ಶ್ರೀರಂಗಪಟ್ಟಣ: ಟೋಲ್ ಕಟ್ಟಲಾಗದೆ ಟೋಲ್ ನ ಗೇಟ್ ಮುರಿದು ಕಾರು ಚಲಾಯಿಸಿ ಅಂಬೇಡ್ಕರ್ ಸೇನೆ ರಾಜ್ಯಧ್ಯಕ್ಷ ನ ದರ್ಪ ತೋರಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು ಟೋಲ್ ನಲ್ಲಿ ನಡೆದಿದೆ. ಅಂಬೇಡ್ಕರ್ ಸೇನೆಯ ರಾಜ್ಯಾಧ್ಯಕ್ಷ ನಾನು ಟೋಲ್ ಕಟ್ಟಲ್ಲ ಎಂದು ದರ್ಪ ತೋರಿದ್ದು, ಹೆದ್ದಾರಿ ಟೋಲ್ ಕಟ್ಟಲೆಬೇಕೆಂದು ಟೋಲ್ ಸಿಬ್ಬಂದಿ ಪಟ್ಟು ಹಿಡಿದಿದ್ದು,
ಟೋಲ್ ಕಟ್ಟದೆ ಕೆಲ ಕಾಲ ಸಿಬ್ಬಂದಿ ಜೊತೆ ಮಾತಿನ ಚಕಮಕಿ ನಡೆದಿದೆ. ಬಳಿಕ ಕಾರು ರಿವರ್ಸ್ ತೆಗೆದು ವೇಗವಾಗಿ ಬಂದು ಟೋಲ್ ನ ಗೇಟ್ ಗೆ ಗುದ್ದಿ ಕಾರಿನೊಂದಿಗೆ ಪರಾರಿಯಾಗಿದ್ದಾನೆ. ದರ್ಪ ಮೆರೆದು ಗೇಟ್ ಜಖಂಗೊಳಿಸಿದ ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷನ ವಿರುದ್ದ ಟೋಲ್ ಸಿಬ್ಬಂದಿ ದೂರು ನೀಡಿದ್ದು, ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
The post ಟೋಲ್ ನ ಗೇಟ್ ಮುರಿದು ಕಾರು ಚಲಾಯಿಸಿದ ಭೂಪ.! ವಿಡಿಯೋ ವೈರಲ್ appeared first on Ain Live News.