ಪುತ್ತೂರು: ಸೈಯ್ಯದ್ ಅಬ್ದುಸ್ಸಲಾಂ ತಂಙಳ್ ಅವರ ಹೆಸರಿನಲ್ಲಿ 2 ವರ್ಷಕ್ಕೊಮ್ಮೆ ಅಚರಿಸಿಕೊಂಡು ಬರುತ್ತಿರುವ ಸಾಲ್ಮರ ಸೈಯ್ಯದ್ ಮಲೆ ಉರೂಸ್ ಸಮಾರಂಭವು ಜ.4ರಿಂದ 7ರ ತನಕ ನಾಲ್ಕು ದಿನಗಳ ಕಾಲ ನಡೆಯಲಿದೆ ಎಂದು ಉರೂಸ್ ಕಮಿಟಿ ಅಧ್ಯಕ್ಷ ಅಬ್ದುಲ್ ರಶೀದ್ ಹಾಜಿ ಬಾಯಾರು ಮತ್ತು ಜಮಾಅತ್ ಕಮಿಟಿ ಅಧ್ಯಕ್ಷ ಅಬ್ದುಲ್ ಹಮೀದ್ ಸಾಲ್ಮರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಜ.4ರಂದು ಅಸ್ಸಯ್ಯದ್ ಎಸ್.ಎಂ. ಮುಹಮ್ಮದ್ ತಂಙಳ್ ಸಾಲ್ಮರ ದುವಾ ನಡೆಸಲಿದ್ದಾರೆ. ಶೈಖುನಾ ಉಸ್ಮಾನುಲ್ ಫೈಝಿ ತೋಡಾರು ಉದ್ಘಾಟನೆ ನೆರವೇರಿಸಲಿದ್ದಾರೆ. ಅಶ್ರಫ್ ರಹ್ಮಾನಿ ಚೌಕಿ ಕೇರಳ ಮುಖ್ಯ ಪ್ರಭಾಷಣ ನೀಡಲಿದ್ದಾರೆ.
ಜ.5ರಂದು ಅಸ್ಸಯದ್ ಅಬೂಬಕ್ಕರ್ ತಂಙಳ್ ಕೆಮ್ಮಾಯಿ ದುವಾ ನಡೆಸಲಿದ್ದಾರೆ. ಮುಹಮ್ಮದ್ ಶರೀಫ್ ತಂಙಳ್ ಇರ್ಫಾನಿ ಅಲ್ ಮಖ್ದೂಮಿ ಕಣ್ಣೂರು ಮುಖ್ಯ ಪ್ರಭಾಷಣ ನೀಡಲಿದ್ದಾರೆ. ಜ.6ರಂದು ಅಸ್ಸಯಿದ್ ಅಹ್ಮದ್ ಪೂಕೋಯ ತಂಙಳ್ ಪುತ್ತೂರು ದುವಾ ನಡೆಸಲಿದ್ದಾರೆ. ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ ಮುಖ್ಯ ಪ್ರಭಾಷಣ ನೀಡಲಿದ್ದಾರೆ.
ಜ.7ರಂದು ಸಮಾರೋಪ ಸಮಾರಂಭ ನಡೆಯಲಿದೆ. ಅಸ್ಸಯಿದ್ ಎನ್ಪಿಎಂ ಶರಫುದ್ದೀನ್ ತಂಙಳ್ ಅಲ್ಬುಖಾರಿ ಕುನ್ನುಂಗೈ ದುವಾ ನಡೆಸಲಿದ್ದಾರೆ. ಅಬ್ದುಲ್ ಗಫೂರ್ ಮೌಲವಿ ಕೀಚೇರಿ ಮುಖ್ಯ ಪ್ರಭಾಷಣ ನೀಡಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಉರೂಸ್ ಕಮಿಟಿ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಬಾತಿಷ ಸಾಲ್ಮರ, ಕೋಶಾಧಿಕಾರಿ ಅಬೂಬಕ್ಕರ್ ಕೋಲ್ಪೆ ಉಪಸ್ಥಿತರಿದ್ದರು.