ತುಮಕೂರು;- ಎಸಿ ಕೋರ್ಟ್ ಕಲಾಪಕ್ಕೂ ವಿದ್ಯುತ್ ಲೋಡ್ ಶೆಡ್ಡಿಂಗ್ ಎಫೆಕ್ಟ್ ತಟ್ಟಿದೆ.
ವಿದ್ಯುತ್ ಕೈಕೊಟ್ಟ ಹಿನ್ನೆಲೆ, ಮೊಬೈಲ್ ಟಾರ್ಚ್ ನಲ್ಲೇ ತುಮಕೂರು ಎಸಿ ಕೋರ್ಟ್ ಕಲಾಪ ನಡೆಸಿದ್ದಾರೆ.
ವಿದ್ಯುತ್ ಕೈಕೊಟ್ಟ ಹಿನ್ನಲೆ ತುಮಕೂರು ಎಸಿ ಗೌರವ ಕುಮಾರ್ ಶೆಟ್ಟಿ ಮೊಬೈಲ್ ಟಾರ್ಚ್ನಲ್ಲೇ ಕೋರ್ಟ್ ಕಲಾಪ ನಡೆಸಿದ್ದಾರೆ.
ತುಮಕೂರು ಜಿಲ್ಲಾಧಿಕಾರಿ ಕಚೇರಿಯ ನ್ಯಾಯಲಯದ ಸಂಕೀರ್ಣದಲ್ಲಿ ಬಾಕಿ ಇದ್ದ ಪ್ರಕರಣಗಳ ವಿಚಾರಣೆ ನಡೆಸಲಾಯ್ತು. ಆ ಸಂದರ್ಭದಲ್ಲಿ ಬೆಸ್ಕಾಂ ಸಿಬ್ಬಂದಿ ಲೋಡ್ ಶೆಡ್ಡಿಂಗ್ ಮಾಡಿದ್ದಾರೆ. ಹೀಗಾಗಿ ಪರ್ಯಾಯ ವ್ಯವಸ್ಥೆ ಇಲ್ಲದೇ ಮೊಬೈಲ್ ಟಾರ್ಚ್ ಬಳಸಿ ಕಲಾಪ ನಡೆಸಲಾಯ್ತು.
ಮೊಬೈಲ್ ಟಾರ್ಚ್ ಹಿಡಿದು ತುಮಕೂರು ಎಸಿ ಗೌರವ್ ಕುಮಾರ್ ಶೆಟ್ಟಿ, ಕೋರ್ಟ್ ಕಲಾಪ ನಡೆಸಿದ್ದಾರೆ.
ತುಮಕೂರು ಜಿಲ್ಲಾಧಿಕಾರಿ ಕಚೇರಿಯ ನ್ಯಾಯಲಯದ ಸಂಕೀರ್ಣದಲ್ಲಿ ಘಟನೆ ಜರುಗಿದೆ. ಸದ್ಯ ಜಿಲ್ಲಾಧಿಕಾರಿ ಕಚೇರಿಯಲ್ಲೇ ಹೀಗಾದರೇ ಜನಸಾಮಾನ್ಯರ ಪಾಡೇನು ಅನ್ನೋ ಪ್ರಶ್ನೆ ಉದ್ಭವವಾಗಿದೆ.
The post ಕೋರ್ಟ್ ಕಲಾಪಕ್ಕೂ ವಿದ್ಯುತ್ ಲೋಡ್ ಶೆಡ್ಡಿಂಗ್ ಎಫೆಕ್ಟ್ -ಟಾರ್ಚ್ನಲ್ಲೇ ಪ್ರಕರಣಗಳ ವಿಚಾರಣೆ ನಡೆಸಿದ AC appeared first on Ain Live News.