Home Uncategorized ಪಡುಬಿದ್ರಿ: ಖಿದ್ಮತುಲ್ ಅನಾಮ್ ಅಸೋಸಿಯೇಶನ್‍ನಿಂದ ಸಾಧಕರಿಗೆ ಸನ್ಮಾನ

ಪಡುಬಿದ್ರಿ: ಖಿದ್ಮತುಲ್ ಅನಾಮ್ ಅಸೋಸಿಯೇಶನ್‍ನಿಂದ ಸಾಧಕರಿಗೆ ಸನ್ಮಾನ

10
0

ಪಡುಬಿದ್ರಿ: ಖಿದ್ಮತುಲ್ ಅನಾಮ್ ಅಸೋಸಿಯೇಶನ್ ಪಡುಬಿದ್ರಿ 17ನೇ ವರ್ಷದ ಪ್ರಯುಕ್ತ ಎರಡು ದಿನಗಳ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಡುಬಿದ್ರಿ ಜಮಾಅತ್‍ನ ಇಬ್ಬರು ಸಾಧಕರನ್ನು ಸನ್ಮಾನಿಸಲಾಯಿತು

ಬಿಎಸ್‍ಎಫ್‍ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಪಿ.ಎ. ಮುಹಿಯುದ್ದೀನ್ ಹಾಗೂ ವೈದ್ಯರಾಗಿ ಎಂಡಿ ಪದವಿ ಪೂರೈಸಿದ ಡಾ. ಫೈಝಲ್ ಉಸ್ಮಾನ್ ಅವರನ್ನು ಅಭಿನಂದಿಸಲಾಯಿತು.

ಸಯ್ಯದ್ ಶಿಹಾಬುದ್ದೀನ್ ಅಲ್ ಬುಖಾರಿ ತಂಙಳ್ ತಲಕ್ಕಿ ಇವರು ದುವಾ ಆಶೀರ್ವಚನ ನೀಡಿದರು. ಇದೇ ಸಂದರ್ಭದಲ್ಲಿ ಅಹಮ್ಮದ್ ನಬೀಲ್ ಬರಕಾತಿ, ಬೆಂಗಳೂರು ಇವರಿಂದ ನಅತೇ ಶರೀಫ್ ನಡೆಯಿತು.

ಅಧ್ಯಕ್ಷತೆಯನ್ನು ಪಡುಬಿದ್ರಿ ಜುಮ್ಮಾ ಮಸೀದಿ ಅಧ್ಯಕ್ಷ ಪಿ.ಕೆ. ಮುಹಿಯುದ್ದೀನ್ ಲಚ್ಚಿಲ್ ವಹಿಸಿದ್ದರು. ಪಡುಬಿದ್ರಿ ಜುಮ್ಮಾ ಮಸೀದಿ ಖತೀಬ್ ಹಾಜಿ ಎಸ್.ಎಂ. ಅಬ್ದುರ್ರಹ್ಮಾನ್ ಮದನಿ ಉದ್ಘಾಟಿಸಿದರು. ಕಂಚಿನಡ್ಕ ಜುಮ್ಮಾ ಮಸೀದಿ ಖತೀಬ್ ಅಬ್ದುಲ್ ಲತೀಫ್ ಮದನಿ, ದೀನ್‍ಸ್ಟ್ರೀಟ್ ನೂರಾನಿಯಾ ಜಾಮಿಯಾ ಮಸೀದಿಯ ಇಮಾಮ್ ಮೌಲಾನಾ ಅಬ್ದುಲ್ ಖುದ್ದೂಸ್, ನೂರುಲ್ ಹುದಾ ಮದ್ರಸದ ಸದರ್ ಉಸ್ತಾದ್ ಅಶ್ರಫ್ ಸಅದಿ, ಪಡುಬಿದ್ರಿ ಜುಮ್ಮಾ ಮಸೀದಿ ಕಾರ್ಯದರ್ಶಿ ಶೇಖ್ ಇಸ್ಮಾಯಿಲ್, ಮಾಜಿ ಅಧ್ಯಕ್ಷರಾದ ಪಿ.ಎಂ. ಉಮರ್ ಫಾರೂಕ್, ಹಾಜಿ ಅಬ್ದುಲ್ ರಹ್ಮಾನ್, ಖಿದ್ಮತುಲ್ ಅನಾಮ್ ಅಸೋಸಿಯೇನ್ ಅಧ್ಯಕ್ಷ ಮುಹಮ್ಮದ್ ಮುಸ್ತಾಕ್, ಗೌರವಾಧ್ಯಕ್ಷ ಪಿ.ಎಂ. ಅಕ್ಬರ್, ಇಆನಾತುಲ್ ಮಸಾಕೀನ್ ಅಸೋಸಿಯೇಶನ್ ಉಪಾಧ್ಯಕ್ಷ ಪಿ.ಎಂ. ಹುಸೈನ್ ಹಾಜಿ, ಮುಸ್ಲಿಮ್ ವೆಲ್‍ಫೇರ್ ಅಸೋಸಿಯೇಶನ್ ಅಧ್ಯಕ್ಷ ಕೆ. ಇಸ್ಮಾಯಿಲ್, ಎಸ್‍ವೈಎಸ್ ಅಧ್ಯಕ್ಷ ಪಿ.ಎಂ. ಹಮೀದ್ ಎಸ್‍ಎಸ್‍ಎಫ್ ಅಧ್ಯಕ್ಷ ಝಹೀರ್ ಹುಸೈನ್, ಕಾರ್ಯಕ್ರಮ ಸಂಯೋಜಕ ಮಯ್ಯದ್ದಿ ಮಜಲಕೋಡಿ, ಕಾರ್ಯದರ್ಶಿ ನೂರ್‍ಮುಹಮ್ಮದ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here