆಫ್ ಸ್ಪರ್ಧೆ ವೇಳೆ ಆಯ್ಕೆಯಾಗಿರಲಿಲ್ಲ. ಆ ಸಮಯದಲ್ಲಿ ಮನೋಸ್ಥೈರ್ಯ ಕಳೆದುಕೊಂಡಿದ್ದೆ. ಆಗ ನನ್ನ ತಾಯಿ ಆತ್ಮಸ್ಥೈರ್ಯ ತುಂಬಿದ್ದರು. ಈ ಬಾರಿಯ ಮಾಸ್ಟರ್ ಶೆಫ್ ಸ್ಪರ್ಧೆಯ ಸಂದರ್ಭದಲ್ಲಿ ನನ್ನ ತಾಯಿ ಅಸೌಖ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಹಾಗಾಗಿ ಸ್ಪರ್ಧೆಯಲ್ಲಿ ಭಾಗವಹಿಸದಿರಲು ನಿರ್ಧರಿಸಿದ್ದೆ. ಆದರೆ, ಅಂತಹಾ ಪರಿಸ್ಥಿತಿಯಲ್ಲೂ ನನ್ನ ತಾಯಿ ನೀಡಿದ ಪ್ರೋತ್ಸಾಹದ ಫಲವಾಗಿ ಮಾಸ್ಟರ್ ಶೆಫ್ ಆಗಿ ಆಯ್ಕೆಯಾದೆ ಎಂದರು.
ಇಂದು ನನ್ನನ್ನು ಕರೆದು ನೂರಾರು ಮಂದಿಯ ಸಮ್ಮುಖದಲ್ಲಿ ಗುರುತಿಸಿ ಸನ್ಮಾನಿಸಿದ ಝಾರ ಕನ್ವೆಂಷನ್ ಸೆಂಟರ್ ನ ಸರ್ವರಿಗೂ ಆಭಾರಿಯಾಗಿದ್ದೇನೆ ಎಂದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಝಾರ ಸಂಸ್ಥಾಪಕ ಝಕರಿಯಾ ಜೋಕಟ್ಟೆ, ಯುವಕರು ತಮ್ಮ ಆಯ್ಕೆಯ ಉತ್ತಮ ಮಾರ್ಗದಲ್ಲಿ ಪರಿಶ್ರಮದೊಂದಿಗೆ ನಡೆದಾಗ ಯಶಸ್ಸು ಪಡೆಯಲು ಸಾಧ್ಯ. ಮಾಸ್ಟರ್ ಶೆಫ್ ಆಗಿ ಮಂಗಳೂರಿನ ಹೆಸರನ್ನು ದೇಶ ವಿದೇಶದಲ್ಲಿ ಹರಡಿದ ಮುಹಮ್ಮದ್ ಆಶಿಕ್ ಅವರ ಮುಂದಿನ ಜೀವನಕ್ಕೆ ಶುಭ ಹಾರೈಸಿದರು.
ಸಮಾರಂಭದಲ್ಲಿ ಝಾರ ಕೊ-ಫೌಂಡರ್ ಸೈಫ್, ಶರೀಫ್ ವೈಟ್ ಸ್ಟೋನ್, ಝಹೀರ್ ಝಕರಿಯಾ, ಝಾಹಿದ್ ಝಕರಿಯಾ, ಸಿ.ಆರ್. ಅಬೂಬಕರ್, ಡೀಲ್ಸ್ ಆಸಿಫ್, ಝಾರ ಕನ್ವೆಂಷನ್ ನ ಇಂಜಿನಿಯರ್ ಅಕೀಲ್, ಬಶೀರ್, ಝಾರ ಕನ್ವೆಂಷನ್ ಸೆಂಟರ್ ನ ಜನರಲ್ ಮ್ಯಾನೇಜರ್ ಆರಿಸ್ ಮೊದಲಾದವರು ಉಪಸ್ಥಿತರಿದ್ದರು.