Home Uncategorized ಕೈಕೊಟ್ಟ ಮುಂಗಾರು ಮಳೆ: ವರುಣನ ಕೃಪೆಗಾಗಿ ಪರ್ಜನ್ಯ ಯಾಗ

ಕೈಕೊಟ್ಟ ಮುಂಗಾರು ಮಳೆ: ವರುಣನ ಕೃಪೆಗಾಗಿ ಪರ್ಜನ್ಯ ಯಾಗ

21
0

ಗದಗ: ಜಿಲ್ಲೆಯಲ್ಲಿ ಭೀಕರ ಬರ ತಾಂಡವಾಡುತ್ತಿದೆ. ಬಿತ್ತಿದ ಬೆಳೆಗಳು ಬಿಸಿಲಿನ ತಾಪಕ್ಕೆ ಒಣಗಿ ಹೋಗಿವೆ. ಅನ್ನದಾತ ಮತ್ತೆ ಸಂಕಷ್ಟಕ್ಕೆ ಸಿಲುಕಿ ವಿಲವಿಲ ಅಂತಿದ್ದಾನೆ. ಹೀಗಾಗಿ ಗದಗ ತಾಲೂಕಿನ ತಿಮ್ಮಾಪೂರ ಗ್ರಾಮದ ಶ್ರೀ ಮಾರುತೇಶ್ವರ ದೇವಸ್ಥಾನದಲ್ಲಿ ಗಂಗಾಧರ ಸಂಗಮ ಗುರುಜಿ ಸಮ್ಮುಖದಲ್ಲಿ ಮಳೆರಾಯನ ಕೃಪೆಗಾಗಿ ಪರ್ಜನ್ಯ ಯಾಗ ಮಾಡಲಾಗಿದೆ..

ಯಾಗದ ಹಿನ್ನೆಲೆಯಲ್ಲಿ ಶ್ರೀ ಮಾರುತೇಶ್ವರ ದೇವಸ್ಥಾನವನ್ನು ಹೂವು, ತಳಿರು ತೋರಣಗಳಿಂದ ಅಲಂಕಾರ ಮಾಡಲಾಗಿತ್ತು. ಮಾರುತೇಶ್ವರನಿಗೆ ಕುಂಕುಮ ಪೂಜೆ ಹಾಗೂ ಬಾಳೆಹಣ್ಣಿನ ಪೂಜೆಗಳಿಂದ ವಿಶೇಷವಾಗಿ ಅಲಂಕರಿಸಿ ಪರ್ಜನ್ಯ ಯಾಗ ಮಾಡಲಾಗಿದೆ. ಯಾಗಕ್ಕೆ ಗಂಧದ ಕಟ್ಟಿಗೆ ಗೋವಿನ ತುಪ್ಪ, ಹಾಲು, ಮೊಸರು ಹಾಗೂ ಪಂಚ ನದಿಗಳಿಂದ ತಂದ ಜಲದಿಂದ ಅಗ್ನಿಕೊಂಡವನ್ನು ನಿರ್ಮಿಸಿ ಮೂರು ಗಂಟೆಗಳ ಕಾಲ ಮಂತ್ರ ಪಠಿಸುವುದರ ಮೂಲಕ ವರುಣನ ಕೃಪೆಗಾಗಿ ಪರ್ಜನ್ಯ ಯಾಗ ಮಾಡಲಾಯಿತು. ನೂರಾರು ಭಕ್ತರು ಯಾಗದಲ್ಲಿ ಭಾಗಿಯಾಗಿದ್ದರು.

The post ಕೈಕೊಟ್ಟ ಮುಂಗಾರು ಮಳೆ: ವರುಣನ ಕೃಪೆಗಾಗಿ ಪರ್ಜನ್ಯ ಯಾಗ appeared first on Ain Live News.

LEAVE A REPLY

Please enter your comment!
Please enter your name here