ಬೆಂಗಳೂರು: ರಾಜ್ಯದ ಬೆಳೆಗಾರರಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಸಾಲ ಮರುಪಾವತಿಸಲಾಗದ ಕಾಫಿ ಎಸ್ಟೇಟ್ಗಳನ್ನು ಹರಾಜು ಮಾಡುವುದನ್ನು ಬ್ಯಾಂಕುಗಳು ನಿಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಸಾಲ ಮರುಪಾವತಿಸಲಾಗದ ಕಾಫಿ ಎಸ್ಟೇಟ್ಗಳನ್ನು ಹರಾಜು ಮಾಡಲು ರಾಷ್ಟ್ರೀಕೃತ ಬ್ಯಾಂಕುಗಳಿಗೆ ಅಧಿಕಾರ ನೀಡುವ ಸರ್ಫಾಸಿ ಕಾಯ್ದೆ ಜಾರಿಯಾದ ನಂತರ ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳ ಕಾಫಿ ಬೆಳೆಗಾರರು ಹತಾಶೆಯಲ್ಲಿದ್ದರು.
“ಕಠೋರ” ಸರ್ಫಾಸಿ ಕಾಯ್ದೆಯನ್ನು ರದ್ದುಗೊಳಿಸುವಂತೆ ಹಲವಾರು ಸಂಘಗಳು ಕೇಂದ್ರಕ್ಕೆ ಮನವಿ ಮಾಡಿದ್ದವು ಮತ್ತು ಉಡುಪಿ–ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಕಾನೂನನ್ನು ರದ್ದುಗೊಳಿಸುವುದಾಗಿ ಭರವಸೆ ನೀಡಿದ್ದರು.
ಪೂಜಾರಿ ನೇತೃತ್ವದ ಸಂಸದರ ನಿಯೋಗವು ಮಂಗಳವಾರ ಮಾಜಿ ಪ್ರಧಾನಿ ಎಚ್ಡಿ ದೇವೇಗೌಡರ ಸಮ್ಮುಖದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಸರ್ಫಾಸಿ ಕಾಯ್ದೆ ಕಾಫಿ ಬೆಳೆಗಾರರ ಜೀವನವನ್ನು ಹೇಗೆ ಶೋಚನೀಯಗೊಳಿಸುತ್ತಿದೆ ಎಂಬುದರ ಕುರಿತು ಚರ್ಚಿಸಿತು.
ಸಮಸ್ಯೆಗಳನ್ನು ಬಂಡವಾಳ ಮಾಡಿಕೊಂಡು ಕೆಲವು ಬ್ಯಾಂಕರ್ಗಳ ಸಹಾಯದೊಂದಿಗೆ, ಕೆಲವು ಮಧ್ಯವರ್ತಿಗಳು ಸುಸ್ತಿದಾರರ ಎಸ್ಟೇಟ್ಗಳನ್ನು ದೋಚಲು ಬಲೆಗಳನ್ನು ಹಾಕುತ್ತಿದ್ದಾರೆ ಎಂದು ವರದಿಯಾಗಿದೆ.
ಕರ್ನಾಟಕದ ಕಾಫಿ ಬೆಳೆಗಾರರಲ್ಲಿ ಶೇ. 90 ಕ್ಕಿಂತ ಹೆಚ್ಚು ಜನರು ಸಣ್ಣ ಪ್ರಮಾಣದ ಭೂಮಿಯನ್ನು ಹೊಂದಿದ್ದಾರೆ. ಹೆಚ್ಚಿನ ಸುಸ್ತಿದಾರರಿಗೆ ತಮ್ಮ ಭೂಮಿಯನ್ನು ಆನ್ಲೈನ್ನಲ್ಲಿ ಹರಾಜು ಮಾಡಲಾಗುತ್ತಿದೆ ಎಂದು ತಿಳಿದಿರಲಿಲ್ಲ. ಅವರ ಕಳವಳಗಳನ್ನು ಪರಿಶೀಲಿಸುವುದಾಗಿ ಅವರು ನಿಯೋಗಕ್ಕೆ ಭರವಸೆ ನೀಡಿದ್ದರು.
ನಿಯೋಗದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ, ಸಿ.ಎನ್. ಮಂಜುನಾಥ್, ಕೋಟ ಶ್ರೀನಿವಾಸ ಪೂಜಾರಿ ಮತ್ತು ಟಿ.ಡಿ. ಮಲ್ಲೇಶ್, ಕೋಟ ಪೂಜಾರಿ ಮತ್ತು ದೇವೇಗೌಡ ಇದ್ದರು.
