ಉಡುಪಿ: ತೆಂಕನಿಡಿಯೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ವಿಶ್ವ ಮಾನವತಾವಾದಿ ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಸುರೇಶ್ ರೈ ಅವರು ವಿದ್ಯಾರ್ಥಿ ಗಳನ್ನು ಉದ್ದೇಶಿಸಿ ಮಾತನಾಡಿ ವೈಜ್ಞಾನಿಕ ಮತ್ತು ವಿಶಾಲ ಬದುಕಿನ ಸಾಹಿತ್ಯವನ್ನು ಕೊಡುಗೆಯಾಗಿ ನೀಡಿದ ರಾಷ್ಟ್ರಕವಿ ಕುವೆಂಪು ಅವರ ಮಾನವತಾವಾದಿ ಚಿಂತನೆಗಳು ಸಾರ್ವಕಾಲಿಕ ಹಾಗೂ ಎಲ್ಲರಿಗೂ ಆದರ್ಶ ಎಂದರು.
ಕನ್ನಡ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳಾದ ನೈನಾ ಶೆಟ್ಟಿ, ಸಂಗೀತಾ, ವಿಠಲ್ ಹಾಗೂ ಇತಿಹಾಸ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿ ರಾಘವೇಂದ್ರ ಜಿ. ಗಾಣಿಗ ಕುವೆಂಪು ಅವರ ಪ್ರಸಿದ್ದ ಕತೆಗಳನ್ನು ವಾಚಿಸಿದರು.
ಈ ಸಂದರ್ಭದಲ್ಲಿ ಕನ್ನಡ ಸ್ನಾತಕೋತ್ತರ ವಿಭಾಗದ ಉಪನ್ಯಾಸಕರಾದ ಶಾಲಿನಿ ಯು.ಬಿ., ಶರಿತಾ, ಅರ್ಚನಾ ಹಾಗೂ ಇತಿಹಾಸ ವಿಭಾಗದ ಡಾ. ಮಹೇಶ್ ಕುಮಾರ್ ಕೆ.ಈ. ಹಾಗೂ ಡಾ. ಮೋಹನ್ ಉಪಸ್ಥಿತರಿದ್ದರು.
ಕನ್ನಡ ಸ್ನಾತಕೋತ್ತರ ವಿದ್ಯಾರ್ಥಿ ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರೆ ಗ್ರಂಥಪಾಲಕ ಕೃಷ್ಣ ಸಾಸ್ತಾನ ಕಾರ್ಯಕ್ರಮ ಸಂಘಟಿಸಿದರು. ಗ್ರಂಥಾಲಯ ದಲ್ಲಿ ಕುವೆಂಪುರ ಸಮಗ್ರ ಕೃತಿ ಪ್ರದರ್ಶಿಸಲಾಯಿತು.