ಹುಬ್ಬಳ್ಳಿ.ಅಖಿಲ ಭಾರತ ಮಾಧ್ವ ಮಹಾಮಂಡಳ ಉಡುಪಿ ಕೇಂದ್ರ ಕಚೇರಿ ಮತ್ತು ಹುಬ್ಬಳ್ಳಿ ಶಾಖೆಯ ಸಹಯೋಗದಲ್ಲಿ ದಿ. ೧೧ ಮತ್ತು ೧೨ ಈ ಎರಡು ದಿನಗಳಲ್ಲಿ ಉಡುಪಿ ಅಧೋಕ್ಷಜ ಪೀಠದ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರ ಷಷ್ಟಬ್ದಿ ಅಭಿವಂದನಾ ಸಮಾರಂಭ ಹಾಗೂ ಸಂತ ಸಂಗಮ ಅಲ್ಲದೇ ಶತಮನ ಕಂಡ ಮಹೋಪಾಧ್ಯಾಯ,
ದಾಲ್ಮಿಯಾ, ರಾಷ್ಟç ಪ್ರಶಸ್ತಿ ವಿಜೇತರಾದ ಖ್ಯಾತ ಕವಿ. ವಿದ್ವಾಂಸರಾದ ಪಂ. ಪಂಢರೀನಾಥಾಚಾರ್ಯರ ಜನ್ಮ ಶತಮಾನೋತ್ಸವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿಅರುಣ್ ಅನಂತ್ ರಾಜ್ ಭಟ್ ಹೇಳಿದರು. ನಂತರ ಮಾತನಾಡಿದ ಅವರುದಿನಾಂಕ ೧೧.ಬುಧವಾರದಂದು ಮಧ್ಯಾಹ್ನ ೩ಕ್ಕೆ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಉದ್ಘಾಟನಾ ಸಮಾರಂಭ ಜರುಗಲಿದೆ. ಮಧ್ಯಾಹ್ನ ೩.೩೦ಕ್ಕೆ, ನಿತ್ಯ ಕರ್ಮಾನುಷ್ಠಾನ- ಸಮಸ್ಯೆ ಮತ್ತು ಪರಿಹಾರ ವಿಷಯ ಕುರಿತಂತೆ ಸಂವಾದ ಕಾರ್ಯಕ್ರಮ ಜರುಗಲಿದ್ದು,
ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದ ಡಾ. ಎಚ್. ಸತ್ಯನಾರಾಯಣ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಪಂ. ಜಯತೀರ್ಥಾಚಾರ್ಯ ಹುಂಡೇಕಾರ, ಪಂ. ಭೀಮಸೇನಾಚಾರ್ಯ ಮಳಗಿ ವೇಣುಗೋಪಾಲ ಅಗ್ನಿಹೋತ್ರಿ, ಪಂ. ರವಿಯಾಚಾರ್ಯ ಮತ್ತಿಹಳ್ಳಿ, ಪಂ. ಮಾತರಿಶ್ವಾಚಾರ್ಯ ಮತ್ತು ಅಕ್ಷಯ ಉಡುಪ ಇವರು ಪಾಲ್ಗೊಳ್ಳಲಿದ್ದಾರೆ. ಸಂಜೆ ೫.೩೦ಕ್ಕೆ ವಿದ್ವಾಂಸರಾದ ರಘೂತ್ತಮಾಚಾರ್ಯ ನಾಗಸಂಪಗಿ, ನಾರಾಯಣಾಚಾರ್ಯ ಧೂಳಖೇಡ, ಸತ್ಯಮೂರ್ತಿ ಆಚಾರ್ಯ, ಸಮೀರಾಚಾರ್ಯ ಕಂಠಪಲ್ಲಿ ಉಪನ್ಯಾಸ ಕಾರ್ಯಕ್ರಮ ಜರುಗಲಿದೆ.
