ಧಾರವಾಡ: ಹವಾಮಾನ ಶಾಸ್ತ್ರ ಕುರಿತು ಇಸ್ರೇಲ್ನ ಜೇರುಸೇಲಂ ನಗರದ ಹೆಬ್ರು ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿದ್ದ ತರಬೇತಿಗೆ ತೆರಳಿದ್ದ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಸುಮೇಶ್ ಅವರು ಇಸ್ರೇಲ್ನಲ್ಲಿ ಸಿಲುಕಿಕೊಂಡಿದ್ದು ಅವರು ಎರಡು ದಿನದಲ್ಲಿ ಸುರಕ್ಷಿತವಾಗಿ ನಮ್ಮ ದೇಶಕ್ಕೆ ವಾಪಸ್ ಬರಲಿದ್ದಾರೆ ಎಂದು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಪಿ.ಎಲ್.ಪಾಟೀಲ ಹೇಳಿದ್ದಾರೆ.
ಧಾರವಾಡದಲ್ಲಿ ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಅವರು, ಡಾ.ಸುಮೇಶ್ ಅವರು ನಮ್ಮ ವಿಜಯಪುರದ ಸಂಶೋಧನಾ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದರು. ಆ.7 ರಿಂದ ಅಕ್ಟೋಬರ್ 22 ರವರೆಗೆ ಇಸ್ರೇಲ್ನಲ್ಲಿ ನಡೆಯುತ್ತಿದ್ದ ಕೇಂದ್ರ ಸರ್ಕಾರದ ಜಾಗತಿಕ ತರಬೇತಿಗೆ ಅವರು ತೆರಳಿದ್ದರು. ಇದೀಗ ಅಲ್ಲಿ ಯುದ್ಧ ಶುರುವಾಗಿದೆ. ನಾವು ನಿನ್ನೆಯಿಂದ ಅವರ
Iphone 15 Bigg Update: ಐಫೋನ್ 15 ಸೀರೀಸ್ ಬಳಕೆದಾರರಿಗೆ ಬಿಗ್ ಅಪೆ ಡೇಟ್: ಏನಂತೀರಾ?!
ಸಂಪರ್ಕದಲ್ಲಿದ್ದೇವೆ. NAHEPRDP ಯೋಜನೆಯಡಿ ಅವರು ಇಸ್ರೇಲ್ಗೆ ಹೋಗಿದ್ದರು. ಈ ಯೋಜನೆಯ ಅಧಿಕಾರಿಗಳು ಮತ್ತು ನಾವು ಸುಮೇಶ್ ಅವರೊಂದಿಗೆ ಸಂಪರ್ಕದಲ್ಲಿದ್ದೇವೆ. ಅವರು ತಮ್ಮ ಬಳಿ ಒಂದು ವಾರಕ್ಕೆ ಆಗುವಷ್ಟು ಆಹಾರ ಇಟ್ಟುಕೊಂಡಿದ್ದಾರೆ. ಧಾರವಾಡ ಕೃಷಿ ವಿವಿಯಿಂದ ಅವರೊಬ್ಬರೇ ಹೋಗಿದ್ದಾರೆ.
ಅವರ ಕುಟುಂಬ ವಿಜಯಪುರದಲ್ಲಿದೆ. ದೆಹಲಿಯ ಐಸಿಆರ್ ಡೆಪ್ಯುಟಿ ಡೈರೆಕ್ಟರ್ ಜನರಲ್ ಅವರ ಗಮನಕ್ಕೂ ಈ ವಿಷಯ ತಂದಿದ್ದೇವೆ. ಅವರನ್ನು ಆದಷ್ಟು ಬೇಗ ಕರೆ ತರುವ ವ್ಯವಸ್ಥೆ ಮಾಡಲಾಗುತ್ತಿದೆ. ಸರ್ಕಾರ ಈಗ ಅವರನ್ನು ಏರ್ಲಿಫ್ಟ್ ಮಾಡಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆ ಸಂಬಂಧಿತ ಆ್ಯಪ್ಗೂ ಅವರು ನೋಂದಣಿ ಮಾಡಿಕೊಂಡಿದ್ದಾರೆ ಎಂದರು.
The post ಡಾ.ಸುಮೇಶ್ ಎರಡು ದಿನದಲ್ಲಿ ಸುರಕ್ಷಿತವಾಗಿ ವಾಪಸ್ ಬರುತ್ತಾರೆ: ಡಾ.ಪಾಟೀಲ appeared first on Ain Live News.