ಉಡುಪಿ, ಡಿ.28: ಜಮೀಯತೆ ಅಹ್ಲೆ ಹದೀಸ್ ಉಡುಪಿ ಜಿಲ್ಲೆ ಇದರ ಅಧೀನದಲ್ಲಿರುವ ಇಸ್ಲಾಮಿಕ್ ದಾವ ಸೆಂಟರ್ ಹೂಡೆ ವತಿಯಿಂದ ಹೂಡೆಯ ಜದೀದ್ ಜುಮಾ ಮಸೀದಿಯಲ್ಲಿ ಡಿ.30ರಂದು ರಾತ್ರಿ 8.45 ಗಂಟೆಯಿಂದ 10ಗಂಟೆಯವರೆಗೆ ಇಸ್ಲಾಮಿ ಖ್ಯಾತ ವಿದ್ವಾಂಸ ಶೇಕ್ ರಝಾವುಲ್ಲಾಹ ಅಬ್ದುಲ್ ಕರೀಮ್ ಮದನಿ ಅವರು ‘ಶೈತಾನ್ ಕಾ ಹಮ್ಲಾ ಇನ್ಸಾನಿ ಝಿಂದಗಿ ಪರ್’ ವಿಷಯದ ಕುರಿತು ಪ್ರವಚನ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.