ದಿ. ೧೨ ರಂದು ಬೆಳಗ್ಗೆ ೮.೩೦ಕ್ಕೆ ಚಕ್ರಾಬ್ದ ಮಂಡಳ ಮಹಾಪೂಜೆ ನೆರವೇರಲಿದೆ. ಅಲ್ಲದೇ ಶ್ರೀಕೃಷ್ಣದೇವರಿಗೆ ಮತ್ತು ರಾಯರಿಗೆ ವಿಶೇಷ ಅಭಿಷೇಕಾದಿಗಳು ನಡೆಯಲಿವೆ. ಬೆಳಗ್ಗೆ ೯.೩೦ ರಿಂದ ವಿವಿಧ ವಿದ್ವಾಂಸರಿಂದ ಉಪನ್ಯಾಸ ಕಾರ್ಯಕ್ರಮ ಜರುಗಲಿದ್ದು, ವಿದ್ವಾನ್ ಕೊರ್ಲಹಳ್ಳಿ ನರಸಿಂಹಾಚಾರ್ಯ ಡಾ. ಎಚ್. ಸತ್ಯನಾರಾಯಣಾಚಾರ್ಯ, ಪಂ. ವಾದಿರಾಜಾಚಾರ್ಯ ತಡಕೋಡ, ಪಂ. ಪ್ರದ್ಯುಮ್ನಾಚಾರ್ಯ ಜೋಶಿ ಅಲ್ಲದೇ ಪಂ. ಶ್ರೀಹರಿಯಾಚಾರ್ಯ ವಾಳ್ವೇಕರ ಇವರು ಪಾಲ್ಗೊಳ್ಳಲಿದ್ದಾರೆ.
ಮಧ್ಯಾಹ್ನ ಅಧೋಕ್ಷಜ ಪೀಠದ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನತೀರ್ಥ ಶ್ರೀಪಾದರ ಷಷ್ಟಬ್ದಿ ಪ್ರಯುಕ್ತ ತುಲಾಭಾರ ನಡೆಯಲಿದ್ದು, ನಂತರ ಅನುಗ್ರಹ ಸಂದೇಶ ನಡೆಯಲಿದೆ. ಮಧ್ಯಾಹ್ನ ೩.೩೦ ರಿಂದ ಮಹೋಪಾಧ್ಯಾಯ ಎ. ಹರಿದಾಸ ಭಟ್, ಪಂ. ಆನಂದತೀಥಾಚಾರ್ಯ ನಾಗಸಂಪಗಿ ವಿದ್ಯಾ ವಾಚಸ್ಪಪತಿ ಅರಳುಮಲ್ಲಿಗೆ ಪಾರ್ಥ ಸಾರಥಿ, ವಿದ್ವಾನ್ ಗೋಪಿನಾಥಾಚಾರ್ಯ ಗಲಗಲಿ, ವೆಂಕಟನರಸಿAಹ ಜೋಶಿ ಇವರಿಂದ ಉಪನ್ಯಾಸಾದಿ ಕಾರ್ಯಕ್ರಮಗಳು ಜರುಗಲಿ ದೇಶಪಾಂಡೆ ನಗರದ ಸವಾಯಿ ಗಂಧರ್ವ ಹಾಲ್ನಲ್ಲಿ ಸಂಜೆ ೫ಕ್ಕೆ `ಸಂತ ಸಂಗಮ’ ಕಾರ್ಯಕ್ರಮ ಜರುಗಲಿದ್ದು ನಾಡಿನ ವಿವಿಧ ಮಠಾಧೀಶರು ಆಗಮಿಸಲಿದ್ದಾರೆ.
ಹುಬ್ಬಳ್ಳಿಯ ಮೂರುಸಾವಿರ ಮಠದ ಶ್ರೀಗುರುಸಿದ್ದ ರಾಜಯೋಗೀಂದ್ರ ಸ್ವಾಮಿಗಳು, ಶ್ರೀಮದುಜ್ಜಯನಿ ಸದ್ಧರ್ಮ ಸಿಂಹಾಸನಾಧೀಶರ ಶ್ರೀ ತರಳಬಾಳು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು, ಕೂಡಲಸಂಗಮದ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯಮೃತ್ಯುಂಜಯ ಸ್ವಾಮಿಗಳು, ಬೆಳಗಾವಿ ಹುಕ್ಕೇರಿ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು,
ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ, ಚಿತ್ರದುರ್ಗದ ಬಸವಮೂರ್ತಿ ಮಾದಾಯ ಚನ್ನಯ್ಯ ಸ್ವಾಮೀಜಿ, ರಬಕವಿ ಸಂಶಿಯ ಗುರುದೇವ ಬ್ರಹ್ಮಾನಂದ ಆಶ್ರಮದ ಗುರುಸಿದ್ದೇಶ್ವರ ಮಹಾಸ್ವಾಮಿಗಳು, ಕುಂದಗೋಳದ ಕಲ್ಯಾಣಪುರ ಮಠದ ಬಸವಣ್ಣಜ್ಜನವರು ಪಾವಗಡದ ರಾಮಕೃಷ್ಣಾಶ್ರಮದ ಜಪಾನಂದಜೀ ಮಹಾರಾಜ ಅಲ್ಲದೇ ರಾಯಾಪುರದ ಇಸ್ಕಾನ್ ಅಧ್ಯಕ್ಷರಾದ ರಾಜೀವಲೋಚನದಾಸ್ ಇವರು ಆಗಮಿಸಲಿದ್ದಾರೆ.
