ಹೊಸ ವರ್ಷಕ್ಕೆ ಮಾಜಿ ಸಚಿವ ವರ್ತೂರು ಪ್ರಕಾಶ್ ಅವರು ಸಂಸದ ಎಸ್. ಮುನಿಸ್ವಾಮಿಗೆ ಕಿಸ್ ಗಿಪ್ಟ್ ಕೊಟ್ಟಿದ್ದಾರೆ. ಬಿಜೆಪಿಗೆ ಹೊಸ ಕಾರ್ಯಕರ್ತರು, ಅಭ್ಯರ್ಥಿಗಳನ್ನು ಸೇರಿಸಿಕೊಳ್ಳುವ ಸಲುವಾಗಿ ಕೋಲಾರದ ಹಲವೆಡೆ ಮಾಜಿ ಸಚಿವ ವರ್ತೂರ್ ಪ್ರಕಾಶ್ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಬೆಂಗಳೂರು: ಹೊಸ ವರ್ಷಕ್ಕೆ ಮಾಜಿ ಸಚಿವ ವರ್ತೂರು ಪ್ರಕಾಶ್ ಅವರು ಸಂಸದ ಎಸ್. ಮುನಿಸ್ವಾಮಿಗೆ ಕಿಸ್ ಗಿಪ್ಟ್ ಕೊಟ್ಟಿದ್ದಾರೆ. ಬಿಜೆಪಿಗೆ ಹೊಸ ಕಾರ್ಯಕರ್ತರು, ಅಭ್ಯರ್ಥಿಗಳನ್ನು ಸೇರಿಸಿಕೊಳ್ಳುವ ಸಲುವಾಗಿ ಕೋಲಾರದ ಹಲವೆಡೆ ಮಾಜಿ ಸಚಿವ ವರ್ತೂರ್ ಪ್ರಕಾಶ್ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಸೇರ್ಪಡೆ ಕಾರ್ಯಕ್ರಮಕ್ಕೂ ಮೊದಲು ನಗರದ ಶಕ್ತಿ ದೇವತೆಗೆ ಸಂಸದ ಎಸ್. ಮುನಿಸ್ವಾಮಿ ಪೂಜೆ ಸಲ್ಲಿಸಿದರು. ಈ ವೇಳೆ ಸಂಸದರಿಗೆ ಮಾಜಿ ಶಾಸಕರು, ವರ್ತೂರ್ ಪ್ರಕಾಶ್, ಮಂಜುನಾಥಗೌಡ್ ಸಿಂಪಗಿ ಸಾಥ್ ಕೊಟ್ಟಿದ್ದರು.
ನಾವು ಹೊಸ ವರ್ಷದ ಇಂದು ಕೋಲಾರಮ್ಮ ದೇವರ ಮುಂದೆ ನಾವೆಲ್ಲಾ ಪ್ರಮಾಣ ಮಾಡಿದ್ದೀವಿ.ಸಂಸದರ ಜೊತೆ ನಾವು ಇನ್ನು ಮುಂದೆ ರಾಜಕೀಯ ಜೀವನ ಸಾಗಿಸುತ್ತೇವೆ. ಕೊನೆಯವರೆಗೂ ಅವರ ಜೊತೆಯಲ್ಲಿ ಇರುತ್ತೇವೆ ಜಿಲ್ಲಾ ಉಸ್ತುವಾರಿ ಸಚಿವರು ನಮ್ಮ ಜೊತೆಯಲ್ಲಿ ಇರುತ್ತಾರೆ.
ಆದರೆ ಬೆಳಗ್ಗೆ ಸಾಯಂಕಾಲ ಕೋಲಾರದಲ್ಲಿ ರಾಜಕೀಯ ಮಾಡುವುದು ನಾವು ಎಂದು ಹೇಳಿದ ವರ್ತೂರು ಪ್ರಕಾಶ್ ನಗೆ ಪ್ರಸಂಗವನ್ನು ಸೃಷ್ಟಿಸಿ ನೆರೆದಿದ್ದವರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿದರು. ಇದೇ ವೇಳೆ ಮಾಜಿ ಶಾಸಕ ಮಂಜುನಾಥ್ ಗೌಡ, ವೈ.ಸಂಪಂಗಿ ಮತ್ತಿತರರು ಉಪಸ್ಥಿತರಿದ್ದರು.
ಮಾಜಿ ಸ್ಪೀಕರ್ ರಮೇಶ್ ಕುಮಾರ್ ತಮ್ಮ ಆಡಳಿತವಾಧಿಯಲ್ಲಿ ಅಮಾನತುಗೊಂಡಿದ್ದ ಎಲ್ಲ 17 ಮಂದಿ ಶಾಸಕರು ಸಚಿವರಾಗಿದ್ದು 2023ರ ವಿಧಾನಸಭಾ ಚುನಾವಣೆಯಲ್ಲಿ ರಮೇಶ್ ಕುಮಾರ್ ಅವರನ್ನು ಆಡ್ರಸ್ ಇಲ್ಲದಂತೆ ಪಾಠ ಕಲಿಸಲು ನಿರ್ಧಾರಿಸಿದ್ದಾರೆ ಎಂದು ಮಾಜಿ ಸಚಿವ ಎಂದು ವರ್ತೂರು ಪ್ರಕಾಶ್ ಹೇಳಿದರು.