Home Uncategorized ಡಾ. ಅಬ್ದುಸ್ಸಲಾಂ ಮುಸ್ಲಿಯಾರ್ ದೇವರ್ಶೋಲಗೆ ಸಯ್ಯಿದ್ ಪೊಸೋಟ್ ತಂಙಳ್ ಪುರಸ್ಕಾರ

ಡಾ. ಅಬ್ದುಸ್ಸಲಾಂ ಮುಸ್ಲಿಯಾರ್ ದೇವರ್ಶೋಲಗೆ ಸಯ್ಯಿದ್ ಪೊಸೋಟ್ ತಂಙಳ್ ಪುರಸ್ಕಾರ

40
0

ಉಳ್ಳಾಲ: ಉತ್ತರ ಕರ್ನಾಟಕದ ಪ್ರಮುಖ ಶಿಕ್ಷಣ ಕೇಂದ್ರವಾದ ಮುಈನುಸುನ್ನಾ ವಿದ್ಯಾಸಂಸ್ಥೆ ಹಾವೇರಿ ಇದರ ವತಿಯಿಂದ ಸಯ್ಯಿದ್ ಪೊಸೋಟ್ ತಂಙಳ್ ಪುರಸ್ಕಾರವನ್ನು ತಮಿಳುನಾಡಿನ ನೀಲಗಿರಿ ಜಿಲ್ಲೆಯ ಧರ್ಮ ವಿದ್ವಾಂಸ, ಸಮಾಜ ಸೇವಕ ಡಾ. ಅಬ್ದುಸ್ಸಲಾಂ ಮುಸ್ಲಿಯಾರ್ ದೇವರ್ಶೋಲ ಅವರಿಗೆ ನೀಡಲಾಯಿತು.

ಹಾವೇರಿ ಮುಈನುಸುನ್ನಾ ವಿದ್ಯಾಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಅಧ್ಯಾತ್ಮ ಗುರು ಸಯ್ಯಿದ್ ಉಮರುಲ್ ಫಾರೂಕ್ ಅಲ್ ಬುಖಾರಿ ಪೊಸೋಟ್ ತಂಙಳ್ ಅವರ ಹೆಸರಿನಲ್ಲಿ ನೀಡಲಾಗುವ ಪ್ರಸ್ತುತ ಸಮಾಜ ಸೇವಾ ಪುರಸ್ಕಾರಕ್ಕೆ, 2000ಕ್ಕೂ ಹೆಚ್ಚು ಬಡ ಜನರಿಗೆ ಜಾತಿ ಮತ ಭೇದವಿಲ್ಲದೆ ಉಚಿತ ವಿವಾಹ ಏರ್ಪಡಿಸುವ ಮೂಲಕ ಸಮಾಜ ಸೇವೆಯಲ್ಲಿ ವಿಶಿಷ್ಟ ಸಾಧನೆಗೈದ ಡಾ. ದೇವರ್ಶೋಲ ಅವರನ್ನು ಆರಿಸಲಾಗಿತ್ತು.

ಉಳ್ಳಾಲ ತಾಜ್ ಮಹಲ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಖಾಝಿ ಖುರ್ರತುಸ್ಸಾದಾತ್ ಸಯ್ಯಿದ್ ಕೂರತ್ ತಂಙಳ್ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಮುಈನುಸುನ್ನಾ ಅಧ್ಯಕ್ಷ ಸಯ್ಯಿದ್ ಶಹೀರ್ ಅಲ್ ಬುಖಾರಿ ಪೊಸೋಟ್ ಅಧ್ಯಕ್ಷತೆ ವಹಿಸಿದ್ದರು.

ಸಯ್ಯಿದ್ ಮದನಿ ದರ್ಗಾ ಸಮಿತಿ ಅಧ್ಯಕ್ಷ ಹನೀಫ್ ಹಾಜಿ ಉಳ್ಳಾಲ‌ ಉದ್ಘಾಟಿಸಿದರು. ಸಂಸ್ಥೆಯ ನಿರ್ದೇಶಕ ಮುಸ್ತಫಾ ನಈಮಿ ಹಾವೇರಿ ಮುನ್ನುಡಿ ಭಾಷಣ, ಪ್ರಧಾನ ಕಾರ್ಯದರ್ಶಿ ಕೆಎಂ ಅಬೂಬಕರ್ ಸಿದ್ದೀಖ್ ಅಭಿನಂದನಾ ಭಾಷಣ ಮಾಡಿದರು. ಮುಹಮ್ಮದ್ ಫೈಝಿ ಪಟ್ಲ, ಡಾ. ಶೇಖ್ ಬಾವ ಹಾಜಿ ಮಂಗಳೂರು ಮಾತನಾಡಿದರು.

ಶಿಹಾಬುದ್ದೀನ್ ಸಖಾಫಿ ಉಳ್ಳಾಲ, ಅಶ್ರಫ್ ಸಅದಿ ಮಲ್ಲೂರು, ಕೆಕೆ‌ಎಂ ಕಾಮಿಲ್ ಸಖಾಫಿ ಸುರಿಬೈಲ್, ಜಲಾಲುದ್ದೀನ್ ಮದನಿ, ನಾಝಿಂ ಉಳ್ಳಾಲ, ಇಸ್ಹಾಖ್ ಹಾಜಿ ಪೇಟೆ, ಬಶೀರ್ ಸಖಾಫಿ, ಯುಎಚ್ ಹಸೈನಾರ್ ಕೋಟೆಪುರ, ಮುಹಮ್ಮದ್ ಕುತ್ತಾರ್, ಮುಈನ್ ಅಮ್ಜದಿ ಮತ್ತಿತರರು ಉಪಸ್ಥಿತರಿದ್ದರು.

ಸಯ್ಯಿದ್ ಜಲಾಲುದ್ದೀನ್ ತಂಙಳ್ ಸ್ವಾಗತಿಸಿ, ಸಯ್ಯಿದ್ ಖುಬೈಬ್ ತಂಙಲ್ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here