ಇದಲ್ಲದೇ ಗೋಕರ್ಣ ಪರ್ತಗಾಳಿ ಮಠದ ವಿದ್ಯಾಧೀಶತೀಥ ಶ್ರೀಪಾದರು. ತುಮಕೂರು ಹಿರೇಮಠದ ಡಾ. ಶಿವಾನಂದ ಶಿವಾಚಾರ್ಯರು, ವಿಜಯಪುರ ಜ್ಞಾನಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮಿಗಳು, ಹುಬ್ಬಳ್ಳಿ ರಾಮಕೃಷ್ಣ ಮಠದ ರಘುವೀರಾನಂದ ಸ್ವಾಮೀಜಿ, ಇವರು ಕೂಡ ಆಗಮಿಸಲಿದ್ದಾರೆ.
ವಿಶೇಷ ಆಹ್ವಾನಿತರಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಹುಬ್ಬಳ್ಳಿ-ಧಾರವಾಡ ಮಹಾನಗರಪಾಲಿಕೆಯ ಮಹಾಪೌರ ವೀಣಾ ಭಾರದ್ವಾಡ, ವಿಜಯಪುರ ಶಾಸಕ ಹಾಗೂ ಮಾಜಿ ಕೇಂದ್ರ ಸಚಿವ ಬಸನಗೌಡ ಪಾಟೀಲ ಯತ್ನಾಳ, ಹು-ಧಾ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ, ಜೆಎಸ್ಎಸ್ ಕಾಲೇಜಿನ ಅಜೀತ ಪ್ರಸಾದ ಇವರು ಆಗಮಿಸಲಿದ್ದಾರೆ.
ದೇಶದ ಖ್ಯಾತ ವಿದ್ವಾಂಸರಾಗಿದ್ದ ಕೀರ್ತಿಶೇಷ ಪಂಢರಿನಾಥಾಚಾರ್ಯ ಗಲಗಲಿ ಅವರ ಜನ್ಮಶತಮಾನೋ ತ್ಸವದ ಸ್ಮರಣೆಯಲ್ಲಿ ಅವರ ಕುಟುಂಬದವರಿಗೆ ಮತ್ತು ಕೀರ್ತಿ ಶೇಷ, ಭೀಮಾಚಾರ್ಯ ಬಾಳಾಚಾರ್ಯ ಬಾಗಲಕೋಟೆ ಕುಟುಂಬದವರಿಗೆ ಇದೇ ಸಂದರ್ಭ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರಿಂದ ಸನ್ಮಾನ ನಡೆಯಲಿದೆ ಈ ಕಾರ್ಯಕ್ರಮಕ್ಕೆ ಸರ್ವರಾದಮಿಸಬೇಕೆಂದು ಕೋರಿದರುಈ ಪತ್ರಿಕಾಗೋಷ್ಠಿಯಲ್ಲಿ
ಕೃಷ್ಣರಾಜ್ ,ಶ್ರೀಪಾದ್ ಸಿಂಗನಮನಿ ಗುರುರಾಜ್ ಬಾಗಲಕೋಟೆ, ಹಾಗೂ ಪ್ರಮುಖರು ಉಪಸ್ಥಿತರಿದ್ದರು.
The post ಪೇಜಾವರ ಶ್ರೀಗಳ ಸಸ್ತಾಬ್ದಿ ಸಮಾರಂಭ ಪ್ರಪ್ರಥಮವಾಗಿ ಹುಬ್ಬಳ್ಳಿಯಲ್ಲಿ ಸಂತ ಸಮಾವೇಶ appeared first on Ain Live News.