Home Uncategorized ಪಂಚರತ್ನ ಯಾತ್ರೆ ವೇಳೆ ಮಗುವಿನ ಮೃತದೇಹ ಕಂಡು ಮರುಗಿದ ಕುಮಾರಣ್ಣ, ಶವವನ್ನು ವಾಹನದ ಮೇಲೆತ್ತಿಕೊಂಡು ಕಣ್ಣೀರು

ಪಂಚರತ್ನ ಯಾತ್ರೆ ವೇಳೆ ಮಗುವಿನ ಮೃತದೇಹ ಕಂಡು ಮರುಗಿದ ಕುಮಾರಣ್ಣ, ಶವವನ್ನು ವಾಹನದ ಮೇಲೆತ್ತಿಕೊಂಡು ಕಣ್ಣೀರು

18
0

ತುಮಕೂರು: ಜೆಡಿಎಸ್​ ಪಂಚರತ್ನ ಯಾತ್ರೆ ಇಂದು(ಡಿಸೆಂಬರ್ 02) ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿಯಲ್ಲಿ ಸಾಗಿತು. ಯಾತ್ರೆ ಸಾಗುತ್ತಿದ್ದ ವೇಳೆ ಮತ್ತೊಂದು ಕಡೆಯಿಂದ ಪೋಷಕರು ಒಂದು ಮಗುವಿನ ಶವ ಹಿಡಿದುಕೊಂಡು  ಹೋಗುವುದನ್ನು ಕಂಡು ಕುಮಾರಸ್ವಾಮಿ ಮರುಗಿದ್ದಾರೆ. ಅಲ್ಲದೇ ಮಗುವಿನ ಶವವನ್ನು ತಾವಿದ್ದ ವಾಹನದ ಮೇಲಕ್ಕೆ ಎತ್ತಿಕೊಂಡು ಭಾವುಕರಾಗಿರುವ ಪ್ರಸಂಗ ನಡೆದಿದೆ. ಈ ಪ್ರಸಂಗ ಅಲ್ಲಿದ್ದ ಇತರೆ ಜೆಡಿಎಸ್ ಕಾರ್ಯಕರ್ತರ ಕಣ್ಣು ಒದ್ದೆ ಮಾಡಿತು.

ಇಮ್ರಾನ್ ಪಾಷ ಮೃತ ಮಗುವನ್ನು ಎತ್ತಿಕೊಂಡಿದ್ರೆ, ಪಕ್ಕದಲ್ಲೇ ಇದ್ದ ಕುಮಾರಸ್ವಾಮಿ ಪೋಷಕರ ಬಳಿ ಮಗು ಸಾವಿನ ಬಗ್ಗೆ ಮಾಹಿತಿ ಪಡೆದುಕೊಂಡರು. ಆಸ್ಪತ್ರೆಯಲ್ಲಿ ವೈದ್ಯರಿಲ್ಲದ್ದಕ್ಕೆ ಮಗು ಮೃತಪಟ್ಟಿದೆ ಎಂದು ಪೋಷಕರ ಹೇಳುತ್ತಲ್ಲೇ ಕುಮಾರಸ್ವಾಮಿ ಕಣ್ಣು ಕೆಂಪಾಗಿಸಿದ್ದು, ಕೂಡಲೇ ತುಮಕೂರು ಡಿಹೆಚ್‌ಒಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡರು. ಈ ವೇಳೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಡಿಹೆಚ್‌ಒ ಭರವಸೆ ನೀಡಿದ್ದಾರೆ.

ಅಲ್ಲದೇ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್ ಹಾಗೂ ಸಿಎಂ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್‌ಗೂ ಫೋನ್‌ ಮಾಡಿ ಮಗು ಸಾವಿನ ಬಗ್ಗೆ ವಿವರಿಸಿದರು.  ಕೂಡಲೇ ಕೊಡಿಗೇನಹಳ್ಳಿ ಆಸ್ಪತ್ರೆಗೆ ವೈದ್ಯರ ನೇಮಕಕ್ಕೆ ಸೂಚಿಸಿದರು. ಇನ್ನು ಕರ್ತವ್ಯಲೋಪವೆಸಗಿದ ಆಸ್ಪತ್ರೆ ಸಿಬ್ಬಂದಿ ಅಮಾನತು ಮಾಡುವಂತೆ ಹೇಳಿದರು.

ಇನ್ನು  ಕುಮಾರಸ್ವಾಮಿ ಪಕ್ಕದಲ್ಲೇ ಇದ್ದ  ಸ್ಥಳೀಯ ಶಾಸಕ ವೀರಭದ್ರಯ್ಯ ಮೃತ ಮಗು ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರ ನೀಡುವುದಾಗಿ ಭರವಸೆ. ಕುಮಾರಸ್ವಾಮಿ ಸಹ ಪರಿಹಾರವನ್ನು ನೀಡುವುದಾಗಿ ತಿಳಿಸಿದರು.

ಸಮಯಕ್ಕೆ ಚಿಕಿತ್ಸೆ ಸಿಗದೇ ಮಗು ಸಾವು

ಕೊಡಿಗೇನಹಳ್ಳಿ ಗ್ರಾಮದ ತಾಯಿ ಮಲ್ಲಿಕಾ, ಶೌಖತ್ ದಂಪತಿಗಳ ಪುತ್ರ ನಾಲ್ಕು ವರ್ಷ ಅಬ್ಬಾಸ್, ಆಕಸ್ಮಿಕವಾಗಿ ನೀರಿನ ಸಂಪ್​ಗ ಬಿದ್ದು ಅಸ್ವಸ್ಥಗೊಂಡಿದ್ದ. ಕೂಡಲೇ ಮಗುವನ್ನು ಪೋಷಕರು ಆಸ್ಪತ್ರೆಗೆ ಕೊಡಿಗೇನಹಳ್ಳಿ ಗ್ರಾಮ ಸರ್ಕಾರಿ ಆಸ್ಪತ್ರೆಗೆ ಹೋಗಿದ್ದಾರೆ. ಆದ್ರೆ, ಆಸ್ಪತ್ರೆಯಲ್ಲಿ ವೈದ್ಯರಿರಲಿಲ್ಲ. ಹಾಗೇ ಬೇರೆ ಆಸ್ಪತ್ರೆಗ ಹೋಗಲು ಆ್ಯಂಬುಲೆನ್ಸ್‌ ಇದ್ದರೂ ಚಾಲಕನಿರಲಿಲ್ಲ. ಇದರಿಂದ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೇ ಮಗು ಮೃತಪಟ್ಟಿದೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

LEAVE A REPLY

Please enter your comment!
Please enter your name here