ಪುತ್ತೂರು: ರೆಂಜಲಾಡಿಯ ಇಸ್ಲಾಮಿಕ್ ಸೆಂಟರ್(ಆರ್ಐಸಿ) ವತಿಯಿಂದ ಬೃಹತ್ ಆಧ್ಯಾತ್ಮಿಕ ಸಂಗಮ `ನೂರೇ ಅಜ್ಮೀರ್’ ಕಾರ್ಯಕ್ರಮ ಫೆ.10ರಂದು ನಡೆಯಲಿದೆ. ಉಸ್ತಾದ್ ವಲಿಯುದ್ದೀನ್ ಫೈಝಿ ಕಾರ್ಯಕ್ರಮದ ನೇತೃತ್ವ ವಹಿಸಲಿದ್ದಾರೆ ಎಂದು ಕರ್ನಾಟಕ ರಾಜ್ಯ ದಾರಿಮಿ ಉಲಮಾ ಒಕ್ಕೂಟದ ಅಧ್ಯಕ್ಷ ಎಸ್.ಬಿ.ಮುಹಮ್ಮದ್ ದಾರಿಮಿ ತಿಳಿಸಿದ್ದಾರೆ.
ಅವರು ಗುರುವಾರ ಪುತ್ತೂರು ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಲಕ್ಷಾಂತರ ಜನರಿಗೆ ಶಾಂತಿ, ಸಮಾಧಾನ ಹಾಗೂ ನೆಮ್ಮದಿಯ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗುವ ವಿಶ್ವಾಸಿಗಳ ಸಾಂತ್ವನದ ಭರವಸೆಯ ಬೆಳಕು ಹಾಗೂ ವಿಶೇಷ ಆಧ್ಯಾತ್ಮಿಕತೆಯ ಚೈತನ್ಯ ನೀಡುವ, ಕೇರಳದ ಖ್ಯಾತ ವಿದ್ವಾಂಸ ಉಸ್ತಾದ್ ವಲಿಯುದ್ದೀನ್ ಫೈಝಿ ವಾಯಕ್ಕಾಡ್ ಅವರ ನೇತೃತ್ವದಲ್ಲಿ ನಡೆಯುವ `ನೂರೇ ಅಜ್ಮೀರ್’ ಖ್ಯಾತಿಯ ಆಧ್ಯಾತ್ಮಿಕ ಸಂಗಮ ಕಾರ್ಯಕ್ರಮ ದೇಶ ವಿದೇಶಗಳಲ್ಲಿ ಪ್ರಸಿದ್ಧಿ ಪಡೆದಿದ್ದು, ಬಡ ಮಕ್ಕಳ ಶಿಕ್ಷಣಕ್ಕೆ ಸಹಾಯ ನೀಡುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ.
ರೆಂಜಲಾಡಿ ಹುಸೈನ್ ದಾರಿಮಿ ಅವರ ನೇತೃತ್ವದ ರೆಂಜಲಾಡಿ ಇಸ್ಲಾಮಿಕ್ ಸಂಟೆರ್ ವತಿಯಿಂದ ಫೆ.10ರಂದು ಸಂಜೆ 7 ರಿಂದ ಉಸ್ತಾದ್ ವಲಿಯುದ್ದೀನ್ ಫೈಝಿ ವಾಯಕ್ಕಾಡ್ ಅವರ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ದ.ಕ.ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಉಸ್ತಾದ್, ಎನ್.ಪಿ.ಯಂ ಝೈನುಲ್ ಅಬಿದೀನ್ ತಂಙಳ್ ಕುನ್ನುಂಗೈ, ಸಯ್ಯದ್ ಸಫ್ವಾನ್ ತಂಙಳ್ ಏಯ್ಮಲ, ಸಯ್ಯಿದ್ ಅಹ್ಮದ್ ಪೂಕೋಯ ತಂಙಳ್ ಪುತ್ತೂರು, ಸಯ್ಯಿದ್ ಅಲವೀ ತಂಙಳ್ ಓಲೆ ಮುಂಡೋವು, ಮಹ್ಮೂದುಲ್ ಫೈಝಿ ಓಲೆಮುಂಡೋವು ಮತ್ತಿತರ ಧಾರ್ಮಿಕ ಉಲಮಾಗಳು, ಸಾದಾತ್ಗಳು, ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್, ಉದ್ಯಮಿಗಳಾದ ಇನಾಯಿತ್ ಅಲಿ ಮುಲ್ಕಿ, ಅಶ್ರಫ್ ಶಾ ಮಾಂತೂರು ದುಬೈ, ಅಬ್ದುಲ್ ಖಾದರ್ ಹಾಜಿ ಬೆಂಗಳೂರು, ಕೆ.ಪಿ.ಅಹ್ಮದ್ ಹಾಜಿ ಪುತ್ತೂರು, ಅಬ್ದುಲ್ ಲತೀಫ್ ಗುರುಪುರ, ಇಕ್ಬಾಲ್ ಕೋಲ್ಪೆ ಮತ್ತಿತರ ಸಾಮಾಜಿಕ, ವಿವಿಧ ಸಂಘ ಸಂಸ್ಥೆಗಳ ನಾಯಕರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಪ್ರಯುಕ್ತ ಫೆ.9ರಂದು ರಾತ್ರಿ ಕೇರಳದ ಖ್ಯಾತ ಗಾಯಕ ಅಬ್ದುಸ್ಸಮದ್ ದಾರಿಮಿ ಕೊಳತ್ತರ ಮತ್ತು ಬಳಗದಿಂದ ಇಸ್ಲಾಮಿಕ್ ಕಥಾ ಪ್ರಸಂಗ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಎಸ್ಕೆಎಸ್ಸೆಸ್ಸೆಫ್ ದ.ಕ.ಜಿಲ್ಲಾ ಕಾರ್ಯದರ್ಶಿ ಅಬ್ದುಲ್ ಕರೀಂ ದಾರಿಮಿ, ರೆಂಜಲಾಡಿ ಜುಮ್ಮಾ ಮಸೀದಿ ಪ್ರಧಾನ ಕಾರ್ಯದರ್ಶಿ ಝೈನುದ್ದೀನ್ ಹಾಜಿ, ಸ್ವಾಗತ ಸಮಿತಿಯ ಅಧ್ಯಕ್ಷ ಉಮರ್ ಸುಲ್ತಾನ್ ರೆಂಜಲಾಡಿ, ಸ್ವಾಗತ ಸಮಿತಿಯ ಸಂಯೋಜಕ ಪಿ.ಕೆ.ಮುಹಮ್ಮದ್ ಉಪಸ್ಥಿತರಿದ್ದರು.