Home Uncategorized ಚಾಮರಾಜನಗರ: ಹುಲಿ ದಾಳಿಗೆ ವ್ಯಕ್ತಿ ಬಲಿ

ಚಾಮರಾಜನಗರ: ಹುಲಿ ದಾಳಿಗೆ ವ್ಯಕ್ತಿ ಬಲಿ

34
0

ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಹುಲಿ ದಾಳಿಯಿಂದ ಬುಡಕಟ್ಟು ಸಮುದಾಯಕ್ಕೆ ಸೇರಿದ  ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

ಬುಡಕಟ್ಟು ಜೇನುಕುರುಬ ಸಮುದಾಯ ಆಡಿನ ಕಣಿವೆಯ ಬಸವ (50) ಹುಲಿ ದಾಳಿಗೆ ಬಲಿಯಾದ ವ್ಯಕ್ತಿ. ದಟ್ಟ ಅರಣ್ಯದ ಅಂಚಿನಲ್ಲಿ ಇವರ ಮೃತದೇಹ ಅರ್ಧಂಬರ್ಧ ತಿಂದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತ ವ್ಯಕ್ತಿ ಕುರಿ ಮೇಯಿಸಲು ಹೋಗಿದ್ದು, ಈ ವೇಳೆ ಹುಲಿ ದಾಳಿ ಮಾಡಿದೆ ಎಂದು ತಿಳಿದು ಬಂದಿದೆ.

ಮೃತ ವ್ಯಕ್ತಿ ಬಸವ ಅವರು ಸೋಮವಾರ ಕುರಿಗಳನ್ನು ಮೇಯಿಸಲು  ಕಾಡಿಗೆ ತೆರಳಿದ್ದರು. ಆದರೆ ಅವರು ಮನೆಗೆ ವಾಪಸ್ ಆಗಿರಲಿಲ್ಲ. ಕೊನೆಗೆ ಕುಟುಂಬಸ್ಥರು ಮಂಗಳವಾರ ಅರಣ್ಯ ಇಲಾಖೆಯವರಿಗ ಮಾಹಿತಿ ನೀಡಿ ಹುಡುಕಾಟ ನಡೆಸಿದಾಗ ಅರಣ್ಯ ಪ್ರದೇಶದ ಅಂಚಿನಲ್ಲಿ ಬರೀ ಮುಖ ಹಾಗೂ ದೇಹದ ಸ್ವಲ್ಪಭಾಗ ಇರುವ ಸ್ಥಿತಿಯಲ್ಲಿ ಬಸವನ ಮೃತ ದೇಹ ಸಿಕ್ಕಿತ್ತು. ಅಲ್ಲಿಯೇ ಕತ್ತಿ, ಹಗ್ಗ ಪತ್ತೆಯಾಗಿದ್ದವು. ಇದನ್ನು ಗಮನಿಸಿದ ಪೊಲೀಸರಿಗೆ ಹುಲಿ ದಾಳಿಯಾಗಿರುವುದು ಖಚಿತವಾಗಿತ್ತು.

ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುದ್ದಾರೆ.

LEAVE A REPLY

Please enter your comment!
Please enter your name here