ಕಿನ್ನಿಗೋಳಿ: ಮುಹಮ್ಮದೀಯ ಜುಮಾ ಮಸೀದಿ, ಮೊಹಿಯುದ್ದೀನ್ ಯಂಗ್ ಮೆನ್ಸ್ ಅಸೋಶಿಯೇಷನ್ ಪುನರೂರು ಇದರ 17ನೇ ವಾರ್ಷಿಕ ಜಲಾಲಿಯಾ ರಾತೀಬ್ ಹಾಗೂ ಧಾರ್ಮಿಕ ಪ್ರವಚನ ಕಾರ್ಯಕ್ರಮವು ಶನಿವಾರ ಮುಹಮ್ಮದೀಯ ಜುಮಾ ಮಸೀದಿಯ ವಠಾರದಲ್ಲಿ ನಡೆಯಿತು.
ಅಸ್ಸಯ್ಯದ್ ಜಾಫರ್ ಸ್ವಾದಿಕ್ ತಂಙಳ್ ಕುಂಬೋಳ್ ಅವರು ಜಲಾಲಿಯಾ ರಾತೀಬ್ ಮಜ್ಲಿಸ್ ಗೆ ನೇತೃತ್ವ ನೀಡಿ ದುವಾ ಆಶೀರ್ವಚನೆ ಗೈದರು.
ಸಮಾರಂಭವನ್ನು ಪುನರೂರು ಎಂಜೆಎಂ ಜುಮಾ ಮಸೀದಿಯ ಖತೀಬ್ ಮುಹಮ್ಮದ್ ಅಶ್ರಫ್ ಸ ಅದಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಎಂಜೆಎಂ ಜುಮಾ ಮಸೀದಿಯ ಅಧ್ಯಕ್ಷರಾದ ಮುಹಮ್ಮದ್ ಹಾಜಿ ಪುನರೂರು ವಹಿಸಿದ್ದರು.
ಸಮಾರಂಭದಲ್ಲಿ ಪುನರೂರು ಮುಹಮ್ಮದೀಯ ಜುಮಾ ಮಸೀದಿಯ ಬೆಳವಣಿಗೆಯಲ್ಲಿ ಶ್ರಮಿಸಿದ ಅಬ್ದುಲ್ ರಶೀದ್ ಲತೀಫ್, ಅಹ್ಮದ್ ಬಾವ ಅವರನ್ನು ಅತಿಥಿಗಳು ಸನ್ಮಾನಿಸಿ ಗೌರವಿಸಲಾಯಿತು.
ಕಲ್ಕರೆ ಮಿಸ್ಬಾಹುಲ್ ಮದೀನದ ಪ್ರಾಂಶುಪಾಲರಾದ ಎ.ಪಿ. ಅಬ್ದುಲ್ಲಾ ಮದನಿ, ಕಿನ್ನಿಗೋಳಿ ಮುಹಿಯುದ್ದೀನ್ ಜುಮಾ ಮಸೀದಿಯ ಖತೀಬ್ ಅಬ್ದುಲ್ ಲತೀಫ್ ಸಖಾಫಿ, ಗುತ್ತಕಾಡು ಕೆ.ಜೆ.ಎಂ. ಜುಮಾ ಮಸೀದಿಯ ಖತೀಬ್ ಉಮರುಲ್ ಫಾರೂಕ್ ಸಖಾಫಿ, ಅಂಗರಗುಡ್ಡೆ ಬಿ.ಜೆ.ಎಂ.ಜುಮಾ ಮಸೀದಿಯ ಖತೀಬರಾದ ಝೈನಿದ್ದೀನ್ ಯಮಾನಿ, ಪುನರೂರು ಎಂ.ಜೆ.ಎಂ. ಗೌರವಾಧ್ಯಕ್ಷ ಪಿ.ಎಸ್. ಅಬ್ದುಲ್ ಹಮೀದ್ ಮಿಲನ್, ಉಪಾಧ್ಯಕ್ಷ ಪಿ.ಎಸ್. ಅಬ್ದುಲ್ ರಶೀದ್ ಲತೀಫ್, ಪ್ರಧಾನ ಕಾರ್ಯದರ್ಶಿ ಪಿ.ಎಸ್. ಹಸನ್ ರಶೀದ್, ಗುತ್ತಕಾಡು ಕೆ.ಜೆ.ಎಂ. ಅಧ್ಯಕ್ಷ ಜೆ.ಎಚ್. ಜಲೀಲ್, ಕಿನ್ನಿಗೋಳಿ ಎಂ.ಜೆ.ಎಂ. ಅಧ್ಯಕ್ಷ ಟಿ.ಎಚ್. ಮಯ್ಯದ್ದಿ, ಪಕ್ಷಿಕೆರೆ ಬಿ.ಜೆ.ಎಂ. ಅಧ್ಯಕ್ಷ ಅಲ್ ಹಾಜ್ ಕೆ.ಯು. ಮುಹಮ್ಮದ್ ನೂರಾನಿಯಾ, ಅಂಗರಗುಡ್ಡೆ ಬಿ.ಜೆ.ಎಂ. ಅಧ್ಯಕ್ಷರಾದ ಅಬ್ದುಲ್ ರಹಮಾನ್ ಹಾಜಿ, ಪುನರೂರು ಮೊಹಿಯುದ್ದೀನ್ ಯಂಗ್ ಮೆನ್ಸ್ ಅಸೋಶಿಯೇಷನ್ ಅಧ್ಯಕ್ಷ ಶಬೀರ್ ಕಾಪಿಕಾಡು, ಕಾರ್ಯದರ್ಶಿ ಪಿ.ಎಸ್. ಅಫ್ತಾಬ್ ಅಹಮದ್ ಮಿಲನ್ ಮೊದಲಾದವರು ಉಪಸ್ಥಿತರಿದ್ದರು.