Home Uncategorized ತನಗಾಗಿ, ತನ್ನ ಸ್ನೇಹಿತರಿಗಾಗಿ ಜೈನ ಮುನಿಗಳಿಂದ ಆರೋಪಿ ಪಡೆದಿದ್ದ ಸಾಲ ಬರೋಬ್ಬರಿ 30-40 ಲಕ್ಷ ರೂಪಾಯಿ!

ತನಗಾಗಿ, ತನ್ನ ಸ್ನೇಹಿತರಿಗಾಗಿ ಜೈನ ಮುನಿಗಳಿಂದ ಆರೋಪಿ ಪಡೆದಿದ್ದ ಸಾಲ ಬರೋಬ್ಬರಿ 30-40 ಲಕ್ಷ ರೂಪಾಯಿ!

10
0

ಬೆಳಗಾವಿ ಸಮೀಪದ ಹಿರೇಕೋಡಿಯ ಜೈನ ಮುನಿ ಕಾಮಕುಮಾರ ನಂದಿ ಮಹಾರಾಜನ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ನಾರಾಯಣ ಮಾಳಿ ಮುನಿಗಳಿಂದ ತನ್ನ ಸ್ನೇಹಿತ ಹಾಗೂ ತನಗಾಗಿ 30-40 ಲಕ್ಷ ರೂಪಾಯಿ ಸಾಲ ಪಡೆದಿದ್ದ ಎಂಬುದು ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ. ಬೆಳಗಾವಿ: ಬೆಳಗಾವಿ ಸಮೀಪದ ಹಿರೇಕೋಡಿಯ ಜೈನ ಮುನಿ ಕಾಮಕುಮಾರ ನಂದಿ ಮಹಾರಾಜನ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ನಾರಾಯಣ ಮಾಳಿ ಮುನಿಗಳಿಂದ ತನ್ನ ಸ್ನೇಹಿತ ಹಾಗೂ ತನಗಾಗಿ 30-40 ಲಕ್ಷ ರೂಪಾಯಿ ಸಾಲ ಪಡೆದಿದ್ದ ಎಂಬುದು ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ.

ಮಾಳಿ ತನಗಾಗಿ 5 ಲಕ್ಷ ರೂಪಾಯಿ ಸಾಲ ಪಡೆದಿದ್ದ ಮತ್ತು ತನ್ನ ಸ್ನೇಹಿತರಿಗೆ ನೀಡಿದ ಲಕ್ಷಾಂತರ ರೂಪಾಯಿ ಸಾಲಕ್ಕೆ ಜಾಮೀನು ನೀಡಿದ್ದಾನೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. 

‘ಮಾಳಿಯು ಜೈನ ಮುನಿಗಳಿಂದ ಎಲ್ಲಾ ಹಣವನ್ನು ಸಂಗ್ರಹಿಸಿದ್ದಾನೆ. ಆದರೆ, ಅದನ್ನು ಆತನ ಸ್ನೇಹಿತರಿಗೆ ನೀಡಿರಲಿಲ್ಲ ಎಂಬ ಅನುಮಾನ ವ್ಯಕ್ತವಾಗಿದೆ. ಕಳೆದ ಕೆಲವು ವಾರಗಳಿಂದ ಹಣವನ್ನು ಹಿಂದಿರುಗಿಸುವಂತೆ ಮುನಿಗಳು ತೀವ್ರ ಒತ್ತಡ ಹೇರುತ್ತಿದ್ದರು. ತಮ್ಮ ಬಳಿ ಅಷ್ಟೊಂದು ಹಣ ಇಲ್ಲದ ಕಾರಣ ಜೈನ ಮುನಿಗಳನ್ನು ಕೊಲೆ ಮಾಡಲು ನಿರ್ಧರಿಸಿದರು’ ಎಂದು ಮುಖ್ಯ ತನಿಖಾಧಿಕಾರಿ ತಿಳಿಸಿದ್ದಾರೆ.

ಜೈನ ಮುನಿಯನ್ನು ಕೊಲ್ಲುವ ಮೊದಲು, ಮಾಳಿ ತನ್ನ ಸ್ನೇಹಿತರಿಗೆ ನೀಡಿದ ಹಣದ ಸಾಕ್ಷ್ಯವನ್ನು ನಾಶಮಾಡಲು ಅವರ ಡೈರಿಯನ್ನು ಸುಟ್ಟುಹಾಕಿದನು. ‘ನಾವು ಕೊಲೆಯ ಹಿಂದಿನ ಇತರ ಕೋನಗಳ ಬಗ್ಗೆಯೂ ತನಿಖೆ ನಡೆಸಲು ಪ್ರಯತ್ನಿಸಿದ್ದೇವೆ. ಆದರೆ, ಆರೋಪಿಯು ಹಣ ಹಿಂತಿರುಗಿಸುವಂತೆ ಮುನಿಗಳಿಂದ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಅವರನ್ನು ಕೊಲ್ಲಲು ನಿರ್ಧರಿಸಿದ್ದರು’ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ: ಆರೋಪಿಗಳಿಗೆ ಜೈನ ಮುನಿಗಳು ಲಕ್ಷಾಂತರ ರೂಪಾಯಿ ಸಾಲ ನೀಡಿದ್ದರು: ಪೊಲೀಸರು

ಈ ನಡುವೆ ಆರೋಪಿಗಳು ಕೊಲೆ ಮಾಡಿದ ಬಳಿಕ ಮುನಿಗಳ ಶವವನ್ನು ತೆಗೆದುಕೊಂಡು ಹೋಗಿದ್ದ ಮೋಟಾರ್ ಬೈಕ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಾಳಿ ಮತ್ತು ಪ್ರಕರಣದ ಎರಡನೇ ಆರೋಪಿಯಾಗಿರುವ ಹಸನ್‌ಸಾಬ್ ಢಾಲಾಯತ್ ಅವರು ಕಟಕಭಾವಿ ಗ್ರಾಮಕ್ಕೆ ಕೊಂಡೊಯ್ದು, ಶವವನ್ನು ಹಲವಾರು ತುಂಡುಗಳಾಗಿ ಕತ್ತರಿಸಿ ನಂತರ ಬಾವಿಗೆ ಎಸೆದಿದ್ದರು.

ಮುನಿಗಳ ಆಶ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ

ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮಂಗಳವಾರ ಹಿರೇಕೋಡಿಯಲ್ಲಿರುವ ಕಾಮಕುಮಾರ ನಂದಿ ಮಹಾರಾಜರ ಆಶ್ರಮಕ್ಕೆ ಭೇಟಿ ನೀಡಿ, ಹಂತಕರಿಗೆ ಕಠಿಣ ಶಿಕ್ಷೆ ವಿಧಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ಜೈನ ಸಮುದಾಯ ಹಾಗೂ ಆಶ್ರಮದ ಭಕ್ತರಿಗೆ ಭರವಸೆ ನೀಡಿದರು. ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ರಾಜ್ಯ ಪೊಲೀಸರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಸಿಬಿಐ ತನಿಖೆಯ ಅಗತ್ಯವಿಲ್ಲ ಎಂದು ಅವರು ಹೇಳಿದರು.

LEAVE A REPLY

Please enter your comment!
Please enter your name here