ಬೆಂಗಳೂರು;– ಕ್ಷೇತ್ರದ ಅನುದಾನದ ಬಗ್ಗೆ ನನ್ನನ್ನು ದೂರುವ ಅಗತ್ಯವಿಲ್ಲ ಎಂದು ಮುನಿರತ್ನ ಗೆ ಡಿಕೆ ಸುರೇಶ್ ಟಾಂಗ್ ಕೊಟ್ಟಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಮುನಿರತ್ನ ಬಹಳ ದೊಡ್ಡ ಸಿನಿಮಾ ನಿರ್ಮಾಪಕರು. ಅವರು ಇನ್ನೂ ಏನೇನು ಡ್ರಾಮಾ ಸ್ಕ್ರಿಪ್ಟ್ ಮಾಡಿಕೊಂಡಿದ್ದಾರೆ ಮಾಡಲಿ. ಅಕ್ರಮ ನಡೆದಿದೆ ಎಂದು ಅವರೇ ಪತ್ರ ಬರೆದಿದ್ದಾರೆ. ಅದರ ಪ್ರಕಾರ ತನಿಖೆ ನಡೆಯುತ್ತಿದ್ದರೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನನಗೆ ಅವರು ಪತ್ರ ಬರೆದಿದ್ದು ಅದಕ್ಕೆ ನಾನು ಉತ್ತರ ನೀಡುತ್ತೇನೆ. ಬಿಬಿಎಂಪಿ ಕಮಿಷನರ್ ಅವರಿಗೆ ಬರೆದು ಅವರ ಕ್ಷೇತ್ರದ ಒಂದು ವಾರ್ಡ್ ಸಂಬಂಧಿಸಿದ ಕಾಮಗಾರಿಗಳಲ್ಲಿ ಅಕ್ರಮ ನಡೆದಿದ್ದು, ಸಿಬಿಐಗೆ ಕೊಡಬೇಕು ಎಂದಿದ್ದರು. ಅದಕ್ಕೂ ಮೊದಲು ರಾಜ್ಯ ಸರ್ಕಾರ ತನಿಖೆ ನಡೆಸುತ್ತಿದೆ. ಅವರು ಇನ್ನೂ ಏನೇನು ನಾಟಕ ಆಡುತ್ತಾರೋ ನೋಡೋಣ ಎಂದರು.
ಇನ್ನೂ ಮಾವತ್ತೂರು ಕೆರೆಯಲ್ಲಿ ಶಾಶ್ವತವಾಗಿ ನೀರನ್ನು ಸಂಗ್ರಹಿಸುವ ಯೋಜನೆ ರೂಪಿಸಿದ್ದು ಕೆಲವೇ ತಿಂಗಳುಗಳಲ್ಲಿ ಕಾಮಗಾರಿ ಆರಂಭಿಸುವುದಾಗಿ ಸಂಸದ ಡಿ.ಕೆ ಸುರೇಶ್ ತಿಳಿಸಿದರು
#
The post ಕ್ಷೇತ್ರದ ಅನುದಾನದ ಬಗ್ಗೆ ನನ್ನನ್ನು ದೂರುವ ಅಗತ್ಯವಿಲ್ಲ – ಮುನಿರತ್ನ ಗೆ ಡಿಕೆ ಸುರೇಶ್ ಟಾಂಗ್ appeared first on Ain Live News.