Home Uncategorized ದುಗ್ಗಲಡ್ಕದಲ್ಲಿ ಉರೂಸ್ ಸಮಾರಂಭ: ಗ್ರಂಥಾಲಯ ಲೋಕಾರ್ಪಣೆ

ದುಗ್ಗಲಡ್ಕದಲ್ಲಿ ಉರೂಸ್ ಸಮಾರಂಭ: ಗ್ರಂಥಾಲಯ ಲೋಕಾರ್ಪಣೆ

29
0

ದುಗ್ಗಲಡ್ಕ: ನಾಡಿನ ಸೌಹಾರ್ದತೆಗೆ ಸಯ್ಯದ್ ಫಕ್ರುದ್ದೀನ್ ತಂಙಳ್ ಅವರ ಕೊಡುಗೆ ಅನುಕರಣೀಯವಾದುದು ಎಂದು ಕರ್ನಾಟಕ ವಿಧಾನ ಸಭಾಧ್ಯಕ್ಷ ಯು. ಟಿ. ಖಾದರ್ ಹೇಳಿದ್ದಾರೆ.

ದುಗ್ಗಲಡ್ಕ ಅಸ್ಸಯ್ಯದ್ ಫಕ್ರುದ್ದೀನ್ ತಂಙಳ್ ಅವರ ಉರೂಸ್ ಸಮಾರಂಭ ಮತ್ತು ಖುತುಬಿಯ್ಯತ್ 30ನೇ ವಾರ್ಷಿಕದ ಅಂಗವಾಗಿ 3 ದಿನಗಳ ಕಾಲ ದುಗ್ಗಲಡ್ಕ ದರ್ಗಾ ಶರೀಫ್ ಬಳಿ ನಡೆಯುತ್ತಿರುವ ಧಾರ್ಮಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದಲ್ಲಿ ಫಕ್ರುದ್ದೀನ್ ತಂಙಳ್ ಸ್ಮಾರಕ ಗ್ರಂಥಾಲಯ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ಕರ್ನಾಟಕ ಜಂಇಯ್ಯತುಲ್ ಉಲಮಾ ಮುಷಾವರ ಅಧ್ಯಕ್ಷರಾದ ಅಸ್ಸಯ್ಯದ್ ಜೈನುಲ್ ಅಭಿದೀನ್ ತಂಙಳ್ ಕುಂನ್ನುಗೈ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗಾಂಧಿನಗರ ಜುಮ್ಮಾ ಮಸ್ಜಿದ್ ಅಧ್ಯಕ್ಷ ಕೆ. ಎಂ. ಮುಸ್ತಫ, ಎಐಕೆಎಂಸಿಸಿ ಜಿಲ್ಲಾ ಖಜಾಂಚಿ ಇಬ್ರಾಹಿಂ ಹಾಜಿ ಕತ್ತಾರ್ ಮಂಡೆಕೋಲು, ಉದ್ಯಮಿ ರಝಾಕ್ ಹಾಜಿ ರಾಜಧಾನಿ, ಗ್ರೀನ್ ವ್ಯೂ ನಿರ್ದೇಶಕ ಶಾಫಿ ಕುತ್ತಮೊಟ್ಟೆ, ಕೆ. ಬಿ.ಇಬ್ರಾಹಿಂ, ರಿಯಾಜ್ ಕಟ್ಟೆಕ್ಕಾರ್ಸ್, ದರ್ಗಾ ಶರೀಫ್ ಅಧ್ಯಕ್ಷ ಅಬ್ದುಲ್ಲ ಹಾಜಿ, ಮೊದಲಾದವರು ಭಾಗವಹಿಸಿದ್ದರು.

ಅಸ್ಸಯ್ಯದ್ ಝೈನುಲ್ ಆಬಿದೀನ್ ತಂಙಳ್ ಅವರು ಧ್ವಜಾರೋಹಣ ನೆರವೇರಿಸಿದರು. ಬಳಿಕ ನಡೆದ ಧಾರ್ಮಿಕ ಪ್ರಭಾಷಣ ಕಾರ್ಯಕ್ರಮದಲ್ಲಿ ಖ್ಯಾತ ವಾಗ್ಮಿಗಳಾದ ಬಂಬ್ರಾಣ ಅಬ್ದುಲ್ ಖಾದಿರ್ ಖಾಸಿಮಿ ಹಾಗೂ ಕೀಚೇರಿ ಅಬ್ದುಲ್ ಗಫೂರ್ ಮೌಲವಿ ಅವರು ಧಾರ್ಮಿ ಪ್ರಭಾಷಣ ನೀಡಿದರು.

LEAVE A REPLY

Please enter your comment!
Please enter your name here