ಹೊಸದಿಲ್ಲಿ : ದಿಲ್ಲಿ ಮದ್ಯನೀತಿ ಪ್ರಕರಣದಲ್ಲಿ ರೋಸ್ ಅವೆನ್ಯೂ ನ್ಯಾಯಾಲಯ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು 10 ದಿನಗಳ ಕಾಲ ಜಾರಿ ನಿರ್ದೇಶನಾಲಯ (ಈಡಿ)ದ ಕಸ್ಟಡಿಗೊಪ್ಪಿಸಿದೆ. ಪ್ರಕರಣದಲ್ಲಿ ಕೇಜ್ರಿವಾಲ್ ರನ್ನು ಮುಖ್ಯ ಆರೋಪಿ ಎಂದು ವಾದಿಸಿದ ಈಡಿ ವರ ವಕೀಲರು, ಪ್ರಕರಣದ ವಿಚಾರಣೆಗಾಗಿ ಕೇಜ್ರಿವಾಲ್ ರನ್ನು ಈಡಿ ಕಸ್ಟಡಿಗೆ ನೀಡುವಂತೆ ವಾದ ಮಂಡಿಸಿದ್ದರು.