ಧಾರವಾಡ: ಇಸ್ರೇಲ್ ಹಾಗೂ ಫ್ಯಾಲೇಸ್ತೆನ್ ಹಮಾಸ್ ಉಗ್ರರ ನಡುವೆ ಕದನ ಜೋರಾಗಿ ನಡೆಯುತ್ತಿದೆ. ಭಾರತ ಸೇರಿ ಅನೇಕ ರಾಷ್ಟ್ರಗಳು ಇಸ್ರೇಲ್ ಬೆನ್ನಿಗೆ ನಿಂತಿವೆ. ಇದರ ಮಧ್ಯೆ ಇಸ್ರೇಲ್ ಪ್ರಜೆಯೊಬ್ಬ ಧಾರವಾಡ ಕರ್ನಾಟಕ ಕೃಷಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಶ್ರೀನಿವಾಸ ಕೋಟ್ಯಾನ್ ಅವರಿಗೆ ಸಂದೇಶವೊಂದನ್ನು ಕಳುಹಿಸಿದ್ದಾರೆ.
ಕೃಷಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿರುವ ಶ್ರೀನಿವಾಸ ಕೋಟ್ಯಾನ್ ಆರು ತಿಂಗಳ ಹಿಂದೆಯಷ್ಟೇ ಕೃಷಿ ಅಧ್ಯಯನಕ್ಕೆಂದು ಇಸ್ರೇಲ್ಗೆ ತೆರಳಿದ್ದರು. ಆಗ ಅಲ್ಲಿನ ಗೈಡ್ ಆಗಿದ್ದ ಇಸ್ರೇಲ್ ಪ್ರಜೆ ಗೋಲನ್ ಎನ್ನುವವರು ಶ್ರೀನಿವಾಸ ಅವರಿಗೆ ಪರಿಚಯವಾಗಿದ್ದರು.
ಸದ್ಯ ಇಸ್ರೇಲ್ನಲ್ಲಿ ಯುದ್ಧ ನಡೆಯುತ್ತಿರುವುದಿಂದ ಅಲ್ಲಿನ ವಸ್ತುಸ್ಥಿತಿ ಬಗ್ಗೆ ತಿಳಿದುಕೊಳ್ಳಲು ಶ್ರೀನಿವಾಸ ಕೋಟ್ಯಾನ ಇಸ್ರೇಲ್ ಪ್ರಜೆ ಗೋಲನ್ ಅವರಿಗೆ ವಾಟ್ಸಪ್ ಸಂದೇಶ ಕಳುಹಿಸಿದ್ದರು. ಮರಳಿ ವಾಟ್ಸಪ್ ಮೂಲಕವೇ ಸಂದೇಶ ಕಳುಹಿಸಿರುವ ಗೋಲನ್, ಹಮಾಸ್ ಉಗ್ರರನ್ನು ನಾವು ಸೆದೆಬಡೆಯುತ್ತೇವೆ.
ನಾವು ಯುದ್ಧದಲ್ಲಿ ಸನ್ನದ್ಧರಾಗಿದ್ದೇವೆ. ನಮ್ಮ ಮೇಲೆ ರಾಕೆಟ್ ದಾಳಿ ನಡೆದಿವೆ. ಇಸ್ರೆಲ್ ಪ್ರಜೆಗಳನ್ನು ಕಿಡ್ನ್ಯಾಪ್ ಮಾಡಿ ಇಡಲಾಗಿದೆ. ಬಹಳಷ್ಟು ಜನ ಸಾವನ್ನಪ್ಪಿದ್ದಾರೆ. ಇದು ನಮಗೆ ಬಹಳ ಸಂಕಷ್ಟದ ಸಮಯ. ನಮ್ಮ ಕುಟುಂಬದವರಿಗಾಗಿ ನೀವೂ ಪ್ರಾರ್ಥನೆ ಮಾಡಿ ಎಂದು ಸಂದೇಶ ಕಳುಹಿಸಿದ್ದಾರೆ.
The post ನಾವು ಹಮಾಸ್ ಉಗ್ರರನ್ನು ಸೆದೆಬಡೆಯುತ್ತೇವೆ: ಕೃಷಿ ವಿವಿ ಸಿಂಡಿಕೇಟ್ ಸದಸ್ಯನಿಗೆ ಇಸ್ರೇಲ್ ಪ್ರಜೆಯ ಸಂದೇಶ appeared first on Ain Live News.