ಬಳ್ಳಾರಿ: ಬ್ರೂಸ್ ಪೇಟೆ ಪೋಲೀಸರಿಂದ ಯಶಸ್ವಿ ಕಾರ್ಯಚರಣೆ ನಡೆಸಿ ಕಳ್ಳತನವನ್ನೆ ವೃತಿಯಾಗಿಸಿ ಕೊಂಡಿದ್ದ ಖದೀಮರನ್ನು ಬಂಧಿಸಿದ್ದಾರೆ. ಮಾಧುಬಾಬು & ಅನಿಲ್ ಕುಮಾರ್ ಬಂಧಿತ ಆರೋಪಿಗಳಾಗಿದ್ದು, ಆರೋಪಿಗಳಿಂದ 4 ದೊಡ್ಡ ಬ್ಯಾಟರಿಗಳು, 2 ಸಣ್ಣ ಬ್ಯಾಟರಿಗಳು ಮತ್ತು 2 ಇನ್ವರ್ಟರ್ಗಳು ಹಾಗೂ ವಿವಿಧ ಕಂಪನಿಯ ಸುಮಾರು 60 ಸಿಲೆಂಡರ್ ಗಳು, ಕೃತ್ಯಕ್ಕೆ ಬಳಸಿದ ಆಟೋವನ್ನು ವಶಕ್ಕೆ ಪಡೆಯಲಾಗಿದೆ.
ನಗರದ ಹೊಸ ಬಸ್ಟಾಂಡ್ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ಬ್ರೂಸ್ ಪೇಟೆ ಪೋಲಿಸರ ಬಲೆಗೆ ಬಿದ್ದಿದ್ದಾರೆ. ಹೊಸ ಬಸ್ ಸ್ಟಾಂಡ್ ಸುತ್ತಾ ಅನುಮಾನಸ್ಪದವಾಗಿ ಆಟೋ ಸಂಚರಿಸುವುದನ್ನ ಗಮನಿಸಿ ಪೋಲೀಸರು ಕೂಡಲೇ ಆಟೋ ತಡೆದು ಪರಿಶೀಲಿಸಿದಾಗ ಪ್ರಕರಣ ಬೆಳೆಕಿಗೆ ಬಂದಿದೆ.
ನಗರದ ವಿವಿಧ ಭಾಗಗಳಲ್ಲಿ ಆಟೋದಲ್ಲಿ ಸಂಚರಿಸಿ ಕಳ್ಳತನಕ್ಕೆ ಪ್ಲಾನ್ ಮಾಡುತ್ತಿದ್ದರಂತೆ. ನಗರದ ಟೈಮ್ಸ್ ಶಾಪಿನಲ್ಲಿ ಬ್ಯಾಟರಿ ಮತ್ತು ಇನ್ ವೇಟರ್ಗಳನ್ನು ಕಳ್ಳತನ ಮಾಡಿರುವುದಾಗಿ ಕಳ್ಳರು ಒಪ್ಪಿಕೊಂಡಿದ್ದಾರೆ. ಈ ಕಾರ್ಯಚರಣೆಯಲ್ಲಿ ಪಾಲ್ಗೊಂಡ ಇಲಾಖೆಯ ಸಿಬ್ಬಂದಿಗೆ ಎಸ್ಪಿ ರಂಜಿತ್ ಕುಮಾರ್ ಬಂಡಾರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
The post ಪೋಲೀಸರಿಂದ ಯಶಸ್ವಿ ಕಾರ್ಯಚರಣೆ: ರಾತ್ರಿ ವೇಳೆ ಕಳ್ಳತನ ಮಾಡುತ್ತಿದ್ದ ಖದೀಮರ ಬಂಧನ appeared first on Ain Live News.