Home Uncategorized ತುಮಕೂರು: ಕೊರಟಗೆರೆಯಲ್ಲಿ ಗೃಹಸಚಿವ ಪರಮೇಶ್ವರ್ ಬೆಂಬಲಿಗನ ಬರ್ಬರ ಹತ್ಯೆ

ತುಮಕೂರು: ಕೊರಟಗೆರೆಯಲ್ಲಿ ಗೃಹಸಚಿವ ಪರಮೇಶ್ವರ್ ಬೆಂಬಲಿಗನ ಬರ್ಬರ ಹತ್ಯೆ

43
0

ಕೊರಟಗೆರೆ ತಾಲೂಕಿನ ಹೊಳವನಹಳ್ಳಿಯಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರ ನಿಷ್ಠಾವಂತ ಕಾಂಗ್ರೆಸ್‌ ಕಾರ್ಯಕರ್ತನನ್ನು ಜೆಡಿಎಸ್‌ ಪಕ್ಷದ ಕಾರ್ಯಕರ್ತನೊಬ್ಬ ರಾಜಕೀಯ ವೈಷಮ್ಯದಿಂದ ಹತ್ಯೆಗೈದಿದ್ದಾನೆ. ತುಮಕೂರು: ಕೊರಟಗೆರೆ ತಾಲೂಕಿನ ಹೊಳವನಹಳ್ಳಿಯಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರ ನಿಷ್ಠಾವಂತ ಕಾಂಗ್ರೆಸ್‌ ಕಾರ್ಯಕರ್ತನನ್ನು ಜೆಡಿಎಸ್‌ ಪಕ್ಷದ ಕಾರ್ಯಕರ್ತನೊಬ್ಬ ರಾಜಕೀಯ ವೈಷಮ್ಯದಿಂದ ಹತ್ಯೆಗೈದಿದ್ದಾನೆ.

ಆರೋಪಿ ಮರಿಯಪ್ಪ, ಹೂವಿನ ವ್ಯಾಪಾರಿ ದೇವರಾಜ್(31) ಎಂಬಾತನನ್ನು ಕುಡಿದ ಅಮಲಿನಲ್ಲಿ ಕೊಲೆ ಮಾಡಿರುವ ದುರ್ಘಟನೆ ನಡೆದಿದೆ. ಇಬ್ಬರೂ ಕರೇಚಿಕ್ಕನಹಳ್ಳಿ ಗೊಲ್ಲರಹಟ್ಟಿ ಗ್ರಾಮದವರಾಗಿದ್ದಾರೆ.

ಮೇ 10 ರಂದು ನಡೆದ ವಿಧಾನಸಭಾ ಚುನಾವಣೆಯ ಸಮಯದಲ್ಲಿ ದೇವರಾಜ್  ಪರಮೇಶ್ವರ್ ಪರವಾಗಿ ಮತ್ತು ಮರಿಯಪ್ಪ ಜೆಡಿಎಸ್ ಅಭ್ಯರ್ಥಿಗಾಗಿ ಕೆಲಸ ಮಾಡಿದ್ದರು. ಇದು ಕೊಲೆಗೆ  ಪ್ರಮುಖ ಕಾರಣ ಎಂದು ಹೇಳಲಾಗಿದೆ.

ಇದನ್ನೂ ಓದಿ: ಪತಿಯ ಸಾವಿನಿಂದ ಮಾನಸಿಕ ಖಿನ್ನತೆ, ಮಗನ ಜೊತೆಗೆ ಕೆರೆಗೆ ಹಾರಿದ ಮಹಿಳೆ!

ಘಟನೆ ಗುರುವಾರ ನಡೆದಿದ್ದು, ಎರಡು ದಿನಗಳ ನಂತರ ಮೃತದೇಹ ಪತ್ತೆಯಾಗಿದ್ದು ಭಾನುವಾರ ಅಂತಿಮ ವಿಧಿವಿಧಾನಗಳು ನಡೆದವು. ಸಂತ್ರಸ್ತ ವ್ಯಕ್ತಿ ತನ್ನ ಪತ್ನಿಯ ಚಿನ್ನಾಭರಣಗಳನ್ನು ಕಿತ್ತುಕೊಂಡು ಹೋಗಿದ್ದ,  ಆರೋಪಿಗಳು ದೇವರಾಜ್ ಬಳಿಯಿಂದ ಅವುಗಳನ್ನು ದೋಚಿ ತಮ್ಮ ಖರ್ಚಿಗಾಗಿ ಗಿರವಿ ಇಟ್ಟುಕೊಂಡಿದ್ದರು.

ಇದನ್ನೂ ಓದಿ: ಜೆಡಿಎಸ್ ಮುಖಂಡ ಅಪ್ಪುಗೌಡ ಹತ್ಯೆಗೆ ಯತ್ನ: 6 ಮಂದಿ ಬಂಧನ

ಮದ್ಯ ಸೇವಿಸಿದ ನಂತರ ಅವರು ಜಗಳವಾಡಿದ್ದು, ನಂತರ ಕೊಲೆ ನೆಡೆದಿರಬಹುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.  ಮೃತದೇಹ ರಸ್ತೆ ಬದಿಯಲ್ಲಿ ಪತ್ತೆಯಾಗಿದ್ದು,  ತಲೆಗೆ ಗಾಯವಾಗಿದೆ, ಪರಮೇಶ್ವರ ಅವರ ಕಟ್ಟಾ ಬೆಂಬಲಿಗ ಆನಂದ್ ಸೇರಿದಂತೆ ಮೃತ ವ್ಯಕ್ತಿಯ ಸಂಬಂಧಿಕರು ಕೊಲೆ ಎಂದು ಶಂಕಿಸಿದ್ದಾರೆ. ಕೊರಟಗೆರೆ ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.

LEAVE A REPLY

Please enter your comment!
Please enter your name here