Home ರಾಜಕೀಯ ಪ್ರಜ್ವಲ್ ರೇವಣ್ಣನನ್ನು ಹಿಡಿದು ಕೊಟ್ಟವರಿಗೆ 1ಲಕ್ಷ ರೂ.ಘೋಷಿಸಿದ ಜನತಾ ಪಕ್ಷ

ಪ್ರಜ್ವಲ್ ರೇವಣ್ಣನನ್ನು ಹಿಡಿದು ಕೊಟ್ಟವರಿಗೆ 1ಲಕ್ಷ ರೂ.ಘೋಷಿಸಿದ ಜನತಾ ಪಕ್ಷ

42
0
Janata Party announced Rs 1 lakh to those who caught Prajwal Revanna

ಬೆಂಗಳೂರು : ಲೈಂಗಿಕ ಹಗರಣದ ಆರೋಪಿಯಾದ ಸಂಸದ ಪ್ರಜ್ವಲ್ ರೇವಣ್ಣ ತಲೆಮರೆಸಿಕೊಂಡಿದ್ದು ಇಂಟರ್ ಪೋಲ್ ಮೂಲಕ ಪ್ರಕಟಣೆ ಹೊರಡಿಸಿದ್ದು, ಸದರಿ ಆರೋಪಿಯನ್ನು ಹುಡುಕಿಕೊಟ್ಟವರಿಗೆ ಜನತಾ ಪಕ್ಷದ ವತಿಯಿಂದ 1 ಲಕ್ಷ ರೂ.ಬಹುಮಾನ ನೀಡುವ ಬಗ್ಗೆ ಪೋಸ್ಟರ್ ಬಿಡುಗಡೆ ಮಾಡಲಾಯಿತು.

ಶನಿವಾರ ಜನತಾ ಪಕ್ಷದ ಕಾರ್ಯಕರ್ತರು ನಗರದ ರೆಡ್ಡಿ ಪೆಟ್ರೋಲ್ ಬಂಕ್, ಶಿವಾನಂದ ವೃತ್ತ, ಚಾಲುಕ್ಯ ಸರ್ಕಲ್, ಮೌರ್ಯ, ಆನಂದ್‍ರಾವ್ ಸರ್ಕಲ್ ಸೇರಿದಂತೆ ಹಲವೆಡೆ ಸಂಸದ ಪ್ರಜ್ವಲ್ ರೇವಣ್ಣ ‘ವಾಂಟೆಡ್ ಪೋಸ್ಟರ್’ ಅನ್ನು ಅಂಟಿಸುವ ಮೂಲಕ ಅಭಿಯಾನ ಆರಂಭಿಸಿದರು. ಇದೇ ವೇಳೆ ಪೊಲೀಸರು ಪೋಸ್ಟರ್ ಗಳನ್ನ ತೆರವುಗೊಳಿಸಿ ಕಾರ್ಯಕರ್ತರನ್ನು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಜನತಾ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶ ಅಬ್ದುಲ್‍ರೌಫ್, ಪ್ರಧಾನ ಕಾರ್ಯದರ್ಶಿ ನಾಗೇಶ್ ಎನ್., ಮಹಿಳಾ ಮುಖಂಡರಾದ ವಾಣಿ.ಎನ್.ಸೆಟ್ಟಿ, ನಳಿನಿಗೌಡ, ರಾಜ್ಯ ಉಪಾಧ್ಯಕ್ಷ ಚಂದ್ರಕಾಂತ್ ಸಾಹೂ, ಸಂಘಟನಾ ಕಾರ್ಯದರ್ಶಿ ಡಿ.ಮಂಜುನಾಥ್, ರವಿಕುಮಾರ್, ಗಿರೀಶ್‍ಕುಮಾರ್ